Showing posts with label district. Show all posts
Showing posts with label district. Show all posts

Wednesday, February 19, 2025

ಕರ್ನಾಟಕ ದಲ್ಲಿ ಅತೀ ದೊಡ್ಡ ಸಮುದ್ರ ತೀರ ಹೊಂದಿದ ಜಿಲ್ಲೆ ಯಾವುದು?

 ಕರ್ನಾಟಕ ರಾಜ್ಯದ ಕರಾವಳಿ ತೀರ 320 ಕಿಲೋಮೀಟರ್ ಉದ್ದವಿದ್ದು ದಕ್ಷಿಣ ಕನ್ನಡ ಜಿಲ್ಲೆ 62 ಕಿಲೋಮೀಟರ್, ಉಡುಪಿ ಜಿಲ್ಲೆ 98ಕಿಲೋಮೀಟರ್, ಮತ್ತು ಉತ್ತರ ಕನ್ನಡ ಜಿಲ್ಲೆ 160 ಕಿಲೋಮೀಟರ್ ಸಮುದ್ರ ತೀರ ಹೊಂದಿದೆ.

Saturday, January 25, 2025

ಉಡುಪಿ ಜಿಲ್ಲೆಗೆ ಉಡುಪಿ ಎಂಬ ಹೆಸರು ಹೇಗೆ ಬಂತು ಮತ್ತು ಈ ಜಿಲ್ಲೆಯ ವಿಶೇಷತೆಗಳೇನು?

 ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವ ಮಠ ಪ್ರತಿಪಾದಿಸಿದ ತ್ರೈಲೋಕಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿ.

ಉಡುಪಿ ಜಿಲ್ಲೆ ಅಗಸ್ಟ್ 1997 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಉಡುಪಿ ಹೆಸರನ್ನು ತುಳು ಹೆಸರು "ಒಡಿಪು" ನಿಂದ ಪಡೆಯಲಾಗಿದೆ ಎಂದು ನಂಬಲಾಗಿದೆ. ಒಡಿಪು ಎಂಬ ಪದ ಬರಲು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನವೇ ಕಾರಣ ಎಂದು ಕೆಲವರು ಹೇಳುತ್ತಾರೆ. ಇದಲ್ಲದೆ ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ "ಉಡು" ಹಾಗೂ "ಪ" ಅಂದರೆ ನಕ್ಷತ್ರ ಹಾಗೂ ದೇವರು ಪದದಿಂದ ಹುಟ್ಟಿದ್ದು ಎಂಬ ಬಗ್ಗೆ ಕಥೆಗಳಲ್ಲಿ ಉಲ್ಲೇಖವಿದೆ.

ಉಡುಪಿಯು ಮಂಗಳೂರಿನ ಶೈಕ್ಷಣಿಕ, ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದಿಂದ 55 ಕಿ.ಮೀ ಮತ್ತು ರಸ್ತೆಯ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 422 ಕಿ. ಮೀ ದೂರದಲ್ಲಿದೆ.

ಇದು ಉಡುಪಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ ಮತ್ತು ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒಂದು. ಉಡುಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇದನ್ನು ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ.ಇಲ್ಲಿ ಅತ್ಯಂತ ಜನಪ್ರಿಯವಾದ ಪಾಕ ಪದ್ಧತಿ ಇದೆ. ಹಾಗೆಯೇ ಇದನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ.

ಇಲ್ಲಿನ ಪ್ರಮುಖ ಕಡಲತೀರಗಳು:

ಮಲ್ಪೆ ಕಡಲತೀರ ಮತ್ತು ಸಂತ ಮೇರಿಯ ದ್ವೀಪ

ಮರವಂತೆ ಕಡಲತೀರ

ಒತ್ತಿನೆಣೆ ಕಡಲತೀರ

ಕಾಪು ಕಡಲತೀರ

ಉದ್ಯಾಯವರ ಕಡಲತೀರ

ಪಡುಬಿದ್ರಿ ಕಡಲತೀರ

ಕೋಡಿ ಕಡಲತೀರ

ಪ್ರವಾಸಿ ಆಕಷಣೆಗಳು:

ಸೀತಾನದಿಯಲ್ಲಿ ವಾಟರ್ ರಾಪ್ಟಿಂಗ್

ಕುಡ್ಲು ತೀರ್ಥ

ಹಸ್ತ ಶಿಲ್ಪಾ ಹೆರಿಟೇಜ್ ವಿಲೇಜ್

ಮಣಿಪಾಲ ಮ್ಯೂಸಿಯಂ

ಎಂಡ್ ಪಾಯಿಂಟ್ ಮಣಿಪಾಲ

ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್

ಕ್ಷವಿಜ ನೇಸರ ಧಾಮ

ಬೇಳಕಲ್ ತೀರ್ಥ

ಬಾರ್ಕೂರು

ಕೊಡಚಾದ್ರಿ

ಧಾರ್ಮಿಕ ಕ್ಷೇತ್ರಗಳು:

ಉಡುಪಿ ಶ್ರೀ ಕೃಷ್ಣ ದೇವಸ್ಥಾನ

ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ

ಕೊಲ್ಲೂರು ಮೂಕಾಂಬಿಕ ದೇವಸ್ಥಾನ

ಚತುರ್ಮುಖ ಬಸದಿ

ಕಾರ್ಕಳ ಗೋಮಟೇಶ್ವರ

ವರಂಗ

ಮೌಂಟ್ ರೋಸರಿ ಚರ್ಚ್

ಆನೆಗುಡ್ಡೆ

ಮಕ್ಕೇಕಟ್ಟು

ಪ್ರಕೃತಿ ಮತ್ತು ವನ್ಯಜೀವಿಗಳು:

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ

ಕಲೆ ಮತ್ತು ಹಬ್ಬಗಳು:

ಯಕ್ಷಗಾನ

ಹುಲಿ ವೇಷ

ವಿಟ್ಲಪಿಂಡಿ

ನಾಗಮಂಡಲ

ಮಾರಣಕಟ್ಟೆ ಉತ್ಸವ

ಪರ್ಯಾಯ ಉತ್ಸವ

ಕಂಬಳ

ಪಾಕ ವೈವಿಧ್ಯತೆ:

ಪತ್ರೊಡೆ

ನೀರ್ ದೋಸೆ

ಬಾಳೆ ಹಣ್ಣಿನ ಬನ್ಸ್

ಕೋಳಿ ಸಾರು

ಮಂಡಕ್ಕಿ ಉಪ್ಕರಿ

ಗಡ್ಬಡ್ ಐಸ್ ಕ್ರೀಮ್

Tuesday, June 23, 2020

ಬಾಗಲಕೋಟೆ ಜಿಲ್ಲೆ


🌸 ಬಾಗಲಕೋಟೆ ಜಿಲ್ಲೆಯ ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು

🌸 ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು

🌸 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು 

🌸 ಜಿಲ್ಲೆಯ ಹನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ಮೇಗುತಿ ಎಂಬ ದೇವಾಲಯದಲ್ಲಿ ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿಯ 'ಐಹೊಳೆ ಶಾಸನ' ( ಸಂಸ್ಕೃತ ಭಾಷೆಯಲ್ಲಿ) ಇದೆ. ಈ ಶಾಸನವು 'ನರ್ಮದಾ ನದಿ' ಕದನಕ್ಕೆ ಸಂಬಂಧಿಸಿದೆ . ನರ್ಮದಾ ನದಿ ಕದನವು :- 'ಇಮ್ಮಡಿ ಪುಲಕೇಶಿ' ಮತ್ತು 'ಹರ್ಷವರ್ಧನ' ನಡುವೆ ನಡೆಯಿತು

 🌸 ಜಿಲ್ಲೆಯಲ್ಲಿ "ಕಪ್ಪೆ ಆರ್ಭಟ್ಟನ" ಶಾಸನವು ತ್ರಿಪದಿಯಲ್ಲಿದೆ ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ. ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ , ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ.

🌸 ಜಿಲ್ಲೆಯ "ಇಳಕಲ್" ಸ್ಥಳವು ಪಿಂಕ್ ಗ್ರಾನೆಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ

🌸 ಮುಧೋಳ ತಾಲ್ಲೂಕಿನ ಹಗಲಿಗೆ ( ಊರಿ)ನಲ್ಲಿ 1857ರಲ್ಲಿ "ಬೇಡರ ಸಶಸ್ತ್ರ" ದಂಗೆ ನಡೆಯಿತು

🌸 ಮುಧೋಳದಲ್ಲಿ ಹುಂಡ್ಸ್ ಎಂಬ ನಾಯಿಯ ತಳಿಯು ಪ್ರಸಿದ್ಧಿ ಮತ್ತು ಇಲ್ಲಿ ರನ್ನ ಉತ್ಸವ ನಡೆಯುತ್ತದೆ

🌸 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಎಂಬ ಹಳ್ಳಿಯ ಹೆಸರಾಂತ ವ್ಯಕ್ತಿ ಬಿ.ಡಿ.ಜತ್ತಿ ಅಥವಾ "ಬಸಪ್ಪ ದಾನಪ್ಪ ಜತ್ತಿ"

> ಇವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಹಂಗಾಮಿ ರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಒಡಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

🌸 ಈ ಜಿಲ್ಲೆಯ 'ನವನಗರ' ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ

🌸 ಬಾಗಲಕೋಟೆ ಜಿಲ್ಲೆಯ ಬಾದಾಮಿಯು ಚಾಲುಕ್ಯರು ರಾಜಧಾನಿಯಾಗಿತ್ತು, ಇಲ್ಲಿ "ಚಾಲುಕ್ಯ ಉತ್ಸವ" ನಡೆಯುತ್ತದೆ

🌸  ಈ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿ ದಂಡೆಗಳ ಮೇಲೆ "ಕೂಡಲಸಂಗಮ" ಇದೆ
🌸 ಬಾದಾಮಿಯು ನವಶಿಲಾಯುಗದ ತಾಣವಾಗಿದ್ದು, ಪಟ್ಟದಕಲ್ಲಿನ ದೇವಾಲಯವು ಭಾರತದ ಸಂಸತ್ತಿನ( ಪಾರ್ಲಿಮೆಂಟ್) ಆಕಾರವನ್ನು ಹೊಂದಿದೆ.

🌸 ಬಾದಾಮಿ ಹಳೆಯ ಹೆಸರು :- ವಾತಾಪಿ

🌸 ಯಡಹಳ್ಳಿ ವನ್ಯಜೀವಿ ಧಾಮವು ಜಿಂಕಾರ ( ಇಂಡಿಯನ್ ಗೆಝೆಲ್ ) ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ. ಯಡಹಳ್ಳಿ ಚಿಂಕಾರ ವನ್ಯಧಾಮವಾಗಿ ರಾಜ್ಯ ಸರ್ಕಾರ 2015ರಲ್ಲಿ ಘೋಷಿಸಿತ್ತು 

🌸 ಬಾಗಲಕೋಟೆ ಜಿಲ್ಲೆಯ "ಪಟ್ಟದಕಲ್ಲು" 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿದೆ