Thursday, April 18, 2019

ಕನ್ನಡ ಚುಟುಕಗಳು

1. ಹೂವಿಗೆ ಹೇಳಬೇಡ ನಿನ್ನ ಹೆಸರು
   
ದುಂಬಿಗೂ ಹೇಳಬೇಡ ನಿನ್ನ ಹೆಸರು
   
ಏಕೆಂದರೆ ನಿನ್ನ ಹೆಸರು ಹೇಳುತ್ತಲೇ
ಹೋಗುವುದು ಅವುಗಳ ಉಸಿರು
2. ಕತ್ತಲಲಿ ಕಣ್ಣಾದವಳು ನೀನು ತಾನೇ
   
ಬೆಳಕಾಗಿ ಕೈ ಹಿಡಿದುದು ನೀನು ತಾನೇ
   
ಅಂದರೆ ನೀನು ಟಾರ್ಚ್ ಅಲ್ಲವೇನೆ
3. ನೀ ಕೈಗೆಟುಕದಿದ್ದರೆ ಇಲ್ಲ ಆನಂದ
   
ನೀ ಕೈಗೆಟುಕಿದರೆ ಆತ್ಮಾನಂದಬ್ರಹ್ಮಾನಂದ
  
ಹಾಗಾದರೆ ನೀನು– ರಮ್ಮಾನಂದ (Rum + ಆನಂದ)
4.  ನನ್ನ ಮನದನ್ನೆ
ನೀ ಮಾಡಿದ್ದಕ್ಕೆ ಕಣ್ಸನ್ನೆ
ಟೆಸ್ಟಲ್ಲಿ ನಾ ತೆಗೆದದ್ದು
ಎರಡು ಸೊನ್ನೆ
5. ಪ್ರೇಯಸಿ ಎಂದರೆ ಕೇಳು
ಪ್ರೇಮಿಗೆ ಯಶ ತರುವ ಸಿಂಗಾರಿ
ಆದರೆ ಈಗೀಗ ‘ಪೇ ಅಂಡ್ ಪ್ರೇಮಾಡಿದರೆ ‘ಯಸ್ಇಲ್ಲದಿದ್ದರೆ ‘ಸಾರೀ’
6. ಅಂಧಕಾರವೆಂದರೇನು ಎಂದು
ತಿಳಿಯ ಬಯಸಿ ಹುಡುಕುತ ಹೊರಟೆ
ಕಂಡುಕಂಡವರ ಕೇಳಿದೆ
ಬುಕ್ಕುಅಂತರ್ಜಾಲವ ತಡಕಾಡಿದೆ
ಆದರೆ ನನಗೆ ತಿಳಿಯದೇ ಹೋಯಿತು
ನನ್ನ ಕಣ್ಣಿಗೆ ಪೊರೆ ಬಂದಿದೆಯೆಂದು
7. ನಾನಾದರೂ ಯಾರಿಗಾಗಿ ಬರೆಯಲಿ
ಎಂದು ಬರೆದಿದ್ದ ಕಾಗದ ತೆಗೆದು ಎಸೆದಿದ್ದೆ
ನನಗೆ ತಿಳಿಯದೇ ನೀನು ತೆಗೆದೊಯ್ದು
ಓದಿ ನೀ ಅಳುತ ಕುಳಿತಿದ್ದೆ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...