Thursday, March 16, 2023

ಭಾವಾರ್ಥ ರಾಮಾಯಣವನ್ನು ಬರೆದವರು ಯಾರು?

 ಮರಾಠಿ ಭಾಷೆ ಬಹು ಸಮೃದ್ಧ ಸಾಹಿತ್ಯ ಹೊಂದಿರುವ ಭಾಷೆ ಎಂದರೆ ತಪ್ಪಾ ಗಲಾರದು. NSD ಗೆ ಮರಾಠಿ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಮರಾಠಿಯಲ್ಲಿ ತಳೆದಂತಹ ಆಧುನಿಕ ಪರಿಕಲ್ಪನೆಯ ನಾಟಕಗಳು ಅತ್ಯ ಮೂಲ್ಯ ಎಂದು ನನಗನ್ನಿಸಿದೆ. ಉದಾ: ನಾನು ನೋಡಿದ ಗಾಂಧಿ ವಿರುದ್ಧ ಗಾಂಧಿ..ಹೀಗೆ ಅಲ್ಲಿಯ ಸಾಹಿತಿಗಳು ಬಹಳ ಮುಂದಾಲೋಚನೆ ಹೊಂದಿರುವಂತಹವರು ಎಂದರೆ ತಪ್ಪಾಗಲಾರದು.

ಭಕ್ತಿ ಚಳುವಳಿಯಲ್ಲಿ ಮರಾಠಿ ಸಾಹಿತ್ಯ ಹುಲುಸಾಗಿ ಬೆಳೆಯಿತು.

16ನೇ ಶತಮಾನದಲ್ಲಿ 1533 -1599=66 ವರ್ಷಗಳ ಕಾಲ ಬದುಕಿದ್ದ ಸಂತ ಏಕನಾಥರು - ಭಕ್ತಿಚಳುವಳಿಯ ಕಾಲದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಎಂದರೆ ತಪ್ಪಾಗಲಾರದು. ತಬ್ಬಲಿಯಾಗಿದ್ದೂ ಕೂಡ ಅಜ್ಜ-ಮಾವ- ನಾಮ ದೇವರು ಹಾಕಿಕೊಟ್ಟ ದಾರಿಯಲ್ಲಿ ಜ್ಞಾನ ದೇವರು ಹಾಕಿಕೊಟ್ಟ ಸಂಸ್ಕಾರದಲ್ಲಿ ಬೆಳೆದ ಇವರು- ಅಲೌ ಕಿಕ ಆಧ್ಯಾತ್ಮದ ಹಾದಿಯಲ್ಲಿ ಬೆಳೆದು ನಿಂತವರು .

ಸಂಸ್ಕೃತದ -ಭಾಗವತ ಪುರಾಣವನ್ನು "ಏಕನಾಥಿ ಭಾಗವಕ ಪುರಾಣ" ಎ೦ದು ರೂಪಾಂತರಿಸಿಬರೆದವರು.

ರಾಮಾಯಣವನ್ನು - ೨೫, ೫೦೦ ಶ್ಲೋಕಗಳುಳ್ಳ ರಾಮಾ ಯಣದ ರೂಪಾಂತರವಾಗಿ " ಭಾವಾರ್ಥರಾಮಾಯಣ" ಎ೦ದು ರೂಪಾಂತರಿಸಿ ಬರೆದವರು.

ಭಾಗವತವನ್ನು ಆಧರಿಸಿ ರುಕ್ಮಿಣಿ ಸ್ವಯಂವರ ಎಂದು ಬರೆದವರು.

ಹಸ್ತ ಮೂಲಕ -ಶಂಕರಾಚಾರ್ಯರ ಶ್ಲೋಕಗಳನ್ನು ಆಧರಿಸಿ ಅಭಂಗ ಶೈಲಿಯಲ್ಲಿ ಬರೆದವರು.

ಜ್ಞಾನೇಶ್ವರಿ - ಎಂಬ ಪ್ರಖ್ಯಾತವಾದ ಕಾವ್ಯ ಸಂಶೋಧಿಸಿ ಬರೆದವರಾಗಿದ್ದಾರೆ.

ಭಾವಾರ್ಥ ದೀಪಿಕ - ಎನ್ನುವುದು ಅವರ ಪ್ರಖ್ಯಾತ ಕೃತಿಯಾಗಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...