Monday, May 25, 2020

ಪ್ರಣಾಮ/ ನಮಸ್ಕಾರದ ಪ್ರಾಮುಖ್ಯತೆ

ಮಹಾಭಾರತದ ಯುದ್ಧ ನಡೆಯುತ್ತಿತ್ತು. ಒಂದು ದಿನ, ದುರ್ಯೋಧನನ ವಿಡಂಬನೆ, ಅವಮಾನದಿಂದ  ನೊಂದಿರುವ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾರೆ: "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"

ಭೀಷ್ಮರ ಘೋಷಣೆ ವಿಚಾರ ತಿಳಿದ ಪಾಂಡವರ ಶಿಬಿರದಲ್ಲಿ ಆತಂಕ ಮನೆಮಾಡಿತ್ತು.

ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಪ್ರತಿಯೊಬ್ಬರೂ ಅತ್ಯಂತ ಕೆಟ್ಟ ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಿದ್ಧರು. 

ನಂತರ ಶ್ರೀ ಕೃಷ್ಣ ದ್ರೌಪದಿಗೆ, ಈಗ ನನ್ನೊಂದಿಗೆ ಬಾ  ಎಂದು ನೇರವಾಗಿ ಭೀಷ್ಮ ಪಿತಾಮಹನ ಶಿಬಿರಕ್ಕೆ ಕರಕೊಂಡು ಹೋದ.

ಶಿಬಿರದ ಹೊರಗೆ ನಿಂತು ದ್ರೌಪದಿಗೆ – “ಒಳಗೆ ಹೋಗಿ ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದ.

ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು -    "ಅಖಂಡ ಸೌಭಾಗ್ಯವತಿಭವ" ಎಂದು ಆಶೀರ್ವದಿಸಿ, ನಂತರ ದ್ರೌಪದಿಯನ್ನು ಕೇಳಿದರು !!

"ಮಗಳೇ, ಇಂತಹ ಅಪರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ? ಶ್ರೀ ಕೃಷ್ಣ ನಿನ್ನನ್ನು ಇಲ್ಲಿಗೆ  ಕರೆತಂದರಾ"? 

ಆಗ ದ್ರೌಪದಿ ಹೀಗೆ ಹೇಳಿದಳು - "ಹೌದು. ಅವರು ಶಿಬಿರದ ಹೊರಗೆ ನಿಂತಿದ್ದಾರೆ" 

ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. 

"ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ  ಕತ್ತರಿಸಲು ಶ್ರೀ ಕೃಷ್ಣನಿಗೆ ಮಾತ್ರ ಸಾಧ್ಯ!"

ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು - "ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದರೆ, ನಿನ್ನ ಗಂಡಂದಿರಿಗೆ ಜೀವದಾನ ಸಿಕ್ಕಿತು. ನೀನು ಧೃತರಾಷ್ಟ್ರ, ದ್ರೋಣಾಚಾರ್ಯ ಎಲ್ಲರಿಗೂ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಶ್ಯಾಸನ ಇತ್ಯಾದಿಯವರ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವೇ ಆಗುತ್ತಿರಲಿಲ್ಲ".

..... ಅಂದರೆ ...... 

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -
"ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"

"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"

ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.

"ವಿನಂತಿಸಿ, ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ 
ಮನೆ ಸ್ವರ್ಗವಾಗುತ್ತದೆ."

ಏಕೆಂದರೆ: -
ನಮಸ್ಕಾರ ಪ್ರೀತಿ.
ನಮಸ್ಕಾರಗಳು ಶಿಸ್ತು.
ನಮಸ್ಕಾರ ಶೀತಲತೆ.
ನಮಸ್ಕಾರ ಗೌರವವನ್ನು ಕಲಿಸುತ್ತವೆ.
ನಮಸ್ಕಾರದಿಂದ ಸುವಿಚಾರ ಬರುತ್ತದೆ.
ನಮಸ್ಕಾರ ಬಾಗುವುದನ್ನು ಕಲಿಸುತ್ತದೆ.
ನಮಸ್ಕಾರ ಕೋಪವನ್ನು ಅಳಿಸುತ್ತದೆ.
ನಮಸ್ಕಾರ ಅಹಂನ್ನು ಅಳಿಸುತ್ತದೆ.
ನಮಸ್ಕಾರ ನಮ್ಮ ಸಂಸ್ಕೃತಿ.!! 

ಅಬ್ಬಬ್ಬಾ ಎಷ್ಟು ಸಮೃದ್ಧವಾಗಿದೆ ನನ್ನ ಹೆಮ್ಮೆಯ ಭಾರತ..!! ಧನ್ಯೋಸ್ಮಿ..!!*🙏❤️🙏*

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...