Wednesday, August 26, 2020

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

1) ದ್ವೈತ ಸಿದ್ದಾಂತದ ಪ್ರತಿಪಾದಕರು ಯಾರು?
 * ಮಧ್ವಾಚಾರ್ಯರು.

2) "ರಾಮಚರಿತಮಾನಸ" ರಚಿಸಿದವರು ಯಾರು?
 * ತುಲಸೀದಾಸರು.

3) ಉತ್ತರ ಭಾರತದಲ್ಲಿ ಭಕ್ತಿ ಪಂಥದ ಮೊದಲ ಸಂತರು ಯಾರು?
 * ರಾಮಾನಂದರು.

4) ರಾಮ ಮತ್ತು ರಹೀಮ್ ರಲ್ಲಿ ಬೇಧವಿಲ್ಲವೆಂದು ಹೇಳಿದವರು ಯಾರು?
 * ಕಬೀರದಾಸರು.

5) ಸಿಖ್ಖರ ಪವಿತ್ರ ಗ್ರಂಥ ಯಾವುದು?
 * ಗುರುಗ್ರಂಥ ಸಾಹೇಬ್.

6) "ಸೂರ್ ಸಾಗರ್" ಕೃತಿ ರಚಿಸಿದವರು ಯಾರು?
 * ಸೂರ್ ದಾಸರು.

7) ಬಾಬರ್ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ್ದು ಯಾವಾಗ?
 * 1526 ರಲ್ಲಿ.

8) ಶೇರ್ ಷಾ ನ ಮೊದಲ ಹೆಸರೇನು?
 * ಫರೀದ್.

9) ಅಕ್ಬರನ ಮಾವ ಯಾರು?
 * ಬೈರಾಂಖಾನ್.

10) "ಆಲಂಗಿರ್" ಎಂಬ ಬಿರುದುವಿನೊಂದಿಗೆ ಪಟ್ಟವೇರಿದವನು ಯಾರು?
 * ಔರಂಗಜೇಬ್.

11) ಮನ್ಸಬ್ ಎಂದರೇ ----.
 * ಸ್ಥಾನ, ಶ್ರೇಣಿ ಎಂದರ್ಥ.

12) "ದಾದಾಜಿಕೊಂಡದೇವ" ಯಾರು?
 * ಶಿವಾಜಿಯ ಗುರು.

13) ಮರಾಠ ಸಾಮ್ರಾಜ್ಯ ಬೆಳೆದದ್ದು ಯಾವ ರಾಜ್ಯದಲ್ಲಿ?
 * ಮಹಾರಾಷ್ಟ್ರ.

14) ಒಂದನೇ ಬಾಜಿರಾಯನ ಮಗ ಯಾರು?
 * ಬಾಲಾಜಿ ಬಾಜೀರಾಯ.

15) ಶಿವಾಜಿ ಕಾಲವಾದದ್ದು ಯಾವಾಗ?
 * 1680.

16) "ಇಬಾದತ್ ಖಾನ್" ಎಲ್ಲಿದೆ?
 * ಫತೇಪುರ್ ಸಿಕ್ರಿ.

17) ಜೋದಾಬಾಯಿಯ ಮಗ ಯಾರು?
 * ಜಹಾಂಗೀರ್.

18) ಅಕ್ಬರನ ಪ್ರಮುಖ ಆಸ್ಥಾನ ಕವಿ ಯಾರು?
 * ಅಬುಲ್ ಫಜಲ್.

19) ಬಾಬರ್ ನಂತರ ಪಟ್ಟಕ್ಕೆ ಬಂದವನು ಯಾರು?
 * ಹುಮಾಯುನ್.

20) ಬಿಹಾರದ ಸಸರಾಂನಲ್ಲಿ ಯಾರ ಗೋರಿಯಿದೆ?
 * ಶೇರ್ ಷಾ.

21) ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದದ್ದು ಯಾವಾಗ?
 * 1602.

22) ಬಿಸ್ಮಾರ್ಕ್ ----  ದೊರೆ?
 * ಪ್ರಷ್ಯಾ.

23) ಅಮೆರಿಕ ಸ್ವಾತಂತ್ರ್ಯ ಘೋಷಣೆಯಾದದ್ದು ಯಾವಾಗ?
 * 1776, ಜುಲೈ 4.

24) ಸಪ್ತ ವಾರ್ಷಿಕ ಯುದ್ಧ ನಡೆದದ್ದು ಯಾರ ನಡುವೆ?
 * ಫ್ರಾನ್ಸ್ ಮತ್ತು ಇಂಗ್ಲೆಂಡ್.

25) 1769 ರಲ್ಲಿ ಕೈಗಾರಿಕಾ ಉಗಿಯಂತ್ರ ಬಳಸಿದವನು ಯಾರು?
 * ಜೇಮ್ಸ್ ವ್ಯಾಟ್.

26) 1761 ರ ವಿಶೇಷವೇನು?
 * ಮೂರನೇ ಪಾಣಿಪತ್ ಕಾಳಗ ನಡೆಯಿತು.

27) ಔರಂಗಜೇಬನು ಮರಣ ಹೊಂದಿದ್ದು ಯಾವಾಗ?
 * 1707 ರಲ್ಲಿ.

28) ಶಿವಾಜಿಯ ಮರಣದ ನಂತರ ಪಟ್ಟವೇರಿದವನು ಯಾರು?
 * ಸಂಬಾಜಿ.

29) ಶಿವಾಜಿ ರಾಯಗಡ ವಶಪಡಿಸಿಕೊಂಡಿದ್ದು ಯಾವಾಗ?
 * 1646 ರಲ್ಲಿ.

30) ನವೋದಯ ಎಂದರೇ -----.
 * ಮರುಹುಟ್ಟು / ಪುನರುಜ್ಜೀವನ.

31) ನವೋದಯ ಚಳುವಳಿ ಎಲ್ಲಿ ಆರಂಭವಾಯಿತು?
 * ಇಟಲಿ.

32) ಇಸ್ತಾನ್ ಬುಲ್ ಈಗಿನ ಯಾವ ದೇಶದ ಬಂದರು ನಗರ.
 * ಟರ್ಕಿ.

33) ನವೋದಯ ಕಾಲದ ಲೇಖಕರಲ್ಲಿ ಮೊದಲಿಗ ಯಾರು?
 * ಪೆರ್ಟ್ರಾಕ್.

34) "ದ ಡಿವೈನ್ ಕಾಮಿಡಿ" ಯಾರ ಮಹಾಕಾವ್ಯ?
 * ಡಾಂಟೆ.

35) "ಸಂತ ಪೀಟರ್ ಚರ್ಚು" ಎಲ್ಲಿದೆ?
 * ರೋಮ್.

36) "ಮೋನಾಲಿಸಾ" ವರ್ಣ ಚಿತ್ರದ ಚಿತ್ರಕಾರ ಯಾರು?
 * ಲಿಯೋನಾಡೋ ಡಾ ವಿಂಚಿ.

37) ಪ್ರತಿ ಸುಧಾರಣಾ ಚಳುವಳಿಯ ನಾಯಕ ಯಾರು?
 * ಇಗ್ನೇಶಿಯಸ್ ಲಯೋಲಾ.

38) 1453 ರಲ್ಲಿ ಕಾನ್ ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?
 * ಟರ್ಕರು.

39) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
 * ಪೊರ್ಚಗಲ್.

40) ಕಲ್ಲಿಕೋಟೆಯಿಂದ ಸುಮಾರು ಎಷ್ಟು ಕಿ.ಮೀ ದೂರದಲ್ಲಿ ಕಪ್ಪಡ್ ಎಂಬ ಸ್ಥಳವಿದೆ?
 * 10.

41) ಕ್ರಿಸ್ಟೋಪರ್ ಕೋಲಂಬಸ್ ಯಾವ ದೇಶದ ನಾವಿಕ?
 * ಸ್ಪೇನ್.

42) ಭೂ ಪ್ರದಕ್ಷಿಣೆ ಮಾಡಿದ ಮೊದಲ ಹಡಗು ಯಾವುದು?
 * ವಿಕ್ಟೋರಿಯಾ.

43) "ಕೊಲಂಬಸ್" ಅಮೇರಿಕಾ ತಲುಪಿದ್ದು ಯಾವಾಗ?
 * 1492 ರಲ್ಲಿ.

44) ಡಚ್ಚರು ಯಾವ ದೇಶದವರು?
 * ಹಾಲೆಂಡ್.

45) ಕೊನೆಯವರಗೆ ಪೋರ್ಚಗೀಸರ ವಶದಲ್ಲಿದ್ದ ಸ್ಥಳಗಳು ಯಾವು?
 * ಗೋವಾ, ದಿಯು ಮತ್ತು ದಮನ್.

46) ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಭದ್ರ ಬುನಾದಿ ಹಾಕಿದ ಯುದ್ಧ ಯಾವುದು?
 * ಪ್ಲಾಸಿ ಕದನ (1757).

47) ಪೇಶ್ವೆ ಎಂದರೆ ಯಾರು?
 * ಮರಾಠ ರಾಜನ ಪ್ರಧಾನಮಂತ್ರಿ.

48) "2ನೇ ಶಿವಾಜಿ" ಎಂಬ ಕಿರ್ತಿಗೆ ಪಾತ್ರನಾದವನು ಯಾರು?
 * ಒಂದನೇ ಬಾಜಿರಾವ್.

49) ನಾದಿರ್ ಷಾ ಮೊಗಲ್ ರಾಜ್ಯದ ಮೇಲೆ ದಾಳಿ ಮಾಡಿದ್ದು ಯಾವಾಗ?
 * 1739 ರಲ್ಲಿ.

50) "ದಿವಾನಿ" ಎಂದರೆ-----.
 * ಭೂಕಂದಾಯವನ್ನು ಸಂಗ್ರಹಿಸುವ ಹಕ್ಕು.

51) ಬಕ್ಸಾರ್ ಕದನ ನಡೆದದ್ದು ಯಾವಾಗ?
 * 1764.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...