Friday, September 4, 2020

ಕೇದಿಗೆಯ ಕರಾಮತ್ತು

ಎಲ್ಲರಿಗೂ ಚಿರಪರಿಚಿತವಾದ ಕೇದಿಗೆ ಹೂವು, ಕೇವಲ ದೇವರ ಪೂಜೆಗೆ ಮಾತ್ರ ಸೀಮಿತವಲ್ಲ, ಔಷಧವಾಗಿಯೂ ಉಪಯೋಗಿಸಬಹುದು. ಕೇದಿಗೆ ಹೂವು ಬಿಳಿ ಹಾಗೂ ಹಳದಿ ಬಣ್ಣ ಹೊಂದಿರುತ್ತದೆ. ಸುವಾಸನೆಯಿಂದಲೇ ಗಮನ ಸೆಳೆಯುವ ಇದರ ತೆನೆ, ಪಕಳೆ, ಬೇರು ಎಲ್ಲವೂ ಆರೋಗ್ಯ ರಕ್ಷಣೆಯ ಕೆಲಸ ಮಾಡುತ್ತವೆ. ಕೇದಿಗೆಗೆ ಕೆಮ್ಮು , ದಮ್ಮು , ಕಫದ ವಿಕಾರ, ಅತಿ ರಕ್ತಸ್ರಾವ ಇನ್ನಿತರ ವಾತ ವಿಕಾರಗಳನ್ನು ನಾಶಪಡಿಸುವ ಗುಣವಿದೆ. ಇದನ್ನು ತಜ್ಞರ ಸಲಹೆಯಂತೆ ಸಮರ್ಪಕ ವಿಧಾನದಲ್ಲಿ ಸೇವಿಸಬೇಕು.
ಕೇದಿಗೆ ಬೇರನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಸೇವಿಸಿದರೆ ಹೆಣ್ಣು ಮಕ್ಕಳಲ್ಲಿ ಕಾಡುವ ಮಾಸಿಕ ಅಧಿಕ ರಕ್ತಸ್ರಾವವು ಕಡಿಮೆಯಾಗುತ್ತದೆ.
ಅಜೀರ್ಣ, ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರೆ ಕೇದಿಗೆಯ ತೆನೆಯನ್ನು ಸಕ್ಕರೆ ಮತ್ತು ತುಪ್ಪದೊಂದಿಗೆ ಸೇವಿಸಿ. ಭೇದಿ ನಿಲ್ಲುತ್ತದೆ ಮತ್ತು ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಕೇದಿಗೆ ಹೂವಿನ ಪಕಳೆಗಳನ್ನು ಒಣಗಿಸಿ ಸುಟ್ಟು ಬೂದಿ ಮಾಡಬೇಕು. ಆ ಬೂದಿಯನ್ನು 1/2 ಚಮಚ ಹರಳೆಣ್ಣೆ ಮತ್ತು ಜೇನುತುಪ್ಪ ಕಲಸಿ ಸೇವಿಸಿದರೆ ಹೊಟ್ಟೆ ನೋವು ವಾಸಿಯಾಗುತ್ತದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...