Friday, March 15, 2013

"ಸಾವಿರಕ್ಕೊಂದು ಕನಸು "

"ಸಾವಿರಕ್ಕೊಂದು ಕನಸು ":
ಇಂದುವದನೆಯೇ ನಿನ್ನ ಮಂದಹಾಸವ ಕಂಡು
ಮುಂಗುರುಳು ಬಾಗಿ ಬಾಗಿ ಮುತ್ತಿಕ್ಕುತಿದೆ

ಬೆಳದಿಂಗಳ ರಾತ್ರಿಯಲಿ ಒಮ್ಮೆಲೇ ಬೆರಗಾದೆ
ಬೆಳ್ಳಿ ಚಂದಿರನು ಧರೆಗಿಳಿದು ಬಂದನೇ ಎಂದು!

ಕ್ಷಣ ಕೂಡ ಬಿಡಲಾರೆ ಹೊತ್ತು ತಿರುಗಲೇ ನಿನ್ನ
ಮೆತ್ತನೆಯ ಕರಗಳಿವು ಮುತ್ತಿಡಲೇ ಚಿನ್ನ !

ಮೌನದೀ ಬಂಗಾರ , ಮಾತಂತೂ ಮುತ್ತು
ಆ ದೇವ ಕೊಟ್ಟ ನನಗಾಗಿ ಈ ಚೆಲುವೆಯನ್ನ !

ನಯನಗಳೋ ಅವು ! ಅಲ್ಲ ! ವಜ್ರಗಳ ಬುತ್ತಿ
ನೋಟವೋ ಚಂದ ಅದು ನಶೆಗಿಂತ ಮತ್ತು

ಎಂತಾಗಿ ಇಂತಾಗಿ ಹಾಡಿ ಹೊಗಳಿ
ಗಂಧ ಗಾಳಿಯೇ ಇಲ್ಲದ ನನ್ನವನು
ಕಾವ್ಯಧಾರೆಯ ಹರಿಸಿದ ಹಾಗೇ
ನಿನ್ನೇ ರಾತ್ರೀ ನನಗೊಂದು ಕನಸು ಬಿತ್ತು !!! :(

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...