ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವಾಗ, ಇರುವ ಕಾಲವೇ ಸಂಕ್ರಾಂತಿ, ಸೂರ್ಯ ಮೀನದಲ್ಲಿ 29 ಡಿಗ್ರಿ ದಾಟಿ ಮೇಷದ 0 ಡಿಗ್ರಿ ಗೆ ಬಂದಾಗ ಅದು ಮೇಷ ಸಂಕ್ರಾಂತಿ. ಎಂದರೆ, ಮೇಷ ರಾಶಿಗೆ ಸೂರ್ಯ ಪ್ರವೇಶಿಸಿದ್ದಾನೆ ಎಂದರ್ಥ. ಅದೇ ರೀತಿ, ಮಕರ ಸಂಕ್ರಾಂತಿ ಎಂದರೆ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡಿದ್ದಾನೆ ಎಂದರ್ಥ. "ಸಂಕ್ರಾಂತಿ ಎಂದರೆ ಪ್ರವೇಶಕಾಲ ಎನ್ನಬಹುದು. 12 ರಾಶಿಗೆ 12 ಸಂಕ್ರಾಂತಿ.
ಅದೇ ರೀತಿ, ಚಂದ್ರನು, ಸೂರ್ಯನಿರುವ ಡಿಗ್ರಿಗೆ ಬಂದು ಹೋದಾಗ ಅಮಾವಾಸ್ಯೆ ಎನ್ನುತ್ತಾರೆ. ಎಂದರೆ ಸೂರ್ಯ ಚಂದ್ರ ನಮ್ಮ ಕಣ್ಣಿಗೆ ಒಂದೇ ಸರಲರೇಖೆಯಲ್ಲಿ ಆ ದಿನ ಗೋಚರಿಸುತ್ತಾರೆ. 0 ಡಿಗ್ರೀ ಅವರ ಅಂತರ ಇರ್ತದೆ.
ಸಾಮಾನ್ಯವಾಗಿ ಸೂರ್ಯ ದಿನಕ್ಕೊಂದು ಡಿಗ್ರೀಯಂತೆ 30 ದಿನಕ್ಕೆ 30 ಡಿಗ್ರೀ ಎಂದರೆ 1 ರಾಶಿ ಕ್ರಮಿಸುತ್ತಾನೆ. ಹಾಗಾಗಿ ಒಂದು ಅಮಾವಾಸ್ಯೆಯಿಂದ ಇನ್ನೊಂದು ಚಾಂದ್ರ ಅಮಾವಾಸ್ಯೆಯ ಒಳಗೆ ಸೂರ್ಯ ತನ್ನ ರಾಶಿ ಬದಲಿಸಿರುತ್ತಾನೆ. ಸಂಕ್ರಾಂತಿ ಬಂದಿರುತ್ತದೆ.
ಆದರೆ ವೃಶ್ಚಿಕ, ಧನು ಮಕರ ರಾಶಿಗಳಲ್ಲಿ ಕ್ರಮಿಸುವಾಗ ರವಿ ಶೀಘ್ರೊಚ್ಛದ( ಬ್ಲ್ಯಾಕ್ ಹೋಲ್ ಎನ್ನಬಹುದು ಆಧುನಿಕರ ಪ್ರಕಾರ) ಕಾರಣದಿಂದ ತನ್ನ ಸ್ಪೀಡ್ ಜಾಸ್ತಿ ಮಾಡುತ್ತಾನೆ. ಆಗ 2 ಅಮಾವಾಸ್ಯೆಯ ನಡುವೆ 2 ಸಂಕ್ರಾಂತಿ ಬರ್ತದೆ. ಎಂದರೆ,..ಸೂರ್ಯ ಒಂದು ಅಮಾವಾಸ್ಯೆ ಇಂದ ಇನ್ನೊಂದು ಅಮಾವಾಸ್ಯೆಯ ಒಳಗೆ 2 ಬಾರಿ ರಾಶಿ ಬದಲು ಮಾಡುತ್ತಾನೆ. ಇದೇ ತಿಥಿಕ್ಷಯ ಅಥವಾ ಅವಮಾಹ ಎಂದು ಹೆಸರು.
ಉದಾಹರಣೆಗೆ, ಒಂದೇ ದಿನ ಮಕರ ಸಂಕ್ರಾಂತಿ, ಅಮಾವಾಸ್ಯೆ ಬಂತು ಎಂದಿಟ್ಟುಕೊಳ್ಳುವ. ಸೂರ್ಯ29 ಡಿಗ್ರೀ ಧನು ಅಲ್ಲಿ ಇರ್ತಾನೆ. ಅವನು ಮುಂದಿನ 30 ದಿನಕ್ಕೆ ಬರುವ ಅಮಾವಸ್ಯೆಗೆ ಮೊದಲೇ ಮಕರ ರಾಶಿ ದಾಟಿ, ಕುಂಭ 1 ಡಿಗ್ರೀ ಬಂದ ಎಂದುಕೊಳ್ಳಿ. ಆಗ 2 ಬೇರೆ ಬೇರೆ ರಾಶಿ ಪ್ರವೇಶ, ಒಂದೇ ಚಂದ್ರಮಾಸದಲ್ಲಿ ಆಯಿತಲ್ಲವೇ? ಕುಂಭ ಹಾಗೂ ಮಕರದ ಸೂರ್ಯನ ಪ್ರವೇಶ ಒಂದೇ ತಿಂಗಳಿನಲ್ಲಿ ಬಂತು. ಇದೇ ತಿಥಿಕ್ಷಯ ಎನ್ನಬಹುದು. ಚಾಂದ್ರತಿಥಿಯಿಂದ ಸೌರದಿನಗಳನ್ನು ಕಳೆದಾಗ ನಮಗೆ ಬೇಕಾದ ಅವಮಾಹ ಅಥವಾ ತಿಥಿಕ್ಷಯ ಸಿಗುತ್ತದೆ.
ಇದೇ ರೀತಿ, ಸುಮಾರು 30 ಸಾರಿ ಆಗಿ 1 ಕ್ಷಯಮಾಸ ಬರ್ತದೆ. ಅದು ಬರಲು ಸುಮಾರು 144 ವರ್ಷ ಬೇಕು. ?..ಇದನ್ನ ಆಧರಿಸಿಯೇ,..ಹಿಂದೆ 1977 ರಲ್ಲಿ ಬಂದಿತ್ತು.
.ಇನ್ನು 144 ವರ್ಷ ನಂತರ ಅಂದರೆ 2111 ರಲ್ಲಿ ನಡಿಯುತದೆ. ನಾನು ಇರಲ್ಲ. ನೀವು ಇದ್ದರೆ ನೋಡಿ..🤭🤭…ಒಟ್ಟಾರೆ ಸೂರ್ಯನ ವೇಗದಿಂದ ಉಂಟಾದ ಸ್ಥಿತಿಯೇ ಈ ಅವಮ ದಿನಕ್ಕೆ ಕಾರಣ….
ಈಗಿನವರ ಪ್ರಕಾರ ಇದನ್ನು, ಬ್ಲ್ಯಾಕ್ ಹೋಲ್ ಕಾನ್ಸೆಪ್ಟ್ ಎನ್ನಬಹುದು. ಹಾಗು ಖಗೊಳದಲ್ಲಿ ಪೂರ್ವಾಭಿಮುಖವಾಗಿ 23ವರೆ ಡಿಗ್ರೀ ಕ್ರಾಸ್ ಆಗಿ ಗ್ರಾವಿಟಿ ಇರ್ತದೆ. ರವಿ ವೃಶ್ಚಿಕ ರಾಶಿ, ಎಂದರೆ ನವೆಂಬರ್ ಟೈಮ್ ಅಲ್ಲಿ, ಸ್ಪೀಡ್ ರೊಟೇಟ್ ಮಾಡ್ತಾನೆ. ಇದನ್ನೇ ಸ್ಪೇಸ್ ಖಗೋಳದಲ್ಲಿ, ಅಂಗುಲರ್ ಮೊಮೆಂಟಮ್, torque ಅಥವಾ, ಸೆಂಟ್ರಿಪೀಠಲ್ ಫೋರ್ಸ್ , ಕೇಂದ್ರೀಯ ಬಲ ಎನ್ನಬಹುದು. ಭೂಮಿ 23 ವರೆ ಡಿಗ್ರೀ ಓರೆಯಾಗಿ ನಿಂತಿರುವುದು, ನಾರ್ವೆ ಇತ್ಯಾದಿ ದೇಶಗಳು 6 ತಿಂಗಳಿಗೊಮ್ಮೆ ಸೂರ್ಯ ಹಗಲು, 6 ತಿಂಗಳು ರಾತ್ರಿ ಇದೇ ಕಾರಣಕ್ಕಾಗಿ . ಅದಕ್ಕೆ ಕಪ್ಪೆಗಳು 6 ತಿಂಗಳು ಗ್ರೀಷ್ಮ ನಿದ್ದೆಗೆ ಜಾರಿ ಎದ್ದೇಳುವ ಕಾಲವಿದು. ಮೇಕೆಗಳು ಸಂತಾನೋತ್ಪತ್ತಿ ಮಾಡುವ ಕಾಲವಿದು. ಸಿದ್ಧಿ ಬುದ್ಧಿಯರು ವಿನಾಯಕನನ್ನು ಕಾಣಬರುವ ಕಾಲ. ಈ ಕಾಲದಲ್ಲಿ ಜೇನುತುಪ್ಪ ಉತ್ಕೃಷ್ಟ ವಾಗಿ ಬೆಳೆಯುತ್ತದೆ ಎಂಬ ನಂಬಿಕೆ.ಜಾಲೀಮರ, ಇತ್ಯಾದಿ ವಿಷದ ಮರಗಳು ಬೆಳೆಯುತ್ತವೆ. ಸಾವು ನೋವು ಹೆಚ್ಚು. ಭೂಕಂಪ, ಈ.ಸಮುದ್ರ ಹಾನಿ ಜಾಸ್ತಿ.ಎಲ್ಲೆಂದರಲ್ಲಿ ಕಾಗೆಗಳ ಸಾವು, ಹದ್ದುಗಳ ಹಾರಾಟ , ಅಕಾಲಿಕ ಬರ ಇಲ್ಲವೇ ವಿಪರೀತ ಸುನಾಮಿ…ಇವು ಅಗಸ್ತ್ಯ ಸಂಹಿತಾ ಗ್ರಂಥದಲ್ಲಿ ಹೇಳಿರುವ 144 ವರ್ಷಕ್ಕೊಮ್ಮೆ ಬರುವ ಕ್ಷಯಮಾಸದ ಲಕ್ಷಣಗಳು. ಇದು ಮಾಂತ್ರಿಕ, ಮಂತ್ರವಾದಿ ಗಳಿಗೆ ಹೇಳಿ ಮಾಡಿಸಿದ ಕಾಲ.ಅಗಸ್ತ್ಯರು ಇದನ್ನು ಬೋಧಿಸಿರುತ್ತಾರೆ. ಶ್ವೇತವರಾಹ ಕಲ್ಪವೃತ್ತಾಂತದಲ್ಲಿ. ಲಕ್ಷಣಗಳು ಬಹುಶಃ ಸರಿಯಾಗಿರಬಹುದೇನೋ…ಯಮನ ಉಪಾಸನೆ, ತಮಿಳುನಾಡಿನ ಭೇತಬಲಿ ಅಮ್ಮನ ಆರಾಧನೆ ಇತ್ಯಾದಿ ಆಚರಣೆ ಶ್ರೇಷ್ಟವಾಗಿರಬಹುದು, ಎಂಬುದು ನನ್ನ ಊಹೆಯಷ್ಟೇ…ಹೆಚ್ಚೇನು ತಿಳಿದಿಲ್ಲ ಇದರ ಬಗ್ಗೆ..
ಇದೇ ಜೀವನ, ಖಗೊಳಕ್ಕೆ ಇರುವ ಅವಿನಾಭಾವ ಸಂಬಂಧ …ಅಳಿವಿಲ್ಲದ ಅನುಬಂಧ …