Wednesday, July 29, 2020

INTERNATIONAL TIGER DAY

🐯INTERNATIONAL TIGER DAY🐯

🐯International Tiger Day is observed every year on 29 July to spread awareness about the need for conservation of Tigers, promote the protection of the natural habitat of tigers.
.........................................................
🐯Static Facts Related With Tigers🐯

🐯SLOGAN :- "Their Survival Is In Our Hands" .

🐯NUMBERS OF TIGER :- 
🔺IN WORLD :- Close to 3900 (Report by WWF & Global tiger forum ) 

🔺IN INDIA :- India is home to 70% of the world tiger population numbers are nearly 2431 .

🐯ABOUT TIGER RESERVES :- 

🔺Worlds Largest Tiger Reserve :- Worlds largest tiger reserve created Haukaung valley in Myanmar .

🔺Indias Largest Tiger Reserve :- Nagarjunsagar Srisailam tiger reserve.

........................................................

Tuesday, July 28, 2020

Important Apps & Portal related to COVID-19

⚜Developed by IITs

 🔰 IIT BOMBAY

🔹corontine app
🔹 digital stethoscope
🔹safe app
🔹nasal gel
🔹aayusynk
🔹ruhdaar

🔰 IIT KANPUR

🔹low cost ppe kit
🔹 mobile master ji
🔹shudh

🔰 IIT Roorkee

🔹pranvayu

🔰 IIT Hyderabad

🔹 Jeevan lite
🔹 Research cell with Drdo

🔰 IIT Ropar

🔹sampark o meter
🔹ward bot

🔰 IIT Gandhinagar

🔹 Project Isaac
🔹 MIR AHD COVID-19
🔹 artificial tool to detect corona

🔰 IIT Madras

🔹 global huperloop pod
🔹 Medicab

🔰 IIT Guwahati

🔹flyzy

🔰 IIT Delhi

🔹 N safe
🔹 Pracrati

🔰Developed by Human resources Ministry

🔹 Samadhan
🔹bharat padhe online
🔹 Yukti
🔹vidya daan 2.0

⭐️ Developed by states⭐️

🔹 COVIDCARE APP - Arunachal Pradesh.
🔹 Rakhsa Sarv - Chhattisgarh Police.
🔹PRAGYAAM APP - Jharkhand.
🔹 Corona Sahayata App , GARUR APP - Bihar
🔹COVA Punjab app - Punjab.
🔹Corona Mukt Himachal App - Himachal Pradesh.
🔹 Corona Watch App - Karnataka.
🔹 NAADI APP - Puducherry.
🔹 Self Deceleration Covid-19 App - Nagaland.
🔹Gok direct app--- Kerala
🔹 Karmi bot---- Kerala

Saturday, July 25, 2020

Mini Notes

👉 ಜುಲೈ 11ರ ದಿನವನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ? 
- ವಿಶ್ವ ಜನಸಂಖ್ಯಾ ದಿನ
👉 ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಜಗದೀಪ್ ಯಾವ ಚಿತ್ರದ ಮೂಲಕ ಖ್ಯಾತಿ ಪಡೆದವರು?
- ಶೋಲೆ
👉 ಭಾರತೀಯ ರಿಸರ್ವ್ ಬ್ಯಾಂಕಿನ ಈಗಿನ ಗವರ್ನರ್ ಯಾರು?
- ಶಕ್ತಿಕಾಂತ್ ದಾಸ್
👉 ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿಭಾಯಿಸುತ್ತಿರುವ ಖಾತೆ ಯಾವುದು?
- ಸಂಸದೀಯ ವ್ಯವಹಾರ
👉 ಪ್ರಸಿದ್ದ ಹಾಜೀ ಆಲಿ ದರ್ಗಾ, ಭಾರತದ ಯಾವ ನಗರದಲ್ಲಿದೆ?
-ಮುಂಬೈ
👉 ಇಥಿಯೋಪಿಯಾ ದೇಶದ ರಾಜಧಾನಿ ಯಾವುದು?
- ಅಡಿಸ್ ಅಬಾಬಾ
☘☘

ನಾಗರಪಂಚಮಿ

ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಾ ಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ. ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ.  ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ. 
ಕುಶ ಸಮಿದೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗಿಯು “ಯಾರು ಈ ಕೃತ್ಯವನ್ನು ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ” ಎಂದು ಶಪಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಧ್ಯಾನವನ್ನು ಮುಗಿಸಿ ಎಚ್ಚೆತ್ತ ಶಮೀಕ ಮುನಿಯು ತನ್ನ ಮಗನು ಧರ್ಮಿಷ್ಠನಾದ ಭರತಖಂಡದ ಚಕ್ರವರ್ತಿಯನ್ನು ಶಪಿಸಿದ್ದನ್ನು ತಿಳಿದು ಪಶ್ಚಾತ್ತಾಪ ಪಡುತ್ತಾನೆ. ತನ್ನ ಶಿಷ್ಯಂದಿರಲ್ಲಿಯೇ ಓರ್ವನನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ ಆತನಿಗೆ ತನ್ನ ಮಗನ ಶಾಪದ ವೃತ್ತಾಂತವನ್ನು ತಿಳಿಸಿ , ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆಗಳನ್ನು ನೀಡುತ್ತಾನೆ.
ಮುನಿಯ ಶಾಪದ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಅಪಾರ ದುಃಖವಾಗುತ್ತದೆ. ಸಿಟ್ಟಿನ ಭರದಲ್ಲಿ ತಾನು ಶಮೀಕ ಮುನಿಗಳಿಗೆ ಮಾಡಿದ ಅಪಚಾರದ ವಿಷಯವನ್ನು ನೆನಪಿಸಿಕೊಂಡು ವ್ಯಥೆ ಪಡುತ್ತಾನೆ. ತಾನು ಮಾಡಿದ ಅಂತಹ ಘೋರವಾದ ತಪ್ಪಿಗೆ ಶೃಂಗಿ ಮುನಿಯು ಶಪಿಸಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ, ತಕ್ಷಕ ಬರಲಿ, ತನ್ನನ್ನು ಕಚ್ಚಿ ಸಾಯಿಸಲಿ ಎಂದುಕೊಂಡು ಸಾಯಲು ಸಿದ್ಧನಾಗುತ್ತಾನೆ. ಆದರೆ ಅರಸನ ಮಂತ್ರಿಗಳು , ಕುಲಪುರೋಹಿತರು , ಪರಿವಾರದವರೆಲ್ಲ ಸೇರಿ ಪರೀಕ್ಷಿತನನ್ನು ತಕ್ಷಕನಿಂದ ರಕ್ಷಿಸಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅರಸನನ್ನು ಒಂದು ರಕ್ಷಿತ ಗೃಹದಲ್ಲಿ ಇರಿಸಿ ಒಂದು ಹುಳುವೂ ಕೂಡಾ ಒಳಗೆ ಪ್ರವೇಶಿಸದಂತೆ ಭದ್ರವಾದ ಕಾವಲನ್ನು ಇರಿಸುತ್ತಾರೆ.
ಆದರೆ ಇಂತಹ ಯಾವುದೇ ಭದ್ರತೆಯು ಮುನಿಯ ಶಾಪದಿಂದ ಉಂಟಾಗಬಹುದಾದ ತನ್ನ ಮರಣವನ್ನು ತಪ್ಪಿಸಲಾರದು, ತನ್ನ ಮರಣವು ನಿಶ್ಚಿತ ಎಂಬುದನ್ನು ಅರಿತಿದ್ದ ಪ್ರಾಜ್ಞನಾದ ಪರೀಕ್ಷಿತನು ತನ್ನ ಜೀವನದ ಕೊನೆಯ ಆ ಏಳು ದಿನಗಳನ್ನು ಪುಣ್ಯ ಕಥಾ ಶ್ರವಣ ಮಾಡುತ್ತಾ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಅವನ ಇಚ್ಛೆಯಂತೆ ಶುಕ ಮುನಿಗಳು ಆತನಿಗೆ ಭಾಗವತ ಪುರಾಣಗಳ ಕಥೆಗಳನ್ನು ಹೇಳುತ್ತಾರೆ. ಅರಸನು ತನ್ನ ರಾಣಿ ಇರಾವತಿಯೊಡಗೂಡಿ ದೇವರ ಭಜನೆಯಲ್ಲಿಯೇ ಆ ಏಳು ದಿನಗಳನ್ನು ಕಳೆಯುತ್ತಾನೆ.
ಶೃಂಗಿ ಮುನಿಯ ಶಾಪದಿಂದ ತಕ್ಷಕನು ಪೇಚಿಗೆ ಸಿಲುಕುತ್ತಾನೆ. ತನಗೂ ಪರೀಕ್ಷಿತನಿಗೂ ನೇರವಾಗಿ ಯಾವುದೇ ದ್ವೇಷ ಇಲ್ಲದಿದ್ದರೂ ವಿನಾಕಾರಣ ಧರ್ಮಿಷ್ಠನಾದ ಆ ಚಕ್ರವರ್ತಿ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕು. ಇಲ್ಲದಿದ್ದಲ್ಲಿ ಶೃಂಗಿ ಮುನಿಯ ಶಾಪ ಹುಸಿಯಾಗಿ ಆತನ ಕೋಪಕ್ಕೆ ತಾನು ಕಾರಣನಾಗಬೇಕಾಗುತ್ತದೆ ಎಂದು ಚಿಂತಿಸುತ್ತಾನೆ. ಏನು ಮಾಡಲಿ ಎಂಬುದಾಗಿ ಚಿಂತಿಸುತ್ತಾನೆ. ಆಗ ಅವನಿಗೆ ಈ ಹಿಂದೆ ಅರ್ಜುನನು ಖಾಂಡವ ವನವನ್ನು ದಹಿಸುವ ಸಂದರ್ಭದಲ್ಲಿ ಅನೇಕ ನಾಗಗಳ ಜೊತೆಯಲ್ಲಿ ತನ್ನ ಹೆಂಡತಿಯನ್ನು ಕೂಡಾ ಕೊಂದು ತನ್ನ ಮಗ ಅಶ್ವಸೇನನನ್ನು ಅರೆಗಡಿದುದು ನೆನಪಾಗುತ್ತದೆ. ಆ ದ್ವೇಷವನ್ನೇ ನೆಪವಾಗಿ ಇಟ್ಟುಕೊಂಡು ತಾನು ಇಂದು ಆ ಅರ್ಜುನನ ಮೊಮ್ಮಗನಾದ ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತೇನೆ ಎಂಬುದಾಗಿ ಹೊರಡುತ್ತಾನೆ. 
ಆದರೆ ಪರೀಕ್ಷಿತನು ಇರುವ ಆ ರಕ್ಷಿತ ಗೃಹಕ್ಕೆ ಬಿಗಿಯಾದ ಭದ್ರತೆ ಇದೆ. ತನಗೆ ಒಳಗಡೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬುದು ತಕ್ಷಕನಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ದು ಕೊಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ತಕ್ಷಣ ಆತನು ಒಂದು ಉಪಾಯವನ್ನು ಮಾಡುತ್ತಾನೆ. ತಾನು ಒಂದು ಚಿಕ್ಕ ಹುಳುವಿನ ರೂಪ ಧರಿಸಿ ಆ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಅರಸನು ಆ ಹಣ್ಣನ್ನು ಕತ್ತರಿಸಿದಾಗ ಅದರಲ್ಲಿ ಹುಳ ಇರುವುದನ್ನು ನೋಡುತ್ತಾನೆ. ಪ್ರಾಜ್ಞನಾದ ಪರೀಕ್ಷಿತನಿಗೆ ಆ ಹುಳವೇ ತಕ್ಷಕ ಎಂಬುದು ವಿಧಿತವಾಗುತ್ತದೆ. ಹುಳದ ರೂಪದಲ್ಲಿದ್ದ ತಕ್ಷಕನು ಬೆಳೆ ಬೆಳೆದು ದೊಡ್ಡದಾಗಿ ನಿಜರೂಪ ಧರಿಸಿ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತಾನೆ.
ಸಾಯುವ ಸಂದರ್ಭದಲ್ಲಿ ಅರಸನು ದುಃಖಿಸುತ್ತಿರುವ ತನ್ನ ರಾಣಿಯಾದ ಇರಾವತಿಯನ್ನು ಕರೆದು “ನನ್ನೊಡನೆ ನೀನೂ ಕೂಡಾ ಸಹಗಮನ ಮಾಡಿಕೊಳ್ಳಬೇಡ , ನೀನು ಕ್ಷತ್ರಿಯಾಣಿಯಾಗಿ ನಿನ್ನ ಕರ್ತವ್ಯವನ್ನು ಮಾಡು , ಮಗನಾದ ಜನಮೇಜಯನು ಇನ್ನೂ ತುಂಬಾ ಚಿಕ್ಕವನು , ಏನೂ ಅರಿಯದವನು , ಆತನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡು , ನಂತರ ಅವನಿಗೆ ಪಟ್ಟವನ್ನು ಕಟ್ಟು , ನನ್ನ ಮರಣದ ಗುಟ್ಟನ್ನು ಅವನಿಗೆ ತಿಳಿಸಬೇಡ , ಸರ್ಪ ದಂಶನದಿಂದ ನಾನು ತೀರಿಕೊಂಡೆ ಎಂಬ ಸತ್ಯವನ್ನು ಯಾವುದೇ ಕಾರಣಕ್ಕೂ ಆತನಿಗೆ ತಿಳಿಸಬೇಡ , ತಿಳಿದರೆ ಸಹಜವಾಗಿಯೇ ಅವನಲ್ಲಿಯೂ ನಾಗಕುಲದ ಮೇಲೆ ವೈರತ್ವ ಬೆಳೆಯುತ್ತದೆ , ನಾಗದ್ವೇಷ ಒಳ್ಳೆಯದಲ್ಲ” ಎಂದು ಹೇಳಿ ಆತ ಪ್ರಾಣ ಬಿಡುತ್ತಾನೆ.

         ಪರೀಕ್ಷಿತನ ಮರಣಾ ನಂತರ ಆತನ ಮಗ ಜನಮೇಜಯನು ಪಟ್ಟವೇರುತ್ತಾನೆ. ಜನಮೇಜಯನು ಭರತ ಖಂಡವನ್ನು ಆಳಿದ ದ್ವಾಪರಾ ಯುಗದ ಕೊನೆಯ ಚಕ್ರವರ್ತಿಯಾಗಿದ್ದಾನೆ. ದ್ವಾಪರಾ ಯುಗವು ಮುಗಿದು ಕಲಿಯುಗವು ಪ್ರಾರಂಭವಾಗುವ ಆ ಯುಗಸಂಧಿ ಕಾಲದಲ್ಲಿ ಆಳಿಕೊಂಡಿದ್ದವನು ಜನಮೇಜಯ. ಹೀಗಾಗಿ ಕಲಿಯುಗದ ಪ್ರಥಮ ಚಕ್ರವರ್ತಿಯೂ ಅವನೇ ಆಗಿದ್ದಾನೆ. ಒಂದು ರೀತಿಯಲ್ಲಿ ಆತನೊಬ್ಬ ಯುಗ ಪ್ರವರ್ತಕ. ಚಿಕ್ಕಂದಿನಲ್ಲಿಯೇ ಚಕ್ರವರ್ತಿ ಪಟ್ಟವನ್ನು ಸ್ವೀಕರಿಸಿ ಹಲವು ವರ್ಷಗಳವರೆಗೆ ಭರತ ಖಂಡವನ್ನು ಆಳಿ ಬೆಳೆದು ದೊಡ್ಡವನಾಗಿದ್ದರೂ ಆತನಿಗೆ ತನ್ನ ತಂದೆಯ ಸಾವಿನ ರಹಸ್ಯವು ತಿಳಿದಿರಲಿಲ್ಲ. ಏಕೆಂದರೆ ಆತನ ತಾಯಿ ಇರಾವತಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಯಾರೂ ಕೂಡಾ ಆತನಿಗೆ ಆ ವಿಷಯವನ್ನು ತಿಳಿಸಿರಲಿಲ್ಲ. 

ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಆತನ ಶಿಷ್ಯನಾದ ಉತ್ತಂಕ ಎಂಬ ವಟುವೊಬ್ಬನು ವಿದ್ಯಾಭ್ಯಾಸವನ್ನು ಮೂರೈಸಿದ ಬಳಿಕ ತನ್ನ ಗುರುಗಳಿಗೆ ಗುರುಕಾಣಿಕೆಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಆದರೆ ವೇದ ಮುನಿಗಳು ಶಿಷ್ಯರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಉತ್ತಂಕನು ಬಂದು ಗುರುಗಳಿಗೆ ವಂದಿಸಿ “ಗುರುಗಳೇ ನಿಮ್ಮ ದಯೆಯಿಂದಲೇ ನಾನು ವಿದ್ಯೆಯನ್ನು ಕಲಿತೆ , ನಾನು ನಿಮಗೆ ಗುರುದಕ್ಷಿಣೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕೆಂಬುದನ್ನು ಹೇಳಿ , ತಂದು ಕೊಡುವೆ , ಅದನ್ನು ದಯವಿಟ್ಟು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ವೇದಮುನಿಗಳು “ನೀನು ಉತ್ತಮ ಪ್ರಜೆಯಾದರೆ ಅದೇ ನನಗೆ ಗುರುಕಾಣಿಕೆ , ನಾನು ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ , ಬೇಕಿದ್ದರೆ ನೀನು ಗುರುಪತ್ನಿಯನ್ನು ಕೇಳಿ ನೋಡು” ಎಂದು ಉತ್ತಂಕನನ್ನು ತನ್ನ ಹೆಂಡತಿಯೆಡೆಗೆ ಕಳುಹಿಸುತ್ತಾನೆ. 

ಉತ್ತಂಕನು ಗುರುಪತ್ನಿ ಇದ್ದೆಡೆಗೆ ಹೋಗಿ ವಂದಿಸಿ “ತಾಯಿ ನನ್ನ ವಿದ್ಯಾಭ್ಯಾಸ ಮುಗಿದಿದೆ , ನೀವು ನನ್ನನ್ನು ಮಗನಂತೆ ಸಾಕಿ ಸಲಹಿದ್ದೀರಿ , ನಾನು ಗುರುಕಾಣಿಕೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕು ಹೇಳಿ” ಎನ್ನುತ್ತಾನೆ. ಆಗ ಆಕೆಯು “ನಾನು ಪೂಜೆಗೆಂದು ಸುಮಂಗಲಿಯರನ್ನು ಆಹ್ವಾನಿಸಿದ್ದೇನೆ , ಅವರೆಲ್ಲ ಬರುವಾಗ ನಾನು ಬರಿ ಕಿವಿಯಲ್ಲಿ ಇರುವುದು ಸರಿಯಲ್ಲ , ಹೀಗಾಗಿ ಆ ಒಂದು ದಿನದ ಮಟ್ಟಿಗೆ ಪೌಷ್ಯ ರಾಜನ ಹೆಂಡತಿಯ ಕಿವಿಯ ಓಲೆಗಳನ್ನು ತಂದು ಕೊಡುವೆಯಾ” ಎಂದು ಕೇಳುತ್ತಾಳೆ. ಉತ್ತಂಕನು ಆದೀತು ಎಂದು ಹೇಳಿ ಅವಳಿಗೆ ವಂದಿಸಿ ಪೌಷ್ಯ ರಾಣಿಯಲ್ಲಿಗೆ ಹೋಗುತ್ತಾನೆ. ರಾಣಿಯು ಬಂದಿರುವ ವಟುವಿಗೆ ವಂದಿಸಿ ಉಪಚರಿಸಿ ಬಂದಿರುವ ಕಾರಣವನ್ನು ಕೇಳುತ್ತಾಳೆ. ಉತ್ತಂಕನು ವಿಷಯವನ್ನು ತಿಳಿಸಿದಾಗ , ರಾಣಿಗೆ ತುಂಬಾ ಸಂತೋಷವಾಗುತ್ತದೆ. “ಋಷಿ ಪತ್ನಿಯೋರ್ವಳು ನನ್ನ ಆಭರಣಗಳನ್ನು ಬಯಸಿದ್ದಾಳೆ ಎಂದರೆ ಅದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ , ಕೇವಲ ಒಂದು ದಿನದ ಮಟ್ಟಿಗಲ್ಲ ಶಾಶ್ವತವಾಗಿ ಅವುಗಳನ್ನು ಆ ಮುನಿ ಪತ್ನಿಗೆ ನೀಡುತ್ತೇನೆ , ಆದರೆ ಕೊಂಡು ಹೋಗುವಾಗ ಜಾಗ್ರತೆ , ಇವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದ ಆಭರಣಗಳಾಗಿವೆ , ಈ ಹಿಂದೆ ತಕ್ಷಕನು ಅವುಗಳನ್ನು ಅಪರಿಸಲು ಪ್ರಯತ್ನಿಸಿದ್ದಾನೆ , ಹೀಗಾಗಿ ವಿಶೇಷವಾಗಿ ಎಚ್ಚರವಹಿಸಿ” ಎಂದು ಹೇಳಿ ಉತ್ತಂಕನಿಗೆ ನವರತ್ನ ಖಚಿತವಾದ ಆ ಆಭರಣಗಳನ್ನು ನೀಡುತ್ತಾಳೆ.

ಉತ್ತಂಕನು ಆಭರಣಗಳನ್ನು ಗಂಟು ಕಟ್ಟಿಕೊಂಡು ಬರುವಾಗ ಪೌಷ್ಯ ರಾಣಿಯು ಹೇಳಿದಂತೆಯೇ ದಾರಿಯಲ್ಲಿ ತಕ್ಷಕನು ಅವನನ್ನು ಅಡ್ಡಯಿಸುತ್ತಾನೆ. ಫಣಿಗಳಿಗೆ ಮಣಿ ರತ್ನಗಳ ಮೇಲೆ ವ್ಯಾಮೋಹ ಜಾಸ್ತಿ ತಾನೇ ? ಹೀಗಾಗಿ ಅವನು ಉತ್ತಂಕನನ್ನು ವಂಚಿಸಿ ಅವನ ಬಳಿಯಿದ್ದ ಆಭರಣಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಪಾತಾಳದಲ್ಲಿ ಬಚ್ಚಿಡುತ್ತಾನೆ. ಅಸಹಾಯಕನಾದ ಉತ್ತಂಕನು ಅಳುತ್ತಾನೆ , ಹೇಗಾದರೂ ಮಾಡಿ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡು ನೇರವಾಗಿ ಹಸ್ತಿನಾವತಿಗೆ ಹೋಗುತ್ತಾನೆ. ಅಲ್ಲಿ ಅರಸನಾದ ಜನಮೇಜಯನನ್ನು ಗುಪ್ತವಾಗಿ ಭೇಟಿಮಾಡಿ ಆತನಿಗೆ ಆತನ ತಂದೆ ಪರೀಕ್ಷಿತನ ಮರಣ ರಹಸ್ಯವನ್ನು ತಿಳಿಸುತ್ತಾನೆ. ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ತಿಳಿದ ಜನಮೇಜಯನು ಸಿಟ್ಟಿನಿಂದ ಹಾರಾಡುತ್ತಾನೆ. ಆಗ ಉತ್ತಂಕನು “ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಇಚ್ಛೆ ನಿನಗಿದ್ದರೆ ಈ ಕೂಡಲೇ ಸರ್ಪಯಾಗವನ್ನು ಮಾಡು , ನಾಗಕುಲವನ್ನೇ ನಾಶ ಮಾಡು” ಎಂದು ಹೇಳಿ ಆತನಲ್ಲಿ ನಾಗದ್ವೇಷದ ಬೀಜವನ್ನು ಬಿತ್ತಿ ಹೊರಟುಹೋಗುತ್ತಾನೆ.

ತಾಯಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಎಷ್ಟೇ ಹೇಳಿದರೂ ಕೇಳದ ಜನಮೇಜಯನು ತಕ್ಷಕನ ಮೇಲೆ ಕುಪಿತನಾಗಿ ಸಂಪೂರ್ಣ ನಾಗಕುಲವನ್ನೇ ನಾಶಪಡಿಸುತ್ತೇನೆ ಎಂಬುದಾಗಿ ಸರ್ಪಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಜಗತ್ತಿನಲ್ಲಿ ಈ ಹಿಂದೆ ಯಾರೂ ಮಾಡದೇ ಇದ್ದ , ಮುಂದೆ ಕೂಡಾ ಯಾರೂ ಮಾಡದಂತಹ ಸರ್ಪಯಾಗವನ್ನು ಮಾಡಲು ಉದ್ಯುಕ್ತನಾಗುತ್ತಾನೆ. ಅದಕ್ಕಾಗಿ ಬೃಹತ್ ಯಾಗ ಶಾಲೆಯನ್ನು ನಿರ್ಮಿಸಿ , ಋಷಿ ಮುನಿಗಳನ್ನು ಬ್ರಾಹ್ಮಣರನ್ನೆಲ್ಲ ಆಮಂತ್ರಿಸಿ , ಬೇಡಿದ ವಿಪ್ರರಿಗೆ ಅವರಿಗೆ ಬೇಕಾದುದನ್ನು ದಾನ ಮಾಡುತ್ತಾ ವಿಜೃಂಭಣೆಯಿಂದ ಯಾಗವನ್ನು ನಡೆಸುತ್ತಾನೆ. ಅಧ್ವರ್ಯುವಾಗಿ ತಾನೇ ಕುಳಿತುಕೊಳ್ಳುತ್ತಾನೆ. ಪುರೋಹಿತರು ಮಂತ್ರೋಚ್ಛಾರಣೆ ಮಾಡಿ ಆಹ್ವಾನಿಸಿದಂತೆ ಮಂತ್ರದ ವಶೀಕರಣಕ್ಕೆ ಸಿಲುಕಿದ ನಾಗಗಳು ಒಂದೊಂದಾಗಿ ಬಂದು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ.

ಹಲವು ನಾಗ ಸಂತತಿಗಳು ಅಳಿದು ಹೋಗುತ್ತವೆ. ಎಲ್ಲಾ ನಾಗಗಳು ಸುಟ್ಟು ಹೋದರೂ ತಕ್ಷಕನ ಸುಳಿವೇ ಇರಲಿಲ್ಲ. ಆತನನ್ನು ಸ್ವರ್ಗದಲ್ಲಿ ದೇವೇಂದ್ರನು ರಕ್ಷಿಸಿ ಹಿಡಿದಿಟ್ಟುಕೊಂಡಿದ್ದ. ಇದನ್ನು ಅರಿತ ಪುರೋಹಿತರು “ದೇವೇಂದ್ರ ಸಹಿತನಾಗಿ ತಕ್ಷಕನು ಬರಲಿ” ಎಂಬುದಾಗಿ ಮಂತ್ರ ಉಚ್ಛರಿಸುತ್ತಾರೆ. ಹೆದರಿದ ದೇವೇಂದ್ರ ತಾನು ತಪ್ಪಿಸಿಕೊಳ್ಳುತ್ತಾನೆ. ಇನ್ನೇನು ತಕ್ಷಕ ಬಂದು ಬೆಂಕಿಯಲ್ಲಿ ಬೀಳುತ್ತಾನೆ ಎಂಬಾಗ , ಆಸ್ತೀಕನೆಂಬ ವಟುವು ಬಂದು ತಡೆಯುತ್ತಾನೆ. ಜನಮೇಜಯನಿಗೆ ಕೋಪ ಬರುತ್ತದೆ. “ಎಲೈ ವಟುವೇ , ನಿನಗೇನು ಬೇಕೋ ಕೇಳು , ಕೊಡುವೆ , ಯಾಗವನ್ನು ನಿಲ್ಲಿಸಬೇಡ” ಎನ್ನುತ್ತಾನೆ. ಆಗ ಆಸ್ತೀಕನು ಜನಮೇಜಯನನ್ನು ಸಂತೈಸಿ , ಆತನ ತಂದೆಯ ಮರಣದ ನಿಜ ವೃತ್ತಾಂತವನ್ನು ತಿಳಿಸುತ್ತಾನೆ. “ತಕ್ಷಕನದ್ದೇನೂ ತಪ್ಪಿರಲಿಲ್ಲ , ಅವನು ಕಚ್ಚುವುದಕ್ಕೆ ಮುನಿಯ ಶಾಪವೇ ಕಾರಣ. ಹಾಗಂತ ಮುನಿಯದ್ದೂ ತಪ್ಪಿರಲಿಲ್ಲ. ಅವನು ಶಪಿಸಲು ನಿನ್ನ ತಂದೆ ಆತನ ತಂದೆಗೆ ಮಾಡಿದ ಅಪಚಾರವೇ ಕಾರಣ. ಮತ್ತೆ ನಿನ್ನ ತಂದೆಯದ್ದೂ ತಪ್ಪಿರಲಿಲ್ಲ. ಆತ ಹಾಗೆ ತಪ್ಪಿ ನಡೆಯಲು ಕಲಿಯ ಪ್ರೇರಣೆಯೇ ಕಾರಣ. ಇದೆಲ್ಲವೂ ಕಲಿ ಕಾಲದ ಮಹಿಮೆ. ಆದ್ದರಿಂದ ನೀನು ಯಜ್ಞವನ್ನು ನಿಲ್ಲಿಸು. ಸುಮ್ಮನೇ ನಾಗ ಶಾಪಕ್ಕೆ ಒಳಗಾಗಬೇಡ” ಎನ್ನುತ್ತಾನೆ.

ಅಂತೆಯೇ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ಸರ್ಪಗಳಲ್ಲಿ ತಕ್ಷಕನ ಕುಲವೊಂದು ಉಳಿಯುತ್ತದೆ. ಸರ್ಪಯಾಗವನ್ನು ನಿಲ್ಲಿಸಿದ ತರುವಾಯ ಜನಮೇಜಯನು ತಕ್ಷಕನ ಕ್ಷಮೆ ಯಾಚಿಸುತ್ತಾನೆ. ತಕ್ಷಕನು ಆತನನ್ನು ಕ್ಷಮಿಸಿದರೂ ಅಷ್ಟರಲ್ಲಾಗಲೇ ಹಲವು ನಾಗ ಕುಲಗಳು ದಹಿಸಿ ಹೋಗಿದ್ದರಿಂದ ಜನಮೇಜಯನಿಗೆ ನಾಗದೋಷ ಬರುತ್ತದೆ. ಪರಿಣಾಮವಾಗಿ ಆತನನ್ನು ಕುಷ್ಟರೋಗವು ಬಾಧಿಸುತ್ತದೆ. ಮುಂದೆ ಅದಕ್ಕೆ ಪರಿಹಾರ ಸರ್ಪ ಶಾಂತಿ ಮಾಡಿಸಿಕೊಂಡು  ಹಲವು ಕಾಲಗಳವರೆಗೆ ಜನಮೇಜಯನು ಈ ಕಲಿಯುಗದಲ್ಲಿಯೂ ಚಕ್ರವರ್ತಿಯಾಗಿ ಮೆರೆಯುತ್ತಾನೆ. 

ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ. ಅಷ್ಟಕುಲ ನಾಗಗಳಾದ ಅನಂತ(ಶೇಷ) , ವಾಸುಕಿ , ಪದ್ಮ , ಮಹಾಪದ್ಮ , ತಕ್ಷಕ , ಕುಲೀಕ , ಕಾರ್ಕೋಟಕ ಮತ್ತು ಶಂಖಪಾಲ ಇವುಗಳನ್ನು ನಾವು ಆ ದಿನ ಪೂಜಿಸುತ್ತೇವೆ.  ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸುತ್ತೇವೆ. ಹಸಿಹಾಲು , ತುಪ್ಪ , ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸುತ್ತೇವೆ.  ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗುತ್ತೇವೆ.

Friday, July 24, 2020

12 ಆಧ್ಯಾತ್ಮಿಕ ನಿಯಮಗಳು

1.ಬೃಹತ ನಿಯಮ.
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.

2.ಸೃಷ್ಟಿಯ ನಿಯಮ.
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.

3.ನಮ್ರತೆಯ ನಿಯಮ.
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.

4.ಅಭಿವೃದ್ಧಿಯ ನಿಯಮ.
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ.ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.

5.ಜವಾಬ್ದಾರಿಯ ನಿಯಮ.
ನಮ್ಮ ಜೀವನಕ್ಕೆ ನಾವೇ ಹೊಣೆ,ಬೇರೆಯವರನ್ನು ದೂಷಿಸುವುದು ಸರಿಯಲ್ಲ.

6.ಸಂಪರ್ಕ ನಿಯಮ.
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ.ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.

7.ಗಮನದ ನಿಯಮ.
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.

8.ಅತಿಥ್ಯದ ನಿಯಮ.
ನಮ್ಮ ನೆಡವಳಿಕೆ , ನಮ್ಮ ಆಚಾರ , ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.

9.ಇಂದು ಮತ್ತು ಈಗಿನ ನಿಯಮ.
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.

10.ಪರಿವರ್ತನೆಯ ನಿಯಮ.
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.

11.ತಾಳ್ಮೆಯ ನಿಯಮ.
ತಾಳ್ಮೆ ,ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು.ಇವು ಜೀವನದಲ್ಲಿ ಬಹಳ ಮುಖ್ಯ.

12.ಯಶಸ್ಸಿನ ನಿಯಮ.
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ.ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ.ಆ ಯಶಸ್ಸಿನ ಖುಷಿಯ ಮುಂದೆ ಎಲ್ಲ ಪರಿಶ್ರಮವೂ ,ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ .

Thursday, July 23, 2020

Odisha in News

❣ Hockey World Cup 2023 – Rourkela + Bhubaneshwar 

❣ e-learning mobile App Madhu

❣ Suraj award to promote organ donation

❣ Ek Bharat, Shreshtha Bharat - Odisha + Maharashtra

❣ Drink from tap mission with UNICEF

❣ ABADHA scheme

❣ PEETHA scheme / Kalia scheme. 

❣ Mascot ‘Tiki Mausi’

❣ 21st Commonwealth Table Tennis Championship

❣ National Tribal Craft Mela- 2019 - Bhuvaneshwar

❣ 39th World Congress of Poets - Bhuvaneshwar

❣Jalsathi" programme.

❣ Khelo India University Games 2020 - Bhubaneshwar Odisha

Tuesday, July 21, 2020

Change Your Limiting beliefs

"I can't"
"I am not"
"It's too hard"
"It's too late"
"I will fail"
"Nobody wants me"
"It won't sell"
"I don't know how"
"Money is difficult to make"
"Life is hard"
" I can't succeed here"
"I am not smart enough"
These,and many more limiting beliefs will immobilize, stagnate and limit your life. They will keep you in a rut. Your experiences will justify them. And that will keep you in a circle of failure.
Change them today.
Begin by thinking positive thoughts. Replace all your negative thoughts with positive ones☝️ 
For instance if you think 'You can't' replace it with 'I can' If you think 'making money is hard' replace it with ' It's easy to make money. I am easily making lots of money. I'm a money magnet!'
Verbalize positive thoughts. Say it out. I am good. I am intelligent. I am a celebrity. I can do all things through God that strengthens me😇 I am a multi-billionaire. I am smart.
Start re-configuring your mind with empowering thoughts and you will see a new you emerging! You were born to do great things in life!

Say YES to Life!🤓

It's in you

Monday, July 20, 2020

Happiness is a state of mind

One is born in a first class hospital, 
the other is delivered at home, 
Both survived.

One went to a private primary school, 
the other to a public school, 
Both ended in the same high school.

One woke up from the bed, 
the other woke up on the floor, 
Both had a peaceful sleep.

One has expensive attire, 
the other simple and cheap, 
Both still cover their body.

One ate fried rice and Curry, 
the other ate home made rice & dal, 
Both filled their hunger.

One drives a Mercedes, 
the other uses public transport, 
Both reached their destination.

One may be reading this post from a iPhone, 
the other on an ordinary Smart phone,  
Both can see the same message. 

Lifestyle is not a competition, 
Various lanes lead to the same destination. 

Just because our neighbour has amassed material posessions, 
it does not mean that we are a failure.

Happiness doesn't come from having everything, 
but making the best out of what we have, 
it's all about how we see ourselves.

Happiness is not having what we like. 
Happiness is liking what we have and learning to make the most of it by giving it!!

ಸಮಾಜ

ಬ್ರಹ್ಮ ಸಮಾಜ

ಸ್ಥಾಪಕ:-ರಾಜಾ ರಾಮ್ ಮೋಹನ್ ರಾಯ್ 

ಸ್ಥಾಪನೆಯಾದ ವರ್ಷ:-1828

1814 ರಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು

1819 ರಲ್ಲಿ ಆತ್ಮೀಯ ಸಭಾ ಸ್ಥಗಿತವಾಯಿತು ನಂತರ 1828 ರಲ್ಲಿ ಬ್ರಹ್ಮ ಸಭಾ ಸ್ಥಾಪಿಸಿದರು

1829ರಲ್ಲಿ ಬ್ರಹ್ಮ ಸಮಾಜ ಎಂದು ಮರು ನಾಮಕರಣಗೊಂಡಿತು

ಸತಿ ಪದ್ದತಿ.ಜಾತಿ ಪದ್ದತಿ‌.ಮೂರ್ತಿ ಪೂಜೆ.ಬಹುಪತ್ನಿತ್ವ.ಬಾಲ್ಯ ವಿವಾಹ ಹಾಗೂ ಎಲ್ಲ ತರಹದ ಮೂಢನಂಬಿಕೆಗಳನ್ನು ಬ್ರಹ್ಮ ಸಮಾಜ ವಿರೋಧಿಸಿತು

ಸತಿ ಪದ್ದತಿಯನ್ನು ನಿರ್ಮೂಲಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಕೋರಿದರು ಸತಿ ಪದ್ದತಿಯ ವಿರುದ್ದದ ರಾಜಾ ರಾಮ್ ಮೋಹನ್ ರಾಯರ ಹೋರಾಟದ ಫಲವಾಗಿ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಂಕ್ ಸತಿ ಪದ್ದತಿಯು ಕಾನೂನು ಬಾಹಿರ ಎಂದು ಘೋಷಿಸಿದನು

ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

ಸಂವಾದ ಕೌಮುದಿ ಪತ್ರಿಕೆ ಆರಂಬಿಸಿ ಅದರ ಮೂಲಕ ಸಾಮಾಜಿಕ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಿದರು

ಇವರು ಇಂಗ್ಲೀಷ್ ಶಿಕ್ಷಣವನ್ನು ಪ್ರತಿಪಾದಿಸಿದರು 

ವೇದಾಂತ ಕಾಲೇಜನ್ನು ಸ್ಥಾಪಿಸಿದರು


ಪ್ರಾರ್ಥನಾ ಸಮಾಜ

ಸ್ಥಾಪಕ:- ಆತ್ಮರಾಮ್ ಪಾಂಡುರಂಗ

ಸ್ಥಾಪನೆಯಾದ ವರ್ಷ:-1867

ಇವರು ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದರು

ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು

ವಿಧವೆಯರ ಉದ್ಧಾರಕ್ಕಾಗಿ ಶಾಲೆಗಳನ್ನು ತೆರೆದರು


ಸತ್ಯಶೋಧಕ ಸಮಾಜ

ಸ್ಥಾಪಕ:-ಮಹಾತ್ಮ ಜ್ಯೋತಿಬಾ ಪುಲೆ

ಸ್ಥಾಪನೆಯಾದ ವರ್ಷ:-1873

ಮಹಾರಾಷ್ರದಲ್ಲಿ ಆರಂಭವಾದ ಬ್ರಾಹ್ಮನೇತರ ಚಳುವಳಿ

ಅಸ್ಪ್ರಷ್ಯ.ಅನಾಥರಿಗಾಗಿ.ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು

ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದರು

ಗುಲಾಮಗಿರಿ ಎಂಬ ಕ್ರತಿ ರಚಿಸಿದರು

ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು

1863 ರಲ್ಲಿ ಬಾಲ ವಿಧವೆಯರ ಉದ್ಧಾರಕ್ಕಾಗಿ ಪುನರ್ ವಸತಿ ಕೇಂದ್ರ ತೆರೆದರು

ಪುಲೆಯವರು ಅಂಬೇಡ್ಕರ್ ಅವರ ತಾತ್ವಿಕ ಗುರುವಾಗಿದ್ದರು

Saturday, July 18, 2020

List of Capitals of All Countries in the World

Capitals of European Countries

  1. Russia – Moscow
  2. United Kingdom – London
  3. Germany – Berlin
  4. Spain – Madrid
  5. Ukraine – Kiev
  6. Italy – Rome
  7. France – Paris
  8. Belarus – Minsk
  9. Austria – Vienna
  10. Romania – Bucharest
  11. Poland – Warsaw
  12. Hungary – Budapest
  13. Serbia – Belgrade
  14. Czechia – Prague
  15. Bulgaria – Sofia
  16. Belgium – Brussels
  17. Sweden – Stockholm
  18. Netherlands – Amsterdam
  19. Croatia – Zagreb
  20. Norway – Oslo
  21. Greece – Athens
  22. Finland – Helsinki
  23. Latvia – Riga
  24. Denmark – Copenhagen
  25. Ireland – Dublin
  26. North Macedonia – Skopje
  27. Lithuania – Vilnius
  28. Portugal – Lisbon
  29. Estonia – Tallinn
  30. Slovakia – Bratislava
  31. Albania – Tirana
  32. Moldova – Chisinau
  33. Slovenia – Ljubljana
  34. Bosnia and Herzegovina – Sarajevo
  35. Kosovo – Pristina
  36. Montenegro – Podgorica
  37. Switzerland – Bern
  38. Iceland – Reykjavík
  39. Luxembourg – Luxembourg
  40. Principality of Monaco – Monaco
  41. Gibraltar – Gibraltar
  42. Jersey – Saint Helier
  43. Isle of Man – Douglas
  44. Andorra – Andorra la Vella
  45. Guernsey – Saint Peter Port
  46. Faroe Islands – Tórshavn
  47. Åland Islands – Mariehamn
  48. Malta – Valletta
  49. Liechtenstein – Vaduz
  50. San Marino – San Marino
  51. Svalbard – Longyearbyen
  52. Vatican City – Città del Vaticano

Capitals of American Countries

  1. Peru – Lima
  2. Mexico – Mexico City
  3. Colombia – Bogotá
  4. Chile – Santiago
  5. Brazil – Brasília
  6. Argentina – Buenos Aires
  7. Venezuela – Caracas
  8. Cuba – Havana
  9. Ecuador – Quito
  10. Uruguay – Montevideo
  11. Honduras – Tegucigalpa
  12. Nicaragua – Managua
  13. Canada – Ottawa
  14. Haiti – Port-au-Prince
  15. Dominican Republic – Santo Domingo
  16. Guatemala – Guatemala City
  17. United States – Washington, D.C.
  18. Jamaica – Kingston
  19. Paraguay – Asunción
  20. Panama – Panama City
  21. Costa Rica – San José
  22. Puerto Rico – San Juan
  23. Bolivia – Sucre
  24. Bahamas – Nassau
  25. Suriname – Paramaribo
  26. El Salvador – San Salvador
  27. Trinidad and Tobago – Port-of-Spain
  28. Curacao – Willemstad
  29. Guyana – Georgetown
  30. Barbados – Bridgetown
  31. Martinique – Fort-de-France
  32. Antigua and Barbuda – Saint John’s
  33. Saint Lucia – Castries
  34. French Guiana – Cayenne
  35. Aruba – Oranjestad
  36. Grenada – Saint George’s
  37. Cayman Islands – George Town
  38. Virgin Islands – Charlotte Amalie
  39. Greenland – Nuuk
  40. Dominica – Roseau
  41. Saint Vincent and the Grenadines – Kingstown
  42. Belize – Belmopan
  43. Saint Kitts and Nevis – Basseterre
  44. British Virgin Islands – Road Town
  45. Guadeloupe – Basse-Terre
  46. Saint Martin – Marigot
  47. Saint Pierre and Miquelon – Saint-Pierre
  48. Turks and Caicos Islands – Cockburn Town
  49. Anguilla – The Valley
  50. Saint Barthelemy – Gustavia
  51. Falkland Islands – Stanley
  52. Sint Maarten – Philipsburg
  53. Bermuda – Hamilton
  54. Montserrat – Brades
  55. South Georgia and South Sandwich Islands – King Edward Point

Capitals of Asian Countries

  1. China – Beijing
  2. Japan – Tokyo
  3. Indonesia – Jakarta
  4. Thailand – Bangkok
  5. South Korea – Seoul
  6. Bangladesh – Dhaka
  7. Iran – Tehran
  8. Iraq – Baghdad
  9. Saudi Arabia – Riyadh
  10. Hong Kong – Hong Kong
  11. Singapore – Singapore
  12. Turkey – Ankara
  13. Vietnam – Hanoi
  14. Afghanistan – Kabul
  15. Jordan – Amman
  16. North Korea – Pyongyang
  17. Kuwait – Kuwait City
  18. Taiwan – Taipei
  19. Uzbekistan – Tashkent
  20. Yemen – Sanaa
  21. Syria – Damascus
  22. Azerbaijan – Baku
  23. Cambodia – Phnom Penh
  24. Philippines – Manila
  25. Malaysia – Kuala Lumpur
  26. Mongolia – Ulaanbaatar
  27. United Arab Emirates – Abu Dhabi
  28. Georgia – Tbilisi
  29. Armenia – Yerevan
  30. Turkmenistan – Ashgabat
  31. Kazakhstan – Nursultan
  32. Pakistan – Islamabad
  33. Kyrgyzstan – Bishkek
  34. Nepal – Kathmandu
  35. Burma – Nay Pyi Taw
  36. Israel – Jerusalem
  37. Laos – Vientiane
  38. Tajikistan – Dushanbe
  39. Sri Lanka – Colombo
  40. Oman – Muscat
  41. Qatar – Doha
  42. Macao – Concelho de Macau
  43. Lebanon – Beirut
  44. India – New Delhi
  45. East Timor – Dili
  46. Maldives – Malé
  47. Bahrain – Manama
  48. Cyprus – Nicosia
  49. Bhutan – Thimphu
  50. Brunei – Bandar Seri Begawan
  51. Palestine – Ramallah

Capitals of Australian/ Oceania Countries

  1. Australia – Canberra
  2. New Zealand – Wellington
  3. Christmas Island – Flying Fish Cove
  4. Norfolk Island – Kingston
  5. Cocos (Keeling) Islands – West Island
  6. Papua New Guinea – Port Moresby
  7. New Caledonia – Nouméa
  8. Fiji – Suva
  9. Solomon Islands – Honiara
  10. Kiribati – Tarawa
  11. Northern Mariana Islands – Saipan
  12. Vanuatu – Port-Vila
  13. Samoa – Apia
  14. Tonga – Nuku‘alofa
  15. Marshall Islands – Majuro
  16. French Polynesia – Papeete
  17. Tuvalu – Funafuti
  18. Cook Islands – Avarua
  19. American Samoa – Pago Pago
  20. Wallis and Futuna – Mata-Utu
  21. Guam – Hagåtña
  22. Nauru – Yaren
  23. Niue – Alofi
  24. Pitcairn Islands – Adamstown

Capitals of African Countries

  1. Democratic Republic of the Congo – Kinshasa
  2. Egypt – Cairo
  3. Kenya – Nairobi
  4. Ethiopia – Addis Ababa
  5. Zimbabwe – Harare
  6. Cameroon – Yaoundé
  7. Nigeria – Abuja
  8. Mali – Bamako
  9. Algeria – Algiers
  10. Angola – Luanda
  11. Ghana – Accra
  12. Burkina Faso – Ouagadougou
  13. Somalia – Mogadishu
  14. Republic of the Congo – Brazzaville
  15. Zambia – Lusaka
  16. Guinea – Conakry
  17. Uganda – Kampala
  18. Madagascar – Antananarivo
  19. Senegal – Dakar
  20. Libya – Tripoli
  21. Chad – N’Djamena
  22. Mozambique – Maputo
  23. Tunisia – Tunis
  24. Sierra Leone – Freetown
  25. Niger – Niamey
  26. Liberia – Monrovia
  27. Malawi – Lilongwe
  28. Eritrea – Asmara
  29. Mauritania – Nouakchott
  30. Central African Republic – Bangui
  31. Togo – Lomé
  32. Rwanda – Kigali
  33. South Africa – Pretoria
  34. Gabon – Libreville
  35. Sudan – Khartoum
  36. Morocco – Rabat
  37. Burundi – Bujumbura
  38. South Sudan – Juba
  39. Guinea-Bissau – Bissau
  40. Lesotho – Maseru
  41. Namibia – Windhoek
  42. Ivory Coast – Yamoussoukro
  43. Benin – Porto-Novo
  44. Botswana – Gaborone
  45. Djibouti – Djibouti
  46. Tanzania – Dodoma
  47. Western Sahara – El Aaiún or Laâyoune 
  48. Equatorial Guinea – Malabo
  49. Reunion – Saint-Denis
  50. Mauritius – Port Louis
  51. Cape Verde – Praia
  52. Eswatini – Mbabane
  53. Mayotte – Mamoudzou
  54. Sao Tome and Principe – São Tomé
  55. Comoros – Moroni
  56. Gambia – Banjul
  57. Seychelles – Victoria
  58. Saint Helena, Ascension and Tristan da Cunha – Jamestown