Showing posts with label Mysore. Show all posts
Showing posts with label Mysore. Show all posts

Monday, February 10, 2025

ಮೈಸೂರಿನ ಸಾಂಸ್ಕೃತಿಕ ವಿಶೇಷತೆಗಳೇನು?

 

ಮೈಸೂರಿನ ಸಾಂಸ್ಕೃತಿಕ ವಿಶೇಷತೆಗಳೇನು?

*ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನ್ನುವ ಹಿರಿಮೆ ಹೊಂದಿರುವ ನಗರ.ಮೈಸೂರುರಾಜ್ಯ ಅಥವಾ ಮೈಸೂರು ಅರಮನೆ ಇತಿಹಾಸದ ಪುಟಗಳನ್ನು ಮತ್ತೆ ನೆನಪಿಸುವ ಅಗತ್ಯವಿಲ್ಲ . ಇತಿಹಾಸ.ಮತ್ತು ಅರಮನೆ ಜೊತೆಯಾಗಿಯೇ ಸಾಗುವ ಪುಟಗಳು.

*ಮೈಸೂರು ಇತಿಹಾಸದೊಂದಿಗೆ ಮಿಳಿತವಾದ ಮತ್ತೊಂದು ಸಾಂಸ್ಕೃತಿಕ ಪರಂಪರೆ ಮೈಸೂರು ದಸರಾ.

*ಚಾಮುಂಡಿ ಬೆಟ್ಟ(ದೇವಾಲಯ )ಮತ್ತು ಅದರೊಂದಿಗಿನ ಮೈಸೂರು ಭಕ್ತಿಪೂರ್ವಕ ಮಾತ್ರವಲ್ಲ ಭಾವನಾತ್ಮಕ ಪರಂಪರೆಯಾಗಿಯೇ ಸಾಗಿ ಬಂದಿದೆ.

*ಮೈಸೂರು ಇತಿಹಾಸದ ಜೊತೆಗೆ ಮೈಸೂರು ಹೆಸರಿನೊಂದಿಗೆ ಪಾರಂಪರಿಕವಾಗಿ ಅಥವಾ ಭೌಗೋಳಿಕ ಮಹತ್ವದಿಂದ ಸಾಗಿ ಬಂದ ಹಲವು ಹೆಗ್ಗುರುತುಗಳು ಇಲ್ಲಿವೆ.

ಚಿತ್ರ, ಮಾಹಿತಿ :ಕರ್ನಾಟಕ ಸರ್ಕಾರ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪರಂಪರೆ ಮಾಲಿಕೆ ಪುಸ್ತಿಕೆ.

****************

*ಕನ್ನಡ ಚಿತ್ರರಂಗಸದ್ಯ ಹತ್ತನೇ ದಶಕದಲ್ಲಿದ್ದು ಶತಮಾನದತ್ತ ಹೆಜ್ಜೆ ಇರಿಸಿದ

ಈ ಸಂದರ್ಭದಲ್ಲಿ ಚಿತ್ರ ರಂಗ ಮತ್ತು ಮೈಸೂರಿನ ನಂಟಿನ ಬಗ್ಗೆ ನೆನಪು ಮಾಡಿಕೊಳ್ಳದಿದ್ದರೆ ಈ ಉತ್ತರ ಅಪೂರ್ಣ ಎನಿಸಬಹುದು.1954ರಲ್ಲಿ ಆರಂಭಗೊಂಡ ಪ್ರೀಮಿಯರ್ ಸ್ಟುಡಿಯೋ ಕನ್ನಡ ಚಿತ್ರ ರಂಗಕ್ಕೆ ಐದು ದಶಕಗಳ ಕೊಡುಗೆ ನೀಡಿ ಅನೇಕ ಭಾಷೆಗಳ 800 ಸಿನೆಮಾಗಳ ನಿರ್ಮಾಣಕ್ಕೆ ವೇದಿಕೆಯಾಯಿತು.ಈ ಸ್ಟುಡಿಯೋ ಈಗ ನೆನಪು ಮಾತ್ರ. ಈ ಶತಮಾನದ ಆರಂಭಿಕ ವರ್ಷಗಳಲ್ಲಿ ಸ್ಟುಡಿಯೋ ಮಾಲೀಕರಾದ ಪ್ರಿ ಮಿಯರ್ ಬಸವರಾಜಯ್ಯನವರ ಸಂದರ್ಶನಕ್ಕೆ ನಾವು ಮಾಡಿದ ಪ್ರಯತ್ನ ಸಫಲತೆ ಕಂಡ ಕ್ಷಣವಿದು. ಇದೇ ಅವರ ಕೊನೆಯ ಮಾಧ್ಯಮ ಭೇಟಿ ಎಂದೂ ಹೇಳಬಹುದು.ಸ್ಟುಡಿಯೋಮೇಲಿನ ಗೌರವದಿಂದ ಅದರ ಬಾಗಿಲ ಮುಂದೆಯೇ ಅವರೊಂದಿಗೆ ನಿಂತು ತೆಗೆದ ಅವಿಸ್ಮರಣೀಯ ಫೋಟೋ.2018ರಲ್ಲಿ ಪ್ರೀಮಿಯರ್ ನೆಲಸಮಗೊಂಡಿದೆ.(ಇದೊಂದು ಅಪರೂಪದ ಅಥವಾ ಪ್ರಿಮಿಯರ್ ಇತಿಹಾಸದ ದಾಖಲೆ ಎನ್ನಬಹುದಾದ ಚಿತ್ರ ಎಂಬ ಹೆಮ್ಮೆ ನಮಗಿದೆ )ಈ ಚಿತ್ರದಲ್ಲಿ ಹಿರಿಯ ಪತ್ರಕರ್ತ, ಹಿತೈಷಿ ಗಣೇಶ್ ಕಾಸರಗೋಡು, ಪತ್ರಕರ್ತ ರವೀಂದ್ರ ಜೋಶಿ ಮತ್ತು ನಾನು.

**************

*ಇದಿಷ್ಟೇ ಅಲ್ಲ, ಮೈಸೂರು ಶೈಕ್ಷ ಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮೆರೆಯಲು ಕೊಡುಗೆ ನೀಡಿದ ಮೈಸೂರು ವಿಶ್ವ ವಿದ್ಯಾಲಯ.

ರಾಜ್ಯದ ಪ್ರಥಮ ವಿಶ್ವ ವಿದ್ಯಾಲಯವಾಗಿ ಹೊರಹೊಮ್ಮಿದ ಮೈಸೂರು ವಿಶ್ವ ವಿದ್ಯಾಲಯ.ಶತಮಾನದ ಹಿರಿಮೆಯೂ ಜೊತೆಗಿದೆ.ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇದು ನೀಡಿರುವ ಕೊಡುಗೆ ಅಪಾರ.

*ಮೈಸೂರಿನ ಕಲಾಮಂದಿರ.ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ದಿ. ಆರ್. ಗುಂಡೂರಾಯರ ಕನಸಿನ ಕೂಸು ಮೈಸೂರಿನ ಕಲಾ ಮಂದಿರ. ಮೈಸೂರಿನಲ್ಲಿ ಕಲಿತ ಗುಂಡೂರಾಯರಿಗೆ ಈ ನಗರದ ಮೇಲೆ ಅಪಾರ ಒಲವು. ನಾಟಕ ಕಲೆ, ಸಾಹಿತ್ಯ ಹೀಗೆ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ಸೂರಿನಡಿ ನಡೆಯಲು ಚಿಂತನೆ ನಡೆಸಿ ಭೂಮಿ ಮಂಜೂರು ಮಾಡಿದ್ದರು. ಮುಂದೆ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನಿರ್ಮಾಣಗೊಂಡ ಕಲಾ ಮಂದಿರ 1985ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನಕ್ಕೆ ತನ್ನ ಕೊಡುಗೆ ನೀಡಿತ್ತು.

*ರಂಗ ಭೂಮಿಗೆ ಅನುಪಮ ಕೊಡುಗೆ ನೀಡಿರುವ ಮೈಸೂರಿನ ರಂಗಾಯಣ ಬಿ. ವಿ. ಕಾರಂತರ ಕನಸಿನ ಕೂಸು. 1989ರಿಂದ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದೆ.

Tuesday, January 21, 2025

ಮೈಸೂರು ರಾಜರು ಭಾರತಕ್ಕೆ ನೀಡಿದ ಕೊಡುಗೆಗಳೇನು?



ಮೈಸೂರು ರಾಜರು ಭಾರತಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ ಅದು ಸುಸಜ್ಜಿತ ಬೆಂಗಳೂರು ನಗರ.

ಇಂದು ಭಾರತಕ್ಕೆ ಬೆಂಗಳೂರು ಎಷ್ಟು ಮುಖ್ಯವೆಂದು ಬಿಡಿಸಿ ಹೇಳಬೇಕಿಲ್ಲ. ಐಟಿ ಕ್ಷೇತ್ರದಲ್ಲಿ ಅಗ್ರಗಣ್ಯ ನಗರವಿದು. ದೇಶಕ್ಕೆ ಬಹಳ ಆದಾಯ ತರುವ ಊರಿದು. ಅಮೇರಿಕಾ ದೇಶದ ಪ್ರೆಸಿಡೆಂಟ್ ಎಲೆಕ್ಷನ್ನಲ್ಲಿ ಕೂಡ ಬ್ಯಾಂಗಲೋರ್ ಪದದ ಪ್ರಸ್ತಾವ ಆಗುತ್ತದೆಯೆಂದರೆ ಬೆಂಗಳೂರಿನ ಹಿರಿಮೆ ಗರಿಮೆಯನ್ನು ನೀವೇ ಯೋಚನೆ ಮಾಡಿ.

ಇಂತಹ ಊರನ್ನು ಕೊಟ್ಟಿದ್ದು ನಾಡಪ್ರಭು ಕೆಂಪೇಗೌಡರೇ ಆದರೂ, ಅದನ್ನು ಅಭಿವೃದ್ಧಿಗೊಳಿಸಿದವರು ಮೈಸೂರಿನ ಒಡೆಯರು.

  • ಇಂಡಿಯನ್ ಇನ್ಸ್ಟಿಟ್ಯುಯೇ ಆಫ್ ಸೈನ್ಸ್
  • ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್

ಇವೆಲ್ಲ ಆರಂಭವಾಗಿದ್ದು ಇವರ ಕಾಲದಲ್ಲೇ.

ವಿಜ್ಞಾನ ಮತ್ತು ತಾಂತ್ರಿಕ ಕಾಲೇಜುಗಳು ಶುರುವಾದವು.

ಇವರು ಕೊಟ್ಟ ಭೂಮಿಯಲ್ಲಿ ಅನೇಕ ಕಾರ್ಖಾನೆಗಳು ಪ್ರಾರಂಭವಾದವು.

HAL NAL BEL BHEL BEML NAL ಇಂತಹ ಸಂಸ್ಥೆಗಳು ಬಂದವು.

ಮಾಹಿತಿ ತಂತ್ರಜ್ಞಾನ ಇಲ್ಲಿ ಬೆಳೆಯಲು ಇವೆಲ್ಲ ಅಡಿಪಾಯವಾದವು.

ಐಟಿ ದೊಡ್ಡ ಮಟ್ಟದಲ್ಲಿ ಬೆಳೆದು ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ನಿಂತಿದೆ ಇವತ್ತು.

ಇಂತಹ ಹೆಮ್ಮೆಯ ಊರನ್ನು ಬೆಳೆಸಿ, ವಿಕಾಸಗೊಳಿಸಿದವರು ಮೈಸೂರಿನ ಒಡೆಯರು.

Thursday, January 16, 2025

ಮೈಸೂರು ರಾಜ್ಯದ ಹೆಸರು ಬದಲಾಯಿಸಿ ಕರ್ನಾಟಕ ಮಾಡಿದ ಇತಿಹಾಸವೇನು?

 ಮೈಸೂರು ರಾಜ್ಯದ ಹೆಸರು ಬದಲಾಯಿಸಿ ಕರ್ನಾಟಕ ಮಾಡಲಾಯಿತು. ಇದರ ಹಿಂದಿರುವ ಇತಿಹಾಸವೆಂದರೆ :

‘ಕರ್ನಾಟಕ’ ಎಂಬ ಪದವು ಹಳೆ ಮೈಸೂರು ಪ್ರದೇಶವನ್ನು ಮಾತ್ರವಲ್ಲ, ಇದು ಇಡೀ ಕನ್ನಡ ಮಾತನಾಡುವ ಪ್ರದೇಶವನ್ನು ಸೂಚಿಸುತ್ತದೆ.

ನಮ್ಮ ರಾಜಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು, ಯಾವಾಗಲೂ ತಮ್ಮನ್ನು ಕರ್ನಾಟಬಲ ಎಂದು ಕರೆದುಕೊಳ್ಳುತ್ತಿದ್ದರು, ಅಂದರೆ ಕರ್ನಾಟಕದ ಸೈನ್ಯ. ವಿಜಯನಗರ ಸಾಮ್ರಾಜ್ಯದ ಮೂಲ ಹೆಸರು ಕರ್ನಾಟ ಸಾಮ್ರಾಜ್ಯ ಎಂದು.

ರಾಜ್ಯ ಏಕೀಕರಣ ಚಳವಳಿಯ ಸಂದರ್ಭದಲ್ಲಿ, ಆಲೂರು ವೆಂಕಟರಾಯರು ಇದನ್ನು ಮುನ್ನಡೆಸಿದರು, ನಂತರ ಇಡೀ ಚಳುವಳಿಯ ವೇಗವನ್ನು ವರ್ಧಿಸಲಾಯಿತು. ಅಂತಿಮವಾಗಿ ಕನ್ನಡ ಮಾತನಾಡುವ ರಾಜ್ಯವನ್ನು ರಚಿಸಲಾಯಿತು.

ಚಳವಳಿಯ ಸಮಯದಲ್ಲಿ, ಕನ್ನಡಿಗರಲ್ಲಿ ಮರೆತುಹೋದ ಹೆಮ್ಮೆಯನ್ನು ಮತ್ತು ಆತ್ಮಗೌರವವನ್ನು ಮರಳಿ ತರಲು ಆಲೂರು ವೆಂಕಟರಾಯರು ಪುಸ್ತಕವೊಂದನ್ನು ಬರೆದಿದ್ದರು. ಆ ಪುಸ್ತಕಕ್ಕೆ ಕರ್ನಾಟಕ ಗಥ ವೈಭವ ಎಂದು ಹೆಸರಿಟ್ಟರು. ಹೆಸರನ್ನು ಗಮನಿಸಿ, ಕರ್ನಾಟಕ ಪದವನ್ನು ಉಲ್ಲೇಖಿಸಲಾಗಿದೆ.

ಇಡೀ ಪ್ರದೇಶವನ್ನು ಆ ಹೆಸರಿನಿಂದ ಕರೆಯುತ್ತಿದ್ದರೆಂದು ಅದು ಸಾಬೀತುಪಡಿಸುತ್ತದೆ ಮತ್ತು ಅದು ಹೊಸ ಹೆಸರಲ್ಲ.

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡ ಪ್ರದೇಶ ಮಾತ್ರವಲ್ಲ, ಮಹಾರಾಷ್ಟ್ರವನ್ನು ಕರ್ನಾಟಕ ಅಥವಾ ಕನ್ನಡ ಪ್ರದೇಶ ಎಂದು ಕರೆಯಲಾಗುತ್ತಿತ್ತು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಬಹುದು.

ಪ್ರಸಿದ್ಧ ಕೃತಿ, ‘ಕವಿರಾಜಮಾರ್ಗ’ ಕನ್ನಡ ಪ್ರದೇಶದ ಗಡಿಯನ್ನು ಉತ್ತರದಲ್ಲಿ ಗೋದಾವರಿ ಎಂದು ದಕ್ಷಿಣದಲ್ಲಿ ಕಾವೇರಿ ಎಂದು ಉಲ್ಲೇಖಿಸುತ್ತದೆ. ಇದರ ಅರ್ಥ ಇಂದಿನ ಮಹಾರಾಷ್ಟ್ರದ ನಾಸಿಕ್ ನಿಂದ ಕರ್ನಾಟಕದ ಮೈಸೂರು. ಇದು ೯ ನೇ ಶತಮಾನದ ಕಥೆ.

ಕವಿರಾಜಮಾರ್ಗದ ಪದ್ಯ ಇದು.

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ

ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅಮೋಘವರ್ಷ ಇಲ್ಲಿ ಹೇಳುತ್ತಿರುವುದು "ಕನ್ನಡ ನಾಡು" ಕಾವೇರಿಯಿಂದ ಗೋದಾವರಿಯವರೆಗೆ ೯ ನೇ ಶತಮಾನದಲ್ಲಿ ವಿಸ್ತರಿಸಿತ್ತು ಅಂತ.

ಹಾಗಾಗಿ ಕರ್ನಾಟಕ ಎಂಬ ಪದವನ್ನು ಬಿಟ್ಟು ಬೇರೆಯಾವ ಹೆಸರುಗಳು ಚರ್ಚೆಗೆ ಬರಲಿಲ್ಲ. ಕರ್ನಾಟಕ ಒಂದೇ ಸೂಕ್ತವಾದ ಹೆಸರು.

Thursday, December 26, 2024

ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆಯು ಸಾರಿಗೆ ವಿಭಾಗಗಳಲ್ಲಿ ಅತ್ಯಂತ ದೊಡ್ಡ ಸಾರಿಗೆಯಾಗಿದೆ. ರೈಲುಗಳಲ್ಲಿ ಪ್ರತಿನಿತ್ಯವೂ ಕೊಟ್ಯಂತರ ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುತ್ತಾರೆ. ಸುರಕ್ಷತೆ ಮತ್ತು ಟಿಕೆಟ್‌ ದರಗಳು ಕಡಿಮೆ ಇರುವ ಹಿನ್ನೆಲೆ ಈ ಸಾರಿಗೆಯಲ್ಲಿ ಹೆಚ್ಚಿನ ಜನರು ಪ್ರಯಾಣ ಮಾಡಲು ಬಯಸುತ್ತಾರೆ. ಹಾಗಾದರೆ ಬೆಂಗಳೂರು-ಮೈಸೂರು ನಡುವೆ ಯಾವೆಲ್ಲ ರೈಲುಗಳು ಸಂಚಾರ ಮಾಡುತ್ತವೆ ಹಾಗೂ ಸಮಯಗಳ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.


ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳ ಸೇವೆಯನ್ನು ನೀಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಪ್ರಯಾಣಿಕರ ಬೇಡಿಕೆ ಮೇರೆಗೆ ಆಗಾಗ ವಿಶೇಷ ರೈಲುಗಳನ್ನು ಸಹ ಬಿಡುತ್ತಲೇ ಇರುತ್ತದೆ. ಇನ್ನು ಈ ಮಾರ್ಗದ 20 ರೈಲುಗಳಲ್ಲಿ ಹೆಚ್ಚಿನವು ಎಕ್ಸ್‌ಪ್ರೆಸ್ ರೈಲುಗಳಾಗಿವೆ

ಇವುಗಳಲ್ಲಿ ಈ ಮಾರ್ಗದಲ್ಲಿ 10 ರೈಲುಗಳು ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತವೆ. 5 ಸೂಪರ್‌ಫಾಸ್ಟ್ ರೈಲುಗಳಿವೆ. 2 ಮೆಮು ರೈಲುಗಳಿದ್ದು, ಇವು ಕಡಿಮೆ ದೂರ ಪ್ರಯಾಣಕ್ಕೆ ಸೂಕ್ತವಾಗಿದೆ. ಇನ್ನು 1 ಶತಾಬ್ದಿ ರೈಲು ಸೇವೆ ನೀಡುತ್ತಿದ್ದು, ಇದು ಅತ್ಯಂತ ವೇಗದ ರೈಲಾಗಿದೆ. ಹಾಗೆಯೇ 2 ವಂದೇ ಭಾರತ್ ಐಸ್ಪೀಡ್‌ ರೈಲುಗಳು ಸಂಚರಿಸುತ್ತವೆ.

ಬೆಂಗಳೂರು-ಮೈಸೂರು ರೈಲುಗಳ ವಿವರ
1. ರೈಲು ನಂಬರ್ 16218 ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 12:55ಕ್ಕೆ ಹೊರಟು ಮೈಸೂರನ್ನು ಬೆಳಗ್ಗೆ 03:20ಕ್ ತಲುಪಲಿದೆ.

2. ರೈಲು ನಂಬರ್ 16021 ಕಾವೇರಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04 ಗಂಟೆಗೆ ಹೊರಟು ಮೈಸೂರನ್ನು 6:55ಕ್ಕೆ ತಲುಪಲಿದೆ.

3. ರೈಲು ನಂಬರ್ 16220 ತಿರುಪತಿ - ಚಾಮರಾಜನಗರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04:30ಕ್ಕೆ ಹೊರಟು ಮೈಸೂರನ್ನು 7:25ಕ್ಕೆ ತಲುಪಲಿದೆ.

4. ರೈಲು ನಂಬರ್ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 05:05ಕ್ಕೆ ಹೊರಟು ಮೈಸೂರನ್ನು 8:20ಕ್ಕೆ ತಲುಪಲಿದೆ.

4. ರೈಲು ನಂಬರ್ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 05:05ಕ್ಕೆ ಹೊರಟು ಮೈಸೂರನ್ನು 8:20ಕ್ಕೆ ತಲುಪಲಿದೆ.

ಈ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ
ಈ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ.

5. ರೈಲು ನಂಬರ್ 22682 ಚೆನ್ನೈ ಸೆಂಟ್ರಲ್ - ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ವಾರಕ್ಕೆ ಒಮ್ಮೆ ಅಂದರೆ ಶುಕ್ರವಾರ ಬೆಂಗಳೂರಿನಿಂದ ಬೆಳಗ್ಗೆ 05:25ಕ್ಕೆ ಹೊರಟು ಮೈಸೂರನ್ನು 8:35ಕ್ಕೆ ತಲುಪುತ್ತದೆ.

6. ರೈಲು ನಂಬರ್ 16231 ಮೈಲಾಡುತುರೈ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04:45ಕ್ಕೆ ಹೊರಟು ಮೈಸೂರನ್ನು 8:00 ಗಂಟೆಗೆ ತಲುಪುತ್ತದೆ.

7. ರೈಲು ನಂಬರ್ 16591 ಹಂಪಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 06ಕ್ಕೆ ಹೊರಟು ಮೈಸೂರನ್ನು 9 ಗಂಟೆಗೆ ತಲುಪುತ್ತದೆ.

8. ರೈಲು ನಂಬರ್ 12785 ಕಾಚೇಗೌಡ - ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 06:35ಕ್ಕೆ ಹೊರಟು ಮೈಸೂರನ್ನು 9:55 ಗಂಟೆಗೆ ತಲುಪುತ್ತದೆ.

9. ರೈಲು ನಂಬರ್ 16235 ಟುಟಿಕೋರಿನ್ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 07:15ಕ್ಕೆ ಹೊರಟು ಮೈಸೂರನ್ನು 10:45 ಗಂಟೆಗೆ ತಲುಪುತ್ತದೆ.

10. ರೈಲು ನಂಬರ್ 16536 ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:00ಕ್ಕೆ ಹೊರಟು ಮೈಸೂರನ್ನು 11:15 ಗಂಟೆಗೆ ತಲುಪುತ್ತದೆ.

11. ರೈಲು ನಂಬರ್ 17308 ಬಸವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:20ಕ್ಕೆ ಹೊರಟು ಮೈಸೂರನ್ನು 11:40 ಗಂಟೆಗೆ ತಲುಪುತ್ತದೆ.

12. ರೈಲು ನಂಬರ್ 16316 ಕೊಚುವೇಲಿ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:35ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12 ಗಂಟೆಗೆ ತಲುಪುತ್ತದೆ.

13. ರೈಲು ನಂಬರ್ 20607 ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬೆಂಗಳೂರಿನಿಂದ ಬೆಳಗ್ಗೆ 10:15ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12:20 ಗಂಟೆಗೆ ತಲುಪುತ್ತದೆ.

14. ರೈಲು ನಂಬರ್ 12007 ಶತಾಬ್ದಿ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ಪ್ರತಿದಿನವೂ ಬೆಂಗಳೂರಿನಿಂದ ಬೆಳಗ್ಗೆ 10:45ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ

15. ರೈಲು ನಂಬರ್ 20660 ರಾಜ್ಯ ರಾಣಿ ಎಸ್ಎಫ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 11:30ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ.

16. ರೈಲು ನಂಬರ್ 12976 ಜೈಪುರ - ಮೈಸೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಬುಧವಾರ ಹಾಗೂ ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 1:15ಕ್ಕೆ ಹೊರಟು ಮೈಸೂರನ್ನು ಸಂಜೆ 4 ಗಂಟೆಗೆ ತಲುಪುತ್ತದೆ.

17. ರೈಲು ನಂಬರ್ 20624 ಮಾಲ್ಗುಡಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮೈಸೂರನ್ನು ಸಂಜೆ 4:20 ಗಂಟೆಗೆ ತಲುಪುತ್ತದೆ.

18. ರೈಲು ನಂಬರ್ 12614 ಒಡೆಯರ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ ಹೊರಟು ಮೈಸೂರನ್ನು ಸಂಜೆ 5:45 ಗಂಟೆಗೆ ತಲುಪುತ್ತದೆ.

19. ರೈಲು ನಂಬರ್ 17325 ವಿಶ್ವಮಾನವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಟು ಮೈಸೂರನ್ನು ರಾತ್ರಿ 08:40 ಗಂಟೆಗೆ ತಲುಪುತ್ತದೆ.

20. ರೈಲು ನಂಬರ್ 16216 ಚಾಮುಂಡಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು ಮೈಸೂರನ್ನು ರಾತ್ರಿ 9 ಗಂಟೆಗೆ ತಲುಪುತ್ತದೆ.

21. ರೈಲು ನಂಬರ್ 01662 RKMP-ಮೈಸೂರು ವಿಶೇಷ ರೈಲು ಶುಕ್ರವಾರ ಬೆಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ಮೈಸೂರನ್ನು ರಾತ್ರಿ 9:40 ಗಂಟೆಗೆ ತಲುಪುತ್ತದೆ.

22. ರೈಲು ನಂಬರ್ 12609 ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ಮೈಸೂರನ್ನು ರಾತ್ರಿ 22:50 ಗಂಟೆಗೆ ತಲುಪುತ್ತದೆ.

23. ರೈಲು ನಂಬರ್ 16585 SMVT ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಮೈಸೂರನ್ನು ರಾತ್ರಿ 12:10 ಗಂಟೆಗೆ ತಲುಪುತ್ತದೆ.

24. ರೈಲು ನಂಬರ್ 20664 SMVT ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಹೊರಟು ಮೈಸೂರನ್ನು ರಾತ್ರಿ 11:55 ಗಂಟೆಗೆ ತಲುಪುತ್ತದೆ.

ಒಟ್ಟಿನಲ್ಲಿ ಈ ರೈಲುಗಳು ಬೆಂಗಳೂರು-ಮೈಸೂರು ನಡುವೆ ಪ್ರಯಾಣ ಬೆಳೆಸುವ ಸಾಮಾನ್ಯ ಪ್ರಯಾಣಿಕರಿಗೆ ಅಷ್ಟೇ ಅಲ್ಲದೆ, ಈ ಎರಡು ನಗರಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತುಂಬಾ ಸಹಾಯಕವಾಗಲಿವೆ.

Monday, December 23, 2024

Mysore to Danapur Train


Southwest Railway will run special express trains between Mysore and Danapura on the occasion of Kumbamela.

ವಿವರಗಳು:- 
🔹Vehicle No. 06207 Mysore - Danapura Special Express Train Date January 18 Saturday, February 15 Saturday, and March 01 Saturday, Departure from Mysore Railway Station at 4:30 PM (On January 21, February 19, March 4 Tuesday) will reach Danapura Railway Station at 10:00 AM.

🔹 Vehicle No. 06208 Danapura - Mysore Special Express Railway Station will depart from Danapura Railway Station on January 22, February 19, March 05, (Wednesdays) (January 24, February 21, March 7) Friday at 03:00 pm.

Details of the route:-
Mandya, Maddur, Kengeri, KSR Bangalore City, Yeshwanthpur, Tumkur, Arasikere, Chikkajajuru, Chitradurga, Rayadurga,
Bellary Cantonment Halt, Hospet, Koppala, Gadag, Hubli, Badami, Bagalkot, Vijayapura, Solapura,
Kurduwadi, Dound, Ahmed Nagar, Kopargaon, Manmad, Bhusawal, Khandwa, Talwadia, Chanera, Khirkia, Harda, Banapura, Itarsi, Piparia, Narasingapura, Jabalpur, Katani, Myhar, Satna, Manikpur, Prayagraj Choki, Mirzapura, Chunar, Pandit Deen Dayal Upadhyaya, Buxar, Ara via #Da And in the same way, leaving Danapura Railway Station and reaches #Mysore Railway Station.

🔹Special train services between Mysuru-Danapur for Kumbh Mela

🔹Train No. 06207 Mysuru-Danapur Express Special will depart from Mysuru at 4:30 PM on 18.01.2025, 15.02.2025 & 01.03.2025 (Saturdays) and reach Danapur at 10:00 AM on Tuesday.

🔹Train No. 06208 Danapur-Mysuru Express Special will depart from Danapur at 1:45 AM on 22.01.2025, 19.02.2025 & 05.03.2025 (Wednesdays) and arrive at Mysuru at 3:00 PM on Friday.

🔹En route, the trains will have stoppages at the following stations in both directions: Mandya, Maddur, Kengeri, KSR Bengaluru, Yesvantpur, Tumakuru, Arsikere, Chikjajur, Chitradurg, Rayadurg, Ballari Cantt., Hosapete, Koppal, Gadag, SSS Hubballi, Badami, Bagalkot, Vijayapura, Solapur, Kurduwadi, Daund, Ahmadnagar, Kopargaon, Manmad, Bhusaval, Khandwa, Talvadya, Chhanera, Khirkiya, Harda, Banapura, Itarsi, Pipariya, Narsinghpur, Jabalpur, Katni, Maihar, Satna, Manikpur, Prayagraj Chheoki, Mirzapur, Chunar, PT. Deen Dayal Upadhyaya Junction, Buxar and Ara. 

ಕೃಪೆ: ಬಳ್ಳಾರಿ ಜಂಕ್ಷನ್ ರೈಲ್ ಇನ್ಫೋ ಫೇಸ್ಬುಕ್ ಪೇಜ್