Thursday, February 28, 2013

Continuous (ನಿರಂತರ)

ಎದೆಯೊಳಗೆ ನೆನಪುಗಳ ಘನ ಮೋಡಗಳ ಢೀಗೆ
ಆಗಾಗೀಗ ಕೋರೈಸುವ ಯಾತನೆಗಳ ಛಳಕು
ಕೇಳಲಾರರು ಯಾರೂ ಎದೆಯಲ್ಲಾಡಿಸುತಿಹ
ಸಿಡಿಲಿನಾ ಸದ್ದು....

ತುಂಬಿಹ ಕಣ್ಗಳೊಳಗೆ ಬಡಿದಾಡುವ-
ರೆಪ್ಪೆಗಳೇಳಿಸೋ ತರಂಗಗಳು....
ಹನಿಯುತಿವೆ ಹನಿ ಬಿಂದುಗಳ ಸದ್ದಿಲ್ಲದೇ,
ತೋಯುವ ಕೆನ್ನೆಗಳಿಗೆ ತಡೆಯೊಡ್ಡಿ ಚಿಮ್ಮಲು
ಒಲುಮೆಯ ಸ್ಪರ್ಶವಿರದೇ, ನೋಯುತಿದೆ ಮನಸು.

ರವಿಯ ಸ್ಪರ್ಶವಿಲ್ಲದೇ, ಹರಿವ ನೀರು ಕಟ್ಟಿ,
ಹಸಿರು, ಹೂವ ಹೊತ್ತು ಬಸಿರಾಗದು ಧರೆ!
ಅಂಬಿಗನಾಸರೆಯಿಂದಲೇ ದೋಣಿ,
ದಡ ಸೇರುವುದು ಮುಳುಗದೇ...
ಬರಿಯ ನೆನಪುಗಳ ಜೊತೆಗೂಡಿ,
ಬಾಳುವುದೆಂತು ಹೇಳೋ ನರ-ಹರಿಯೆ?

ದಿನಕರನ ಪ್ರಭೆಯಿಂದಲೇ
ಬೆಳ್ಳಿಯ ಕಿರಣ ಸೂಸುವ ಶಶಿ,
ಹಾಯಿ ಹೋಣಿಗಿದ್ದರೊಂದು ಹುಟ್ಟು
ಸೇರಬಲ್ಲೆವು ನಾವೆ ದೂರ ತೀರ!
ನಿನ್ನೆ-ನಾಳೆಗಳ ನಡುವಿರುವ ಇಂದು,
ಸಾಗಲೇ ಬೇಕಿದೆ ಭೂತಕ್ಕೆ ಬೆನ್ನಾಗಿ,
ಭವಿತವ್ಯಕೆ ಮೊಗಮಾಡಿ.

-ತೇಜಸ್ವಿನಿ ಹೆಗಡೆ

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...