Saturday, December 28, 2024

ಶಿವನ ಕೊರಳಲ್ಲಿರುವ ಮುoಡ ಮಾಲೆಯ ಕಥೆ

ಭಗವಾನ್ ಶಿವ ಮತ್ತು ಸತಿಯವರ ಅದ್ಭುತ ಪ್ರೇಮವನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಇದು ಸಾಬೀತಾಗಿದೆ, ಸತಿಯು ಯಜ್ಞಕುಂಡದಲ್ಲಿ ಚಿತೆಯಾಗುವುದು ಮತ್ತು ಸತಿಯ ಶವವನ್ನು ಹೊತ್ತುಕೊಂಡು ಕೋಪಗೊಂಡ ಶಿವನ ತಾಂಡವ. ಇದು ಕೂಡ ಶಿವನ ಲೀಲೆಯೇ. ಏಕೆಂದರೆ ಈ ಸವಿನೆಪದಲ್ಲಿ ಶಿವನು 51 ಶಕ್ತಿಪೀಠಗಳನ್ನು ಸ್ಥಾಪಿಸಲು ಬಯಸಿದನು. ಶಿವನು ಸತಿಯವರನ್ನು ಮುಂಚೆಯೇ ತಿಳಿಸಿದ್ದಾರೆ ಈ ಶರೀರವನ್ನು ತ್ಯಾಗ ಮಾಡಬೇಕೆಂದು. ಇದೇ ಸಮಯದಲ್ಲಿ, ಶಿವನು ಸತಿಗೆ ತನ್ನ ಕಂಠದಲ್ಲಿ ಇರುವ ಮುಂಡಮಾಲೆಯ ರಹಸ್ಯವನ್ನು ವಿವರಿಸಿದನು.

ಮುಂಡಮಾಲೆಯ ರಹಸ್ಯ :

ಒಮ್ಮೆ ನಾರದ ಮುನಿಗಳ ಪ್ರೇರಣೆಯಿಂದ, ಸತಿಯು ಭಗವಾನ್ ಶಿವನನ್ನು ತನ್ನ ಕಂಠದಲ್ಲಿ ಇರುವ ಮುಂಡಮಾಲೆಯ ರಹಸ್ಯವನ್ನು ತಿಳಿಸಲು ಹಠ ಹಿಡಿದಳು. ಬಹಳಷ್ಟು ಮನವೊಲಿಸುವ ಪ್ರಯತ್ನಗಳ ನಂತರ, ಶಿವನು ರಹಸ್ಯವನ್ನು ಬಿಚ್ಚಿಹೇಳಿದ. ಶಿವನು ಸತಿಯನ್ನು ಕರೆದು ಹೇಳಿದನು, ಈ ಮುಂಡಮಾಲೆಯಲ್ಲಿ ಇರುವ ಎಲ್ಲಾ ಮುಂಡಗಳು ನಿಮ್ಮವೇ. ಸತಿ ಈ ವಿಷಯವನ್ನು ಕೇಳಿ ಆಶ್ಚರ್ಯಗೊಂಡಳು.

ಸತಿಯು ಶಿವನನ್ನು ಕೇಳಿದಳು, ಇದು ಹೇಗೆ ಸಾಧ್ಯ..? ಈ ಬಗ್ಗೆ ಶಿವನು ಹೇಳಿದ, ಇದು ನಿಮ್ಮ 108ನೇ ಜನ್ಮ. ಈ ಮುಂಚೆ ನೀವು 107 ಬಾರಿ ಜನ್ಮತಾಳಿಕೊಂಡು, ಶರೀರ ತ್ಯಾಗ ಮಾಡಿದ್ದೀರಿ, ಮತ್ತು ಈ ಎಲ್ಲಾ ಮುಂಡಗಳು ಆ ಪೂರ್ವ ಜನ್ಮಗಳ ಗುರುತುಗಳು. ಈ ಮಾಲೆಯಲ್ಲಿ ಇನ್ನೂ ಒಂದು ಮುಂಡದ ಕೊರತೆಯಿದೆ, ನಂತರ ಈ ಮಾಲೆ ಸಂಪೂರ್ಣವಾಗುತ್ತದೆ. ಶಿವನ ಮಾತುಗಳನ್ನು ಕೇಳಿ, ಸತಿಯು ಶಿವನನ್ನು ಕೇಳಿದರು, "ನಾನು ಪುನಃ ಪುನಃ ಜನ್ಮತಾಳುತ್ತೇನೆ, ಆದರೆ ನೀವು ಶರೀರ ತ್ಯಾಗ ಮಾಡುವುದಿಲ್ಲ." ಶಿವನು ನಕ್ಕು ಹೇಳಿದ, "ನಾನು ಅಮರಕಥೆಯನ್ನು ತಿಳಿದಿದ್ದೇನೆ, ಆದ್ದರಿಂದ ನನಗೆ ಶರೀರ ತ್ಯಾಗ ಮಾಡಬೇಕಾಗಿಲ್ಲ." ಇದಕ್ಕೆ, ಸತಿಯು ಕೂಡಾ ಅಮರಕಥೆಯನ್ನು ತಿಳಿಯಲು ಆಸಕ್ತಿ ತೋರಿಸಿದಳು. ಶಿವನು ಸತಿಗೆ ಕಥೆಯನ್ನು ಹೇಳುತ್ತಿರುವಾಗ, ಸತಿ ನಿದ್ರಿಸುತ್ತಿದ್ದಳು ಮತ್ತು ಕಥೆಯನ್ನು ಕೇಳಲಿಲ್ಲ. ಆದ್ದರಿಂದ, ಅವಳಿಗೆ ದಕ್ಷನ ಯಜ್ಞಕುಂಡದಲ್ಲಿ ಹಾರಿ ತನ್ನ ಶರೀರವನ್ನು ತ್ಯಾಗ ಮಾಡಬೇಕಾಗಿ ಬಂತು.

ಶಿವನು ಸತಿ ಮುಂಡವನ್ನು ಕೂಡಾ ಮಾಲೆಯಲ್ಲಿ ಸೇರಿಸಿದ. ಈ ರೀತಿ, 108 ಮುಂಡಗಳ ಮಾಲೆ ಸಿದ್ಧವಾಯಿತು. ಸತಿಯು ಮುಂದಿನ ಜನ್ಮದಲ್ಲಿ ಪಾರ್ವತಿಯಾಗಿ ಜನ್ಮತಾಳಿದಳು. ಈ ಜನ್ಮದಲ್ಲಿ, ಪಾರ್ವತಿಯು ಅಮರತ್ವವನ್ನು ಪಡೆಯುತ್ತಾಳೆ ಮತ್ತು ಅವಳು ಶರೀರ ತ್ಯಾಗ ಮಾಡಬೇಕಾಗಿಲ್ಲ..!