Sunday, August 9, 2020

Health Tips

-ಬೇವಿನ ಎಲೆಯನ್ನು ಮತ್ತು ಅಗಸೆ ಬೀಜವನ್ನು ಪೇಸ್ಟ್‌ ಮಾಡಿ ಬಿಸಿ ಮಾಡಿ ಉಗುರು ಸುತ್ತು ಆದ ಬೆರೆಳಿಗೆ ಲೇಪ ಮಾಡಿ ಕಟ್ಟಿದರೆ ತಕ್ಷ ಣ ನೋವು ಕಡಿಮೆಯಾಗುತ್ತದೆ.


-ಅಕ್ಕಿ ಹಿಟ್ಟನ್ನು ಅಗಸೆ ಎಣ್ಣೆ ಜತೆ ಕಲಸಿ ಸ್ವಲ್ಪ ಬಿಸಿ ಮಾಡಿ ಲೇಪ ಮಾಡಿದರೆ ಉಗುರು ಸುತ್ತು ಗುಣವಾಗುತ್ತದೆ.

-ಬೆರಳು ಊದಿದ್ದರೆ ನುಗ್ಗೆ ಸೊಪ್ಪನ್ನು ಸೈಂಧವ ಉಪ್ಪಿನ ಜತೆ ರುಬ್ಬಿ ಬೆರಳಿಗೆ ಕಟ್ಟಿದರೆ ಊತ ಬೇಗ ಕಡಿಮೆಯಾಗುತ್ತದೆ.


-ಅಳಲೆ ಕಾಯಿ ಪುಡಿಗೆ ಹುಣಸೆ ಹಣ್ಣಿನ ರಸ ಬೆರೆಸಿ ಚೆನ್ನಾಗಿ ಕಲಸಿ ಬೆರಳಿಗೆ ಲೇಪ ಮಾಡಿ ಬಟ್ಟೆ ಕಟ್ಟಿದರೆ ಕೀವು ಹೊರಗೆ ಬಂದು ನೋವು ಬೇಗ ಕಡಿಮೆಯಾಗುತ್ತದೆ.

-ವೀಳ್ಯೆದೆಲೆಯನ್ನು ಬಿಸಿ ಮಾಡಿ ಬೆರಳಿಗೆ ಕಟ್ಟಿದರೆ ಉಗುರು ಸುತ್ತು ಬೇಗ ಗುಣವಾಗುತ್ತದೆ.


-ದಿನಕ್ಕೆ 4ರಿಂದ 5 ಬಾರಿ ತ್ರಿಫಲಾ ಕಷಾಯದಿಂದ ಬೆರಳನ್ನು ತೊಳೆದು ಬಟ್ಟೆಯಲ್ಲಿ ಒರೆಸಿದರೆ ಉಗುರು ಸುತ್ತು ಶಮನವಾಗುತ್ತದೆ.

-ಜೇಷ್ಠಮಧು ಪುಡಿಗೆ ಹಸುವಿನ ತುಪ್ಪ ಹಾಕಿ ಕಲಸಿ ಉಗುರು ಸುತ್ತು ಇರುವ ಬೆರಳಿಗೆ ಲೇಪ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.


-ಅರಿಶಿನ ಪುಡಿಯನ್ನು ಬೇವಿನ ಎಣ್ಣೆ ಜತೆ ಕಲಸಿ ಬೆರಳಿಗೆ ಲೇಪ ಮಾಡಿದರೂ ಪ್ರಯೋಜನವಿದೆ.

-ಉಗುರು ಸುತ್ತು ಇರುವ ಬೆರಳಿಗೆ ಉನ್ಮತ್ತಿ ಎಲೆಗೆ ಜೇನುತುಪ್ಪ ಹಚ್ಚಿ ಬೆರಳಿಗೆ ಕಟ್ಟಿದರೆ ಬೆರಳಿನಲ್ಲಿ ಇರುವ ಕೀವು ಹೊರ ಬಂದು ನೋವು, ಊತ ಕಡಿಮೆಯಾಗುತ್ತದೆ.


-ನಿಂಬೆ ಹಣ್ಣಿನಲ್ಲಿ ಸಣ್ಣ ತೂತು ಮಾಡಿ ಅದರೊಳಗೆ ಅರಿಶಿನ ಮತ್ತು ಸೈಂಧವ ಉಪ್ಪನ್ನು ತುಂಬಿ. ಬೆರಳನ್ನು ನಿಂಬೆ ಹಣ್ಣಿನ ಒಳಗೆ 3 ರಿಂದ 6 ಗಂಟೆಗಳು ಇಟ್ಟರೆ ಉಗುರು ಸುತ್ತು ಬೇಗ ಶಮನವಾಗುತ್ತದೆ .

ಡಾ. ಸುಚೇತಾ ಜಯರಾಮ್‌

1 comment:

OM CREATIVE WORK said...
This comment has been removed by the author.

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...