Thursday, February 28, 2013

A series of haunting poems (ನಿರಂತರ ಕಾಡುವ ಕವಿತೆಗಳ ಸರಣಿ)

ನೀ ಇರದ ಬಾಳಿನಲ್ಲಿ - ಭಾವಗೀತೆ 

ದನಿ ಇರದ ಬಾಳಿನಲ್ಲಿ
ಕೊಳಲಾದೆ ನೀನು
ನಿನ್ನೊಲುಮೆ ರಾಗವ ನುಡಿಸಿ
ಮರುಳಾದೆ ನಾನು
ಕನಸಿನಲೂ ನಿನ್ನದೆ ರೂಪು
ಶೃಂಗಾರ ಸುಮವಾಗಿ
ಬಯಕೆ ಶ್ರುತಿ ಭಾವಗಳಲ್ಲಿ
ಸಂಬಂಧ ಇನಿದಾಗಿ
ಸಂಗೀತ ಎದೆಯೊಳು ತುಂಬಿ
ನಾನಾದೆ ನಾದದ ದುಂಬಿ
ಗಂಧರ್ವ ಗಾನ ಗಂಗೆ
ತವರೂರು ನೀನಾಗಿ
ಸಂಗೀತ ಗಾಯನ ಹರಿಸೋ
ನಿಜ ರಸಿಕ ನಾನಾಗಿ
ಆಲಾಪದೇರಿಳಿತದಲಿ
ನಾ ಮಿಡಿದೆ ಮೋಹನ ಮುರಲಿ 


ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...