Showing posts with label songs. Show all posts
Showing posts with label songs. Show all posts

Monday, December 1, 2025

What are some suspense or mystery genre Hindi songs?

 Few mentions are :

Kahin Deep Jale Kahin Dil - Bees Saal Baad: Highly melodious, highly mysterious song.

The song has the feeling of love, separation and mystery. It's a very important part of the film. It acts as a siren song of the film.

The opening, “oh oh oh oh oh oh”, are enough to give you goosebumps.

Jhoom Jhoom Dhalti Raat - Kohraa: Unique mystery song which appears in the beginning of the film. Kohra means fog.

Waheeda Rehman and the ghostly character are shown in white with long shots in a mansion which adds up to the impact of the song.

The actress in the song is unknown to the audiences as her face is never shown in the movie. Later the hero of the movie Biswajit revealed that she was a lesser known Anglo Indian actor - Thelma.

Naina Barse Rimjhim - Woh Kaun Thi?:

A short version of the song just comes before the titles are displayed and it grips the viewers.

The song is known for its haunting melody, melancholic beauty and emotive rendition by Lata Mangeshkar.

Longing, sadness, pain of unspoken love, sense of sadness, the song perfectly complements the film's storyline with elements of romance and the supernatural.

Aayega Aane Wala - Mahal : This song is considered as one of the most effective picturised song of yesteryears.

The song is used as a recurring theme in the film and acts as a signature tune for the ghostly women picturised along with looming shadows, swinging chandeliers and a mysterious lady.

There are a few lines in the beginning of the song before the song actually begins. The picturisation and camera angles of those lines are sheer brilliance.

Gumnaam Hai Koi - Gumnaam : Overall this has to be numero uno in the list of mystery songs.

The song is picturised on all the main characters of the film.

The mysterious lyrics by Hasrat Jaipuri, the visuals, the melody of Shankar Jaikishan and the mesmerizing voice of Lata Mangeshkar create an enchanting aura throughout the song.

Personal opinion, might differ.

Image(s) Courtesy: Google

Thursday, January 16, 2025

ಎನಿತು ಇನಿದು ಈ ಕನ್ನಡ ನುಡಿಯು


ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು!
ಗಾನವ ಬೆರೆಯಿಸಿ
ವೀಣೆಯ ದನಿಯೊಳು
ವಾಣಿಯ ನೇವುರ
ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು !
ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿರುಳಲಿ
ಸಂಗೀತವನೊರೆದಂಗವಿದೇನೋ?
ಎನಿತು ಇನಿದು ಈ ಕನ್ನಡ ನುಡಿಯು!
ಗಿಳಿಗಳು ಉಲಿಯುವ
ಮೆಲುಮಾತುಗಳೋ
ಕಳಕಂಠಗಳಾ
ಚೆಲುವಿನ ಕುಕಿಲೊ?
ಅಳಿಗಳ ಬಳಗದ ಬೆಳಗಿನ ಉಲಿಯೋ?
ಎನಿತು ಇನಿದು ಈ ಕನ್ನಡ ನುಡಿಯು!
ಕವಿತೆ: ಕನ್ನಡ ನುಡಿ
ಸಾಹಿತ್ಯ: ಆನಂದಕಂದ

Wednesday, January 8, 2025

ಗುಮ್ಮನ ಕರೆಯದಿರಿ ಅಮ್ಮಾ ನೀನು



ಗುಮ್ಮನ ಕರೆಯದಿರಿ ಅಮ್ಮಾ ನೀನು

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ

ಹೆಣ್ಣುಗಳಿರುವಲ್ಲಿ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೇನು ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಬಾವಿಗೆ ಹೋಗಿ ಕಾಣೆ ಅಮ್ಮಾ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೊಡ ಕರುಗಳ ಬಿಡೆನೋಡೆ
ದೇವರಂತೆ ಒಂದು ಠಾವಿಯಲಿ ಕೂಡುವೆ

ಮಗನ ಮಾತುಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರ ವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

Monday, January 6, 2025

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು



ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು

ಕಲ್ಲುಸಕ್ಕರೆ ಕೊಳ್ಳಿರೋ
ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಫುಲ್ಲಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿಗೆ ಗೋಣಿಯೊಳು ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ದರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ

ಸಂತೆ ಸಂತೆಗೆ ಹೋಗಿ ಶ್ರಮಪಡಿಸುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತರ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

Saturday, January 4, 2025

ಎಂಥ ಅಂದ ಎಂಥ ಚೆಂದ ಶಾರದಮ್ಮ

 


ಎಂಥ ಅಂದ ಎಂಥ ಚೆಂದ ಶಾರದಮ್ಮ

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ॥

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ |
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ || ॥ ಎಂಥ ॥
ಅಭಯ ಹಸ್ತ ನೋಡಿ ಜೀವ ಕುಣಿಯತಮ್ಮ |
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ |
ನಿನ್ನ ನೋಡಿ ಹಾಡೋ ಆಸೆ ನನಗೆ ಬಂದಿತಮ್ಮ || ॥ ಎಂಥ ॥
ರತ್ನದಂತ ಮಾತುಗಳನ್ನೇ ಆಡಿಸಮ್ಮ |
ಒಳ್ಳೇ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ|
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ ॥ ಎಂಥ ॥

Friday, January 3, 2025

ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

 


ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ

ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ
ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ
ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ
ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ
ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ
ಕಮಲನಯನೆ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ
ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ
ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನೇ ತಾರೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ

 

ಚಿತ್ರ : ನಿನಗಾಗಿ

ಗಾಯನ : ಕೆ ಎಸ್ ಚಿತ್ರಾ

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದೂ
ಓ..ಓ..ಓ.....ಓ...ಓ...ಓ...
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ....

ಹೊಸದಾಗಿ ಶುರುವಾಯಿತಾ
ನಮ್ಮೊಳಗೆ ಈ ಗೆಳೆತನ
ನಿನ್ನೆಗಳ ನೆರಳಿಲ್ಲದೆ
ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ
ಮರೆಯಲಾಗದು ಆ ನೋವ
ನೋವು ಎದೆಯೊಳಗೆ ಬಚ್ಚಿಟ್ಟು
ಲಾಭವೇನಿದೆ ಓ ಜೀವಾ
ಹೃದಯದಾ ಮಾತನೂ..
ಒಮ್ಮೆ ಕೇಳಬಾರದೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ
ಹೇಳಬಾರದೆ

ಬಾನೇರೊ ಆಮೋಡ ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರೀಲಿ ರೆಕ್ಕೆಯಿಲ್ಲದಆ ಈ ಪಯಣ..
ನಾನಾ ರೂಪದ ತಿರುವಲ್ಲಿ ಎಲ್ಲೊ ಕಾಣದೂ ನಿಲ್ದಾಣ
ಮರುಳು ಗೂಡ ಕದಡುವಾಸೆ ಇನ್ನೂ ತೀರಲಿಲ್ಲವೆ..
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಎರಡು ಮನಸಲೂ ಒಂದೇ ಮಾತಿದೆ
ಯಾಕೀ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ
ನಂಬುವುದೆ ಈ ಮನಸೂ
ಓ...ಓ..ಓ...ಓ...ಓ...ಓ...
🌻

Thursday, January 2, 2025

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ

 


ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,

ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ
ಕೈಹಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳಿದೊಡನೆಯೆ – ಸಾಕು ನನಗೊಂದು ಹೆಜ್ಜೆ.
ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; ಇನ್ನು,
ಕೈಹಿಡಿದು ನಡೆಸು ನೀನು.
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.
ಇಷ್ಟು ದಿನ ಸಲಹಿರುವೆ ಮರ‍್ಖನನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ ?
-ಬಿ.ಎಂ.ಶ್ರೀಕಂಠಯ್ಯ

ರಾಮನಾಮ ಪಾಯಸಕ್ಕೆ

 



ರಾಮನಾಮ ಪಾಯಸಕ್ಕೆ

ಕೃಷ್ಣ ನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ||1||
ಬಾಯಿ ಚಪ್ಪರಿಸಿರೋ

ಒಮ್ಮನ ಗೋಧಿಯ ತಂದು ||2||
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು
ಸಣ್ಣ ಸೇವಗೆ ಹೊಸೆದು

ಹೃದಯವೆಂಬೊ ಪಾತ್ರೆಯೊಳಗೆ ||3||
ಭಾವವೆಂಬೊ ಎಸರು ಇಟ್ಟು
ಬುದ್ಧಿಯಿಂದ ಪಕ್ವವ ಮಾಡಿ
ಹರಿವಾಣದೊಳಗೆ ನೀಡಿ

ಆನಂದ ಆನಂದವೆಂಬೊ||4||
ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ

Wednesday, January 1, 2025

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

 

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

ಬೀಸು ಗಾಳಿಗೆ ಬೀಳು ಹೇಳುವ ತೆರೆಯ ಮೇಗಡೆ ಹಾರಲಿ !
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ !
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ !
ಮಿಂಚುತರ‍್ಪುವು ಮೂಡುತೈತರೆ ಬಾಲಕೋಮಲ ದಿನಮಣಿ !
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ !
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ, ಅಂತ ತೇಲುತ ದೋಣಿಯಾಟವ ನೋಡಿರಿ!
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ !
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.


ಕುವೆಂಪು






ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು



ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ಯತ್ತೆಗಳ ಕಾಡು
ಪಾವನೆಯರಾ ಕೃಷ್ಣ ಭೀಮೆಯರ ತಾಯ್ತಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

–ಹುಯಿಲುಗೋಳ ನಾರಾಯಣರಾಯರು