Saturday, January 27, 2024

ಪೂರ್ವದ ಹಳಗನ್ನಡದ ಕಾಲದಿಂದ ಈಗಿನವರೆಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟು ಎಷ್ಟು ಇದ್ದಿರಬಹುದು?

 ಈಗಿನ ಮಟ್ಟಿಗೆ (2023) ಭಾರತದ ಜನಸಂಖ್ಯೆ 143 ಕೋಟಿ. ಅದರಲ್ಲಿ ಕರ್ನಾಟಕದ ಜನಸಂಖ್ಯೆ 6.8 ಕೋಟಿ ಮತ್ತು ಕನ್ನಡಿಗರ (ಮಾತೃಭಾಷೆ ಆಗಿರುವ + ಮಾತನಾಡಬಲ್ಲ) ಜನಸಂಖ್ಯೆ 600 ಲಕ್ಷ.

ಕನ್ನಡ ಭಾಷೆಗೆ ಸುಮಾರು 2500 ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾರಂಭದಲ್ಲಿ ಕನ್ನಡಿಗರ ಜನಸಂಖ್ಯೆ ಎಷ್ಟು ಇದ್ದಿರಬಹುದು ಎಂದು ನಾನು ಅನೇಕ ಸಾರಿ ಯೋಚಿಸುತ್ತಿದ್ದೆ. ಈಗಿನ ಭಾರತದ ಜನಸಂಖ್ಯೆಯ ಎಷ್ಟು ಪ್ರತಿಶತ ಕನ್ನಡಿಗರು ಇದ್ದಾರೋ ಅದೇ ಪ್ರಮಾಣದಲ್ಲಿ ಚರಿತ್ರೆಯ ಕಾಲದ ಭಾರತದ ಜನಸಂಖ್ಯೆಯ ಆಧಾರದ ಮೇಲೆ ಕನ್ನಡಿಗರ ಸಂಖ್ಯೆಯ ಅಂದಾಜು ಮಾಡಿದೆ.

ಅದರ ಫಲಿತಾಂಶ ಹೀಗಿದೆ:

ವರ್ಷ—ಭಾರತ(ಕೋಟಿ)— ಕನ್ನಡಿಗರು (ಲಕ್ಷ)

————————————————————-

ಕ್ರಿಪೂ5೦೦ — 2.5— 10

ಕ್ರಿಪೂ4೦೦ — 2.8— 12

ಕ್ರಿಪೂ2೦೦ — 3.3— 14

ಕ್ರಿಶ 1 — 4.6 — 19

200 — 4.7 — 20

400 — 4.6 — 19

500 — 4.7 — 20

600 — 4.8 — 20

700 — 5.1 — 21

800 — 5.1 — 21

900 — 5.1 — 21

1000 — 5.2 — 22

1100 — 5.6 — 23

1200 — 6.2 — 26

1300 — 6.7 — 29

1400 — 7.2 — 30

1500 — 7.7 — 32

1600 — 10 — 42

1700 — 13.4 — 56

1800 — 17 — 71

1900 — 24 — 100

1911 — 25.2 — 116

1921 — 25.1 — 115

1931 — 27.9 — 129

1941 — 31.9 — 148

1947 — 36 — 166

1951 — 36.1 — 167

1961 — 43.9 — 203

1971 — 54.8 — 253

1981 — 68.3 — 320

1991 — 84.6 — 388

2001 — 102.9 — 456

2011 — 121.0 — 527

2021 — 139.0 — 583

2023 — 143.0 — 600

----------------------——————-

ಈ ಲೆಕ್ಕಾಚಾರದ ಸಾರಾಂಶ ಏನೆಂದರೆ, ಇತಿಹಾಸದ ಪ್ರಸಿದ್ಧ ಕಾಲಘಟ್ಟಗಳಲ್ಲಿ ಕನ್ನಡಿಗರ ಅಂದಾಜು ಜನಸಂಖ್ಯೆ ಹೀಗಿತ್ತು:

ಗೌತಮ ಬುದ್ಧ/ಮಹಾವೀರನ ಕಾಲದಲ್ಲಿ 10 ಲಕ್ಷ,

ಅಶೋಕ ಚಕ್ರವರ್ತಿಯ ಕಾಲದಲ್ಲಿ 14 ಲಕ್ಷ,

ಹಳೆಗನ್ನಡದ ಕಾಲದಲ್ಲಿ 20–25 ಲಕ್ಷ,

ಕದಂಬರು/ಗಂಗರು/ಬಾದಾಮಿ ಚಾಲುಕ್ಯರು/ರಾಷ್ಟ್ರಕೂಟರ ಕಾಲದಲ್ಲಿ 20–22 ಲಕ್ಷ,

ಕಲ್ಯಾಣ ಚಾಲುಕ್ಯರ ಕಾಲದಲ್ಲಿ 22–26 ಲಕ್ಷ,

ತಾಳಗುಂದ/ಹಲ್ಮಿಡಿ ಶಾಸನದ ಕಾಲದಲ್ಲಿ 20 ಲಕ್ಷ,

ಶ್ಯಾಮಕುಂದಾಚಾರ್ಯರ ಕಾಲದಲ್ಲಿ 20 ಲಕ್ಷ,

ಆದಿಕವಿ ಪಂಪನ ಕಾಲದಲ್ಲಿ 20 ಲಕ್ಷ,

ಕಾಳಿದಾಸನ ಕಾಲದಲ್ಲಿ 20 ಲಕ್ಷ,

ಇಮ್ಮಡಿ ಪುಲಿಕೇಶಿ ಕಾಲದಲ್ಲಿ 20 ಲಕ್ಷ,

ಶಂಕರಾಚಾರ್ಯರ ಕಾಲದಲ್ಲಿ 21 ಲಕ್ಷ,

ಚಾವುಂಡರಾಯನ ಕಾಲದಲ್ಲಿ 22 ಲಕ್ಷ,

ರಾಮಾನುಜಾಚಾರ್ಯರ ಕಾಲದಲ್ಲಿ 24 ಲಕ್ಷ,

ವಿಷ್ಣುವರ್ಧನನ ಕಾಲದಲ್ಲಿ 24 ಲಕ್ಷ,

ನಡುಗನ್ನಡದ ಕಾಲದಲ್ಲಿ 25–90 ಲಕ್ಷ,

ಬಸವಣ್ಣನವರ ಕಾಲದಲ್ಲಿ 25 ಲಕ್ಷ,

ಹರಿಹರನ ಕಾಲದಲ್ಲಿ 25 ಲಕ್ಷ,

ಕೊಂಕಣಿಗರು ಕರ್ನಾಟಕಕ್ಕೆ ಬಂದಾಗ 25 ಲಕ್ಷ,

ಮಧ್ವಾಚಾರ್ಯರ ಕಾಲದಲ್ಲಿ 30 ಲಕ್ಷ,

ಹಕ್ಕಬುಕ್ಕರ ಕಾಲದಲ್ಲಿ 30 ಲಕ್ಷ,

ಯದುರಾಯ ಒಡೆಯರ್ ಕಾಲದಲ್ಲಿ 30 ಲಕ್ಷ,

ಕೃಷ್ಣದೇವರಾಯನ ಕಾಲದಲ್ಲಿ 32 ಲಕ್ಷ,

ವಾಸ್ಕೋ ಡಗಾಮ ಕಾಲದಲ್ಲಿ 32 ಲಕ್ಷ,

ಗುರುನಾನಕ್ ಬೀದರಿಗೆ ಬಂದಾಗ 32 ಲಕ್ಷ,

ಪುರಂದರ/ಕನಕದಾಸರ ಕಾಲದಲ್ಲಿ 35 ಲಕ್ಷ,

ಅಕ್ಬರ್ ಕಾಲದಲ್ಲಿ 42 ಲಕ್ಷ,

ಈಸ್ಟ್ ಇಂಡಿಯಾ ಕಂಪನಿ ಬಂದಾಗ 42 ಲಕ್ಷ,

ಶಿವಾಜಿ ಕಾಲದಲ್ಲಿ 55 ಲಕ್ಷ,

ಟಿಪ್ಪು ಕಾಲದಲ್ಲಿ 70 ಲಕ್ಷ,

ಕನ್ನಡದ ಮೊದಲ ಪುಸ್ತಕ (A grammar of the Kurnata language) ಮುದ್ರಣಗೊಂಡಾಗ 75 ಲಕ್ಷ,

ಕಿತ್ತೂರು ಚೆನ್ನಮ್ಮನ ಕಾಲದಲ್ಲಿ 75 ಲಕ್ಷ,

ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 90 ಲಕ್ಷ,

ಕಿಟ್ಟೆಲ್ ನಿಘಂಟು ಮುದ್ರಣಗೊಂಡಾಗ 98 ಲಕ್ಷ,

ಪ್ಲೇಗ್ ಕಾಲದಲ್ಲಿ 100 ಲಕ್ಷ,

ಕನ್ನಡದ ಮೊದಲ ಪತ್ರಿಕೆ (ಮಂಗಳೂರ ಸಮಾಚಾರ) ಪ್ರಾರಂಭದಲ್ಲಿ 100 ಲಕ್ಷ,

ಕನ್ನಂಬಾಡಿ ಕಟ್ಟೆ ಕಟ್ಟಿದ ಕಾಲದಲ್ಲಿ 130 ಲಕ್ಷ,

ಹಾಗೂ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 140 ಲಕ್ಷ ಇತ್ತು.


920 ನೇ ಇಸವಿಯ ವಡ್ಡಾರಾಧನೆ ಲಭ್ಯವಿರುವ ಕನ್ನಡದ ಗ್ರಂಥಗಳಲ್ಲಿ ಮೊದಲನೆಯದು. ಆದರೆ ಏಳನೇ ಶತಮಾನದಲ್ಲಿ ಶ್ಯಾಮಕುಂದಾಚಾರ್ಯರು ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿ ಗ್ರಂಥಗಳನ್ನು ರಚಿಸಿದುದರ ಬಗ್ಗೆ ದಾಖಲೆಯಿದೆ, ಆದರೆ ಗ್ರಂಥಗಳು ಲಭ್ಯವಿಲ್ಲ!


No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...