Saturday, August 15, 2020

ಈರುಳ್ಳಿ ತಿನ್ನುವುದರಿಂದ ಏನು ಲಾಭವಿದೆ ಗೊತ್ತೇ...?

ನಮ್ಮ ಮನೆಯಲ್ಲಿ ಮಾಡುವ ಅಡುಗೆಯಲ್ಲಾಗಲಿ ಅಥವಾ ಹೊರಗಡೆ ಎಲ್ಲೋ ಮಾಡುವ ಅಡುಗೆಯಲ್ಲಾಗಲಿ ಈರುಳ್ಳಿ ತುಂಬಾ ಮುಖ್ಯವಾದ ಪಾತ್ರವಹಿಸುತ್ತದೆ. ಮಾಂಸಾಹಾರವನ್ನು ಸೇವಿಸುವವರು ಅಥವಾ ಸೇವಿಸದೆ ಇರುವವರು ಕೂಡ ಈರುಳ್ಳಿಯನ್ನು ಸೇವಿಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರದಲ್ಲಿರುವ ಎಲ್ಲಾ ಭಾಗಗಳನ್ನು ಶುದ್ಧಿಗೊಳಿಸುತ್ತದೆ. ಹಾಗೆಯೇ ಈರುಳ್ಳಿಯಲ್ಲಿ ಕ್ಯಾಲ್ಸಿಯಮ್, ಐರನ್, ವಿಟಮಿನ್ ಸಿ ಅಧಿಕವಾಗಿರುತ್ತದೆ ನಮ್ಮ ಶರೀರದಲ್ಲಿನ ರಕ್ತಪರಿಚಲನೆ ಚೆನ್ನಾಗಿ ಆಗಬೇಕಂದ್ರೆ ನಾವು ಈರುಳ್ಳಿಯನ್ನು ಸೇವಿಸಲೇಬೇಕಾಗುತ್ತದೆ. ತುಂಬಾ ಮಂದಿ ಈರುಳ್ಳಿಯನ್ನು ಅಲ್ಲಗಳೆಯುತ್ತಿರುತ್ತಾರೆ. ಆದರೆ, ಆವರಿಗೆ ಈ ಈರುಳ್ಳಿಯ ಮಹತ್ವ ಗೊತ್ತಿದ್ದರೆ ಅವರು ಹೀಗೆ ಮಾಡುವುದಿಲ್ಲ ಇನ್ನೂ ಈರುಳ್ಳಿಯನ್ನು ಸಲಾಡ್ ನಲ್ಲಿ ಅಥವಾ ಅಡುಗೆಯಲ್ಲಾಗಲಿ ಸೇವಿಸಬಹುದು.

ಈರುಳ್ಳಿಯ ರಸವನ್ನು ಎಣ್ಣೆಯ ಜೊತೆ ಮಿಶ್ರಣ ಮಾಡಿ ಕೀಲು ನೋವಿರುವ ಜಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಕೀಲು ನೋವು ತಕ್ಷಣದಲ್ಲಿ ಉಪಶಮನವಾಗುತ್ತದೆ. ಇನ್ನು ಎಲ್ಲಾ ವರ್ಗದ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಕೂದಲು ಉದುರುವುದು, ಇದರಿಂದ ಬಹಳ ಜನರು ಬೇಸತ್ತುಹೋಗಿದ್ದಾರೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಈರುಳ್ಳಿ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆ ಕೂದಲಿಗೆ ಮಸಾಜ್ ಮಾಡುವುದರಿಂದ ತಲೆ ಹೊಟ್ಟು ಹಾಗೂ ಕೂದಲು ಉದುರುವಿಕೆಯ ಸಮಸ್ಯೆ ಎರಡೂ ನಿಯಂತ್ರಣಕ್ಕೆ ಬರುವುದು.

ಇನ್ನು ಎಲ್ಲಾ ಹಂತದ ಮನುಷ್ಯರಲ್ಲಿ ಸರ್ವೇಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಕಿಡ್ನಿ ಸ್ಟೋನ್ ಸಮಸ್ಯೆ. ಈರುಳ್ಳಿಯು ಕಿಡ್ನಿ ಸ್ಟೋನ್ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಕರಗಿಹೋಗುತ್ತದೆ. ಇನ್ನು ಈರುಳ್ಳಿ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವುದಕ್ಕೆ ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿರುವ ಫಾಸ್ಫರಸ್ ಆಸಿಡ್ ರಕ್ತ ಶುದ್ಧಿಗೊಳ್ಳಲು ಉಪಯುಕ್ತವಾಗುತ್ತದೆ. ಇಷ್ಟಲ್ಲದೆ ಈರುಳ್ಳಿಯು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ದೇಹದಲ್ಲಿನ ಕೆಟ್ಟ ಬೊಜ್ಜು ಕಡಿಮೆ ಮಾಡುತ್ತದೆ. ಪ್ರತಿದಿನ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ ಮತ್ತು ಅವುಗಳನ್ನು ಮತ್ತೆ ಬೆಳೆಯದ ಹಾಗೆ ನಿಯಂತ್ರಿಸುತ್ತದೆ. ಇನ್ನು ಹಸಿ ಈರುಳ್ಳಿ ತಿನ್ನುವುದರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚುವುದು.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...