ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

SANTOSH KULKARNI
By -
0
ಅನಾರೋಗ್ಯಕ್ಕೆ ಒಳಗಾಗಲು ದುರ್ಬಲ ರೋಗನಿರೋಧಕ ಶಕ್ತಿ ಕೂಡ ಬಹು ದೊಡ್ಡ ಕಾರಣ. ದುರ್ಬಲ ರೋಗ ನಿರೋಧಕ ಶಕ್ತಿಯು ದೇಹದ ಪ್ರತಿರಕ್ಷೆಯನ್ನು ಕಡಿಮೆ ಮಾಡುತ್ತದೆ. ಆದರೆ ರೋಗನಿರೋಧಕ ಶಕ್ತಿಯ ದೌರ್ಬಲ್ಯವು ಒಂದು ರೋಗವಲ್ಲ. ಬದಲಾಗಿ ಅದು ಒಂದು ಸಮಸ್ಯೆಯಾಗಿದೆ. ಈ ಸಮಸ್ಯೆ ಅನೇಕ ರೋಗಗಳಿಗೆ ಕಾರಣವಾಗಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕ ರೀತಿಯ ಆಹಾರವನ್ನು ಸೇವಿಸಬೇಕು. ಅಷ್ಟೇ ಅಲ್ಲ, ದೇಹವನ್ನು ರೋಗಗಳಿಂದ ಮುಕ್ತವಾಗಿಡಲು ದೊಡ್ಡ ಪ್ರಮಾಣದಲ್ಲಿ ನೀರು ಕುಡಿಯುವುದು ಸಹ ಅಗತ್ಯ. ಇದಲ್ಲದೆ, ಕೆಲವು ವಿಶೇಷ ಪಾನೀಯಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯಲ್ಲಿರುವ ಕೆಲ ಆಹಾರ ಪದಾರ್ಥಗಳನ್ನು ಬಳಸಿ ಸುಲಭವಾಗಿ ಈ ವಿಶೇಷ ಪಾನೀಯಗಳು ಮತ್ತು ಉಪ್ಪಿನಕಾಯಿಗಳನ್ನು ತಯಾರಿಸಬಹುದು. ಈ ಮೂಲಕ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ಶುಂಠಿ, ಅರಿಶಿನ ಮತ್ತು ಕ್ಯಾರೆಟ್ ಪಾನೀಯ: 
    ಇದನ್ನು ತಯಾರಿಸಲು, ಮೊದಲು ಎಲ್ಲಾ ತರಕಾರಿಗಳನ್ನು ತೊಳೆಯಿರಿ. ಕ್ಯಾರೆಟ್, ನಿಂಬೆ, ಶುಂಠಿ ಮತ್ತು ಅರಿಶಿನವನ್ನು ಸೇರಿಸಿ ಜ್ಯೂಸ್ ಮಾಡಿ. ಅದಕ್ಕೆ ಒಂದು ಚಿಟಿಕೆ ಕರಿಮೆಣಸು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಕುಡಿಯಿರಿ. ಅರಿಶಿನವು ಹೆಚ್ಚಿನ ಆಂಟಿ ಆಕ್ಸಿಡೆಂಟ್​ ಮಸಾಲೆ. ಏಕೆಂದರೆ ಇದರಲ್ಲಿ ಕರ್ಕ್ಯುಮಿನ್ ಇರುತ್ತದೆ. ಮೆಣಸಿನಲ್ಲಿ ಪೆಪರಿನ್ ಇದ್ದು, ಇದು ಕರ್ಕ್ಯುಮಿನ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. 

    ಇದಲ್ಲದೆ ಶುಂಠಿ ಒಣ ಕೆಮ್ಮನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ನಿಂಬೆ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ರೋಗನಿರೋಧಕ ವರ್ಧಕವಾಗಿದೆ. ಈ ತರಕಾರಿ ರಸವನ್ನು ಕುಡಿಯಲು ಮರೆಯದಿರಿ.

ಕ್ಯಾರೆಟ್ ಮತ್ತು ಬೀಟ್ರೂಟ್:
    ಕ್ಯಾರೆಟ್, ಬೀಟ್ರೂಟ್, ಸಾಸಿವೆ ಪುಡಿ, ಕಾಶ್ಮೀರಿ ಮೆಣಸಿನ ಪುಡಿ ಮತ್ತು ನೀರನ್ನು ತೆಗೆದುಕೊಳ್ಳಿ. ಇವೆಲ್ಲವನ್ನೂ ದೊಡ್ಡ ಜಾರ್‌ನಲ್ಲಿ ಹಾಕಿ ಚೆನ್ನಾಗಿ ಜ್ಯೂಸ್ ಮಾಡಿ. ಈ ಜಾರ್​ನ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮತ್ತು ಕನಿಷ್ಠ 3 ದಿನಗಳವರೆಗೆ ಬೆಚ್ಚಗಿನ ಸ್ಥಳದಲ್ಲಿ ಬಿಡಿ. ಇದಲ್ಲದೆ, ನೀವು ಅದನ್ನು ಇಡೀ ದಿನ ಬಿಸಿಲಿನಲ್ಲಿ ಬಿಡಬಹುದು. ಹುಳಿಯ ರುಚಿ ಹೊಂದಿರುವ ಇದನ್ನು ನೀವು 4 ರಿಂದ 5 ದಿನಗಳವರೆಗೆ ಕುಡಿಯಬಹುದು. ಇದು ಅತ್ಯುತ್ತಮ ಪ್ರೋಬಯಾಟಿಕ್ ಆಗಿದ್ದು, ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಕರುಳಿನ ಆರೋಗ್ಯವು ಉತ್ತಮವಾಗಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿ ಕೂಡ ಉತ್ತಮವಾಗಿರುತ್ತದೆ.

ತಾಜಾ ಅರಿಶಿನ ಉಪ್ಪಿನಕಾಯಿ:
    ಇದನ್ನು ತಯಾರಿಸಲು ತಾಜಾ ಅರಿಶಿನ, ಶುಂಠಿ, ಉಪ್ಪು, ನಿಂಬೆ, ಸಾಸಿವೆ ಎಣ್ಣೆ, ಸಾಸಿವೆ ಮತ್ತು ಕರಿಮೆಣಸು ತೆಗೆದುಕೊಳ್ಳಿ. ಅರಿಶಿನ ಮತ್ತು ಶುಂಠಿಯನ್ನು ಚೆನ್ನಾಗಿ ತೊಳೆದು ಉದ್ದವಾಗಿ ಕತ್ತರಿಸಿ. ಸಾಸಿವೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದನ್ನು ಪಕ್ಕಕ್ಕೆ ಇರಿಸಿ. ಈಗ ಒಂದು ಪಾತ್ರೆಯಲ್ಲಿ ನಿಂಬೆ ರಸವನ್ನು ತೆಗೆದುಕೊಳ್ಳಿ. ಬಾಣಲೆಗೆ ಸಾಸಿವೆ ಸೇರಿಸಿ. ಸಾಸಿವೆ ಎಣ್ಣೆ ಸ್ವಲ್ಪ ತಣ್ಣಗಾದ ನಂತರ ಅದಕ್ಕೆ ಸಾಸಿವೆ, ಅರಿಶಿನ ಮತ್ತು ಶುಂಠಸೇರಿಸಿ. 

    ಅರಿಶಿನ ಮತ್ತು ಶುಂಠಿಯ ಮಿಶ್ರಣದಲ್ಲಿ ನಿಂಬೆ ರಸ, ಉಪ್ಪು ಮತ್ತು ಮೆಣಸು ಮಿಶ್ರಣ ಮಾಡಿ. ಹೀಗೆ ತಯಾರಿಸಿದ ಉಪ್ಪಿನಕಾಯಿಯನ್ನು ಡಬ್ಬದಲ್ಲಿ ಇರಿಸಿ, ನಿಮಗೆ ಬೇಕಾದಾಗ ಮಾತ್ರ ತೆಗೆದುಕೊಳ್ಳಿ. ಇಲ್ಲಿ ಅರಿಶಿನವು ಉರಿಯೂತದ ಗುಣಗಳನ್ನು ಹೊಂದಿದೆ. ಇದು ವಿವಿಧ ರೀತಿಯ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.
Tags:

Post a Comment

0Comments

Post a Comment (0)