ಕರ್ನಾಟಕದಲ್ಲಿ ಅಭಿಮಾನಿ ಸ್ಟುಡಿಯೋ ಸ್ಥಾಪಿಸಿದ ನಟ ಯಾರು?

SANTOSH KULKARNI
By -
1 minute read
0

 

ನಿಮ್ಮ ಪ್ರಶ್ನೆಯಲ್ಲಿ ಹೇಳಿರುವಂತೆ ಅದು ಅಭಿಮಾನಿ ಸ್ಟುಡಿಯೋ ಅಲ್ಲ. ಅಭಿಮಾನ್ ಸ್ಟುಡಿಯೋ.ಇದು ಬೆಂಗಳೂರು ನಗರದ ಕೆಂಗೇರಿ ಉತ್ತರಹಳ್ಳಿ ಮಾರ್ಗದಲ್ಲಿದೆ.ಇದು ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ದಿ. ಟಿ. ಎನ್. ಬಾಲಕೃಷ್ಣ (1913–1995)ಅವರು ಸ್ಥಾಪಿಸಿದ ಸ್ಟುಡಿಯೋ.ಕನ್ನಡ ನಾಡು ಮತ್ತು ಚಿತ್ರರಂಗದಲ್ಲಿ ಪ್ರೀತಿಯಿಂದ ಬಾಲಣ್ಣ ಎಂದೇ ಕರೆಯುತಿದ್ದ ಬಾಲಣ್ಣ ನಟಿಸಿದ ಚಿತ್ರಗಳ ಸಂಖ್ಯೆ ಐದು ನೂರಕ್ಕೂ ಹೆಚ್ಚು.

1970ರ ದಶಕದಲ್ಲಿ ನೆರೆಯ ರಾಜ್ಯಗಳಲ್ಲಿ ಅಲ್ಲಿಯ ಉದ್ಯಮ ಹೊಸ ಸ್ಟುಡಿಯೋ ಗಳ ನಿರ್ಮಾಣ ಮಾಡಲು ಆರಂಭಿಸಿತ್ತು. ನಾವು ಅವುಗಳನ್ನು ಅವಲಂಬಿಸುವ ಅನಿವಾರ್ಯತೆ ತಪ್ಪಿಸಲು ಬಾಲಣ್ಣ ಈ ಸ್ಟುಡಿಯೋ ಸ್ಥಾಪನೆಗೆ ಮುಂದಾದರು.ಅಷ್ಟೇ ಅಲ್ಲ ಮದರಾಸಿನ ಸ್ಟುಡಿಯೋ ಗಳಲ್ಲಿ ಆಗುವ ತ್ರಾಸ, ಕನ್ನಡ ಚಿತ್ರಗಳ ಕಡೆಗಣನೆ ಕೂಡಾ ಇವರ ನೋವಿಗೆ ಕಾರಣವಾಗಿತ್ತು.

ಅಂದಿನ ಎಸ್. ನಿಜಲಿಂಗಪ್ಪ ಅವರ ಸರಕಾರ ಬಾಲಣ್ಣ ಅವರ ಮನವಿಗೆ ಸ್ಪಂದಿಸಿ ಎಕರೆಗೆ 300 ರೂಪಾಯಿ ದರದಲ್ಲಿ20 ಎಕರೆ ಭೂಮಿ ಮಂಜೂರು ಮಾಡಿತ್ತು. 5/9/1965ರಲ್ಲಿ ಸ್ಟುಡಿಯೋ ಭೂಮಿ ಪೂಜೆ ಕೂಡಾ ನಡೆಯಿತು. ಆದರೆ ಈ ಪ್ರಯತ್ನಕ್ಕೆ ಉದ್ಯಮದ ಸೂಕ್ತ ಬೆಂಬಲ ನಿರೀಕ್ಷೆಯಂತೆ ಸಿಗಲಿಲ್ಲ. ಆಗ ಸಾರ್ವಜನಿಕ ವಾಗಿ 100ರೂಪಾಯಿ ಷೇರು ಮೂಲಕ ಹಣ ಸಂಗ್ರಹಿಸಿ 1968ರಲ್ಲಿ ಕಡೆಗೂ ಸ್ಟುಡಿಯೋ ಕಾರ್ಯರಂಭ ಮಾಡಿತು. "ಮಾರ್ಗದರ್ಶಿ "ಈ ಸ್ಟುಡಿಯೋ ದಲ್ಲಿ ಚಿತ್ರೀಕರಣ ಆದ ಪ್ರಥಮ ಚಿತ್ರ.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಂಠೀರವ, ಚಾಮುಂಡೇಶ್ವರಿ ಸ್ಟುಡಿಯೋ ಗಳು ತಲೆ ಎತ್ತಿದಾಗ ದೂರ ಎಂಬ ಕಾರಣಕ್ಕೆ ಅಭಿಮಾನ್ ಕಳೆಗುಂದಿತು. ಚಾಮುಂಡೇಶ್ವರಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿತ್ತು. ಜೊತೆಗೆ ಈ ಸ್ಟುಡಿಯೋದಲ್ಲಿ ಮೂಲಸೌಕರ್ಯ ಬೆಳೆಯಲಿಲ್ಲ. ಅತ್ತ ಬಾಲಣ್ಣ ಅವರ ಅರೋಗ್ಯ ಹದಗೆಟ್ಟಿತು. ಅಂತಿಮವಾಗಿ ಬಾಲಣ್ಣ ಅವರ ಸ್ಟುಡಿಯೋ ಸಾಹಸ ದುರಂತ ಕತೆಯಾಗಿಯೇ ಉಳಿಯಿತು.

ಸ್ಟುಡಿಯೋಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರಕಾರ ನೀಡಿದ 20 ಎಕರೆ ಭೂಮಿಯಲ್ಲಿ 10 ಎಕರೆ ಮಾರಿ ಸದ್ಯ ಉಳಿದಿರುವುದು ಹತ್ತು ಎಕರೆ ಪ್ರದೇಶಮಾತ್ರ.

ಇದಿಷ್ಟು ಬಾಲಣ್ಣ ಅಭಿಮಾನದಿಂದ ಕಟ್ಟಿದ ಅಭಿಮಾನ್ ಅಂಗಳದ ಹಿಂದಿರುವ ಕಹಾನಿ.

ಬಾಲಣ್ಣ ಬದುಕಿದ್ದಾಗ ಇದೇ ಸ್ಟುಡಿಯೋ ಅವರ ವಾಸಸ್ಥಳ ಕೂಡಾ ಆಗಿತ್ತು. ಅವರಿದ್ದಾಗ, ಮತ್ತು ಅವರ ಕಾಲಾನಂತರ ಅನೇಕ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ಅವುಗಳಲ್ಲಿ ಅದೆಷ್ಟೋ ಸಿನಿಮಾಗಳ ವರದಿ ನಾನೇ ಮಾಡಿದ್ದೇನೆ.ಕಲಾವಿದರ ಸಂದರ್ಶನ ಗಳನ್ನು ಮಾಡಿದ್ದೇನೆ. ಸ್ಟುಡಿಯೋ ಕಷ್ಟದ ದಿನಗಳಲ್ಲಿಬಾಲಣ್ಣ ಅವರ ನೋವಿನ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಆ ಸ್ಟುಡಿಯೋ ಮೇಲಿನ ಅಭಿಮಾನ ಮರೆಯಲಾಗದ ನೆನಪುಗಳು.

Post a Comment

0Comments

Post a Comment (0)
Today | 7, April 2025