Monday, June 29, 2020
ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ - ಜೂನ್ 29
ಬದುಕು ಎಂದರೇನು? ಒಬ್ಬೊಬ್ಬರದು ಒಂದೊಂದು ರೀತಿ
ದ್ರಾವಿಡ ಭಾಷೆಗಳ ಪಟ್ಟಿ
Thursday, June 25, 2020
ಸಕ್ಕರೆ ಬದಲಿಗೆ ಬಳಸಬಹುದಾದ 7 ನೈಸರ್ಗಿಕ ಸಿಹಿ ಪದಾರ್ಥಗಳು
ಪ್ರಮುಖ ಕೃತಿಗಳು
Wednesday, June 24, 2020
International Olympic Day
Tuesday, June 23, 2020
ಕಪ್ಪು vs ಹಸಿರು ಏಲಕ್ಕಿ, ಆರೋಗ್ಯದ ವಿಷಯದಲ್ಲಿ ಎರಡೂ ಎತ್ತಿದ ಕೈ
ದಿನಾ ಅಶ್ವಗಂಧ ಚಹಾ, ಕುಡಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು
ಬಾಗಲಕೋಟೆ ಜಿಲ್ಲೆ
Friday, June 19, 2020
ಎಲ್ಲಾ ಪರಿಕ್ಷೆಗೂ ಬಹುಮುಖ್ಯವಾದವು
ವಿಟಮಿನ್ಗಳೆಂದರೇನು?
National Commission on Farmers: Swaminathan Committee
- The main aim of the committee was to come up with a sustainable farming system, make farm commodities cost-competitive and more profitable.
- The commission, in 2006, recommended that MSPs must be at least 50% more than the cost of production and recommended the C2 method for MSP calculation.
- However, the government calculates its MSP based on the A2+FL method.
Translated....
•• ರೈತರ ರಾಷ್ಟ್ರೀಯ ಆಯೋಗ:
ಸ್ವಾಮಿನಾಥನ್ ಸಮಿತಿ
- ನವೆಂಬರ್ 18, 2004 ರಂದು, ಕೇಂದ್ರ ಸರ್ಕಾರವು ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು.
- ಸಮಿತಿಯ ಮುಖ್ಯ ಉದ್ದೇಶವೆಂದರೆ
ಸುಸ್ಥಿರ ಕೃಷಿ ಪದ್ಧತಿ,
ಕೃಷಿ ಸರಕುಗಳನ್ನು ವೆಚ್ಚ-ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವಾಗಿಸುವುದು[make farm commodities cost-competitive and more profitable]
- ಆಯೋಗವು 2006 ರಲ್ಲಿ, MSPಗಳು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚಿರಬೇಕು ಎಂದು ಶಿಫಾರಸು ಮಾಡಿತು ಮತ್ತು MSP ಲೆಕ್ಕಾಚಾರಕ್ಕೆ C2 ವಿಧಾನವನ್ನು ಶಿಫಾರಸು ಮಾಡಿತು.
- ಆದಾಗ್ಯೂ, ಸರ್ಕಾರವು A2 + FL ವಿಧಾನವನ್ನು ಆಧರಿಸಿ ತನ್ನ MSPಯನ್ನು ಲೆಕ್ಕಾಚಾರ ಮಾಡುತ್ತದೆ.
#economics #SwaminathanCommittee #farmersProgrammes #nationalaffairs
@spardhaloka
•• MSP Calculation:
- This MSP is usually estimated based on three types of calculation methods.
ಈ MSPಯನ್ನು ಸಾಮಾನ್ಯವಾಗಿ ಮೂರು ರೀತಿಯ ಲೆಕ್ಕಾಚಾರದ ವಿಧಾನಗಳ ಆಧಾರದ ಮೇಲೆ ಅಂದಾಜಿಸಲಾಗುತ್ತದೆ
- A2: Under this, MSP is set 50% higher than the amount farmers spend on farming including spending on seeds, fertilisers, pesticides, and labour.
A2: ಇದರ ಅಡಿಯಲ್ಲಿ, ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕಾರ್ಮಿಕರ ಖರ್ಚು ಸೇರಿದಂತೆ ರೈತರು ಕೃಷಿಗೆ ಖರ್ಚು ಮಾಡುವ ಮೊತ್ತಕ್ಕಿಂತ 50% ಹೆಚ್ಚಾಗಿದೆ.
- A2+FL: It includes A2 plus an assigned value of unpaid family labour.
ಇದು A2 ಜೊತೆಗೆ ಪಾವತಿಸದ ಕುಟುಂಬ ಕಾರ್ಮಿಕರ ನಿಯೋಜಿತ ಮೌಲ್ಯವನ್ನು ಒಳಗೊಂಡಿದೆ
- C2: Under C2, the estimated land rent and the cost of interest on the money taken for farming are added on top of A2+FL.
C2 ಅಡಿಯಲ್ಲಿ, ಅಂದಾಜು ಭೂ ಬಾಡಿಗೆ ಮತ್ತು ಕೃಷಿಗೆ ತೆಗೆದುಕೊಂಡ ಹಣದ ಬಡ್ಡಿ ವೆಚ್ಚವನ್ನು A2 + FL ಮೇಲೆ ಸೇರಿಸಲಾಗುತ್ತದೆ.
-The Central government had set up the National Commission on Farmers (NCF) in 2004 to address the issues of farmers in India including that of calculation of MSP.
MSP ಲೆಕ್ಕಾಚಾರ ಸೇರಿದಂತೆ ಭಾರತದ ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು 2004 ರಲ್ಲಿ ರಾಷ್ಟ್ರೀಯ ರೈತರ ಆಯೋಗವನ್ನು (ಎನ್ಸಿಎಫ್) ರಚಿಸಿತ್ತು.
THOUGHT FOR THE DAY
When someone suffers from stomach-ache, the best treatment will be salts or a hot water bag applied to the stomach, and not medicated collyrium for the eye. Suffering due to ignorance must be removed by acknowledging the universality of God and merging your individuality in the Universal. This first step is not as easy as it looks. Practice the attitude “I am yours.” Let the wave discover and acknowledge that it belongs to the sea. The wave takes a long time to recognise that indeed the vast sea beneath it gives it its existence. Its ego is so powerful that it will not permit it to be so humble, and bend before the sea. “I am Yours; You are the Master. I am a servant; You are sovereign. I am bound.” This mental attitude will tame the ego. This is the religious outlook named marjala-kishora - the attitude of the kitten to its mother, mewing plaintively for succour and sustenance, removing all trace of the ego.
Saturday, June 13, 2020
ಹೊತ್ತಿತೋ ಹೊತ್ತಿತು ಕನ್ನಡದ ದೀಪ.......
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ
ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ
ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ
ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ
- ಡಾ.ಸಿದ್ದಯ್ಯ ಪುರಾಣಿಕ
ಕಟ್ಟುವೆವು ನಾವು......
ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
ಬೀಡೊಂದನು
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!
ನಮ್ಮೆದೆಯ ಕನಸುಗಳೇ ಕಾಮಧೇನು
ಆದಾವು, ಕರೆದಾವು ವಾ೦ಛಿತವನು;
ಕರೆವ ಕೈಗಿಹುದೋ ಕನಸುಗಳ ಹರಕೆ;
ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!
ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!
ನಾವು ಹಿಂದೆಗೆವೆವೇ? ವೀರ ತರುಣರು ನಾವು!
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,
ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!
ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!
ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!
ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು!
ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!
ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು;
ಅದರ ಹಾರಾಟಕ್ಕೆ ಬಾನೆ ಗಡಿಯು,
ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
ಬೀಡೊಂದನು
- ಮೊಗೇರಿ ಗೋಪಾಲಕೃಷ್ಣ ಅಡಿಗ
ನಿನ್ನ ಕಂಗಳ ಕೊಳದಿ.....
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.
ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.
ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು
- ಎಮ್. ಎನ್. ವ್ಯಾಸ ರಾವ್
ಬದುಕು ಮಾಯೆಯ ಮಾಟ
ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು
ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.
ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ
- ಅಂಬಿಕಾತನಯದತ್ತ
ಪಾತರಗಿತ್ತೀ ಪಕ್ಕಾ.......
ಪಾತರಗಿತ್ತೀ ಪಕ್ಕಾ
ನೋಡೀದೇನS ಅಕ್ಕಾ! ॥ ಪ ॥
೧
ಹಸಿರು ಹಚ್ಚಿ ಚುಚ್ಚಿ
ಮೇಲSಕರಿಸಿಣ ಹಚ್ಚಿ,
೨
ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ,
೩
ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ,
೪
ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫
ನೂರು ಆರು ಪಾರು
ಯಾರು ಮಾಡಿದ್ದಾರು!
೬
ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ!
೭
ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ!
೮
ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ?
೯
ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ,
೧೦
ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ;
೧೧
ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ -
೧೨
ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ.
೧೩
ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು;
೧೬
ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ,
೧೭
ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ,
೧೮
ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧
ಸೀಗಿಬಳ್ಳಿ ತಾಗಿ
ಪಕ್ಕಾ ಬೆಳ್ಳಗಾಗಿ,
೨೨
ಗೊರಟಿಗೆಗೆ ಶರಣ
ಮಾಡಿ ದೂರಿಂದSನ
೨೩
ಮಾಲಿಂಗನ ಬಳ್ಳಿ
ತೂಗೂ ಮಂಚದಲ್ಲಿ,
೨೪
ತೂಗಿ ತೂಗಿ ತೂಗಿ
ದಣಿದ್ಹಾಂಗ ಆಗಿ,
೨೫
ಬೇಲೀ ಬಳ್ಳಿಯೊಳಗ
ಅದರ ನೆರಳ ತೆಳಗ
೨೬
ನಿದ್ದಿಗುಳ್ಯಾಡಿ
ಪಗಡಿ ಪಕ್ಕಾ ಆಡಿ,
೨೭
ಗುಲಬಾಕ್ಷಿಯ ಹೂವ
ಕುಶಲ ಕೇಳತಾವ;
೨೮
ಹುಡಿಯ ನೀರಿನ್ಯಾಗ
ತುಳಕಿಸುತ್ತ ಬ್ಯಾಗ
೨೯
ಹಡಿಯೆ ಬೀಜ ಗಂಡು
ಹಾರಹರಿಕಿ ಅಂದು,
೩೦
ಅಡವಿ ಮಲ್ಲಿಗಿ ಕಂಡು
ಅದರ ಕಂಪನುಂಡು,
೩೧
ಹುಲ್ಲ ಹೊಲಕ ಬಂದು
ಗುಬ್ಬಿ ಬೆಳಸಿ ತಿಂದು,
೩೨
ಇಷ್ಟು ಎಲ್ಲಾ ಮಾಡಿ
ಸಪ್ಪಳಿಲ್ಲದಾಡಿ,
೩೩
ತಾಳ ಚವ್ವ ಚಕ್ಕ
ಕುಣಿತ ತಕ್ಕ ತಕ್ಕ;
೩೪
ಆಸಿ ಹಚ್ಚಿ ಹ್ಯಾಂಗ
ಕಂಡು ಸಿಕ್ಕಧಾಂಗ
೩೫
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS.
೩೬
ಕಾಣದೆಲ್ಲೋ ಮೂಡಿ
ಬಂದು ಗಾಳಿ ಗೂಡಿ,
೩೭
ಇನ್ನು ಎಲ್ಲಿಗೋಟ?
ನಂದನದ ತೋಟ!
- ಅಂಬಿಕಾತನಯದತ್ತ
ಕೊಲ್ಲುವುದಾದರೆ ಕೊಂದುಬಿಡು......
ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ.
ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ.
ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು.
ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು.
- ಬಿ ಆರ್ ಲಕ್ಷ್ಮಣರಾವ್
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ .....
ರಚನೆ; ಕೆ.ಸ್. ನಿಸಾರ್ ಅಹಮದ್
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ........
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.
ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ.
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ;
ಬರುವೆಯೋ, ಬಾರೆಯೋ ನೀನೆನ್ನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ!
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!
ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ;
ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.
ವೆಚ್ಚವಾಗುತ್ತಿದೆ ಸವಿ ಚಣಗಳ ಧನ ದುಂದಾಗಿ;
ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.
ನನ್ನ ನಲವಿನ ಬಳ್ಳಿ.....
ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.
ನನ್ನ ನಲವಿನ ಬಳ್ಳಿ.....
ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.
ನನ್ನ ನಲವಿನ ಬಳ್ಳಿ.....
ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.
ನನ್ನ ನಲವಿನ ಬಳ್ಳಿ.....
- ಕೆ. ಎಸ್. ನಿಸಾರ್ ಅಹಮದ್
ಎಲ್ಲ ಮರೆತಿರುವಾಗ...
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ
ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ ||
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ ||
- ಕೆ. ಎಸ್. ನಿಸಾರ್ ಅಹಮದ್
ನಿತ್ಯೋತ್ಸವ.....
ರಚನೆ; ಕೆ. ಸ್. ನಿಸಾರ್ ಅಹಮದ್
ಜೋಗದ ಸಿರಿ ಬೆಳಕಿನಲ್ಲಿ,
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,ನಿತ್ಯೋತ್ಸವ,
ತಾಯಿ, ನಿತ್ಯೋತ್ಸವ, ನಿನಗೆ......
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
ರಚನೆ; ಕೆ. ಸ್. ನಿಸಾರ್ ಅಹಮದ್
ಜೋಗದ ಸಿರಿ ಬೆಳಕಿನಲ್ಲಿ,
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,ನಿತ್ಯೋತ್ಸವ,
ತಾಯಿ, ನಿತ್ಯೋತ್ಸವ, ನಿನಗೆ......
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......
ಎವರೆಸ್ಟ್ ಗೆಲುವಿನ ನೆನಪು
* ಅರವತ್ತಆರು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು.
* ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು.
★ ಮೌಂಟ್ ಎವರೆಸ್ಟ್
# ಮೌಂಟ್ ಎವರೆಸ್ಟ್ ಹಿಮಾಲಯದಲ್ಲಿರುವ ಮಹಾಲಂಗೂರ (Mahalangur) ಎನ್ನುವ ವಿಭಾಗದಲ್ಲಿದೆ.
* ಇದು ಚೀನಾ ಮತ್ತು ನೇಪಾಳ ಗಡಿಯಲ್ಲಿದ್ದು, ದಕ್ಷಿಣ ಚೀನಾ, ಮದ್ಯ ಟಿಬೇಟ್ ಮತ್ತು ಈಶಾನ್ಯ ನೇಪಾಳವನ್ನು ಪ್ರತ್ಯೇಕಿಸುತ್ತದೆ.
# ಮೌಂಟ್ ಎವರೆಸ್ಟ್ 60 ಮಿಲಿಯನ್ ವರ್ಷಗಳ ಹಿಂದೆಯೆ ಸೃಷ್ಠಿಯಾಗಿರಬಹುದೆಂದು ಅಂದಾಜಿಸಲಾಗಿದೆ.
# 1865 ಕ್ಕೂ ಮೊದಲು ಮೌಂಟ್ ಎವರೆಸ್ಟ್ ನ್ನು ಫೀಕ್ 15 (Peak 15) ಎಂದು ಕರೆಯಲಾಗುತ್ತಿತ್ತು.
# 1865 ರಲ್ಲಿ ಬ್ರಿಟೀಷ ಸರಕಾರ, ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಅವರ ಹೆಸರಿನಿಂದ ಈ ಪರ್ವತಕ್ಕೆ - ಮೌಂಟ್ ಎವರೆಸ್ಟ್ ಎಂದು ಮರುನಾಮಕರಣ ಮಾಡಲಾಯಿತು.
# ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ - “ ಸಾಗರ ಮಾಥಾ” ಎಂದು ಕರೆದರೆ ಟಿಬೇಟ್ ಭಾಗದಲ್ಲಿ ಜನರು ಇದನ್ನು - "ಚೋಮೋಲುಂಗ್ಮಾ" ಎಂದು ಕರೆಯುತ್ತಾರೆ.
# ಮೌಂಟ್ ಎವರೆಸ್ಟ್ ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಇರುವ ಅತ್ಯಂತ ಎತ್ತರದ ಪರ್ವತ ಶಿಖರ
ಇದರ ಎತ್ತರ - 8848 ಮೀಟರ್ (29,029 ಅಡಿ)
# 1855 ರಲ್ಲಿ ಎವರೆಸ್ಟ್ನ ಎತ್ತರವನ್ನು ಅಳೆಯಲಾಗಿತ್ತು.
* ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು.
* ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ.
* ಅದರ ಪ್ರಕಾರ ಎವರೆಸ್ಟ್ ಪರ್ವತ 8848 ಮೀಟರ್ (29,028 ಅಡಿ) ಎತ್ತರವಿದೆ ಎಂದು ತಿಳಿಸಿದ್ದಾರೆ.
# ಮೌಂಟ್ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ.
* 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ.
ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?
ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ ಅಷ್ಟೇ. ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...
-
1."ವಿಶ್ವ ಬುಡುಕಟ್ಟು ದಿನ" ಎಂದು ಆಚರಿಸಲಾಗುತ್ತದೆ ? ಅಗಸ್ಟ್ 9 2.ಸಿದ್ದಿ ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ? ಕರ್ನಾಟಕ ರಾಜ್ಯದಲ್ಲಿ 🔸ಯಲ್ಲಾಪುರ...
-
1) ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ । ಗುಣದ ಕೊಳ್ಳುತ ಕೊಡುತ ಪೊನಲು ಮಾರ್ಪಡುಗಂ ॥ ಮನುಜಸಂತಾನದಲಿ ಗುಣದವತರಣವಂತು । ಗುಣಿಪುದೆಂತಾ ತೆರನ - ಮಂಕುತಿಮ್ಮ j...