ಮಧುರೈ ಮೀನಾಕ್ಷಿ ಪುರಾಣ ಹಿನ್ನೆಲೆ

SANTOSH KULKARNI
By -
2 minute read
0

 

ಮಧುರೈ ರಾಜ್ಯದ ರಾಜನದ ಮಲಯಧ್ವಜ ಪಾಂಡ್ಯ ರಾಜನ ಹೆಂಡತಿಯಾದ ಕಾಂಚನಮಲೈ ರಾಣಿಗೆ ಕನಸಿನಲ್ಲಿ ( ಆಧಿಶಕ್ತಿ ಪಾರ್ವತಿ ) ಬಂದು ನಾನು ನಿನ್ನ ಮಗಳಾಗಿ ಬರುವೆ ಎಂದು ಹೇಳಿರುತ್ತಾಳೆ..

ಎಷ್ಟೋ ವರ್ಷಗಳು ಆದರೂ ಕೂಡ ಮಲಯಧ್ವಜ ರಾಜನಿಗೆ ಕಾಂಚನಮಲೈ ಇಬ್ಬರು ದಂಪತಿಗಳಿಗೆ ಮಕ್ಕಳ ಭಾಗ್ಯ ಇರುವುದಿಲ್ಲ.. ಹೀಗೆ ಆದ್ರೆ ರಾಜ್ಯದ ಗತಿ ಏನು? ಎಂಬ ಚಿಂತೆ ರಾಜ ರಾಣಿಗೆ ಬರುತ್ತದೆ.

ಹಾಗಾಗಿ ಅವರು ಒಬ್ಬ ಮಗನಿಗಾಗಿ ಪುತ್ರ ಕಾಮೇಷ್ಠಿ ಯಜ್ಞವನ್ನು ಮಾಡುತ್ತಾರೆ.. ಆದರೆ ಅದರಿಂದ ಒಬ್ಬಳು 3 ವರ್ಷದ ಹುಡುಗಿಯೊಬ್ಬಳು ಆ ಯಜ್ಞ ಕುಂಡದಿಂದ ಹೊರಗೆ ಬರುತ್ತಾಳೆ ಅವಳಿಗೆ 2 ರ ಬದಲು 3 ಸ್ತನಗಳು ಇರುತ್ತದೆ ಇದನ್ನು ನೋಡಿದ ರಾಜ ರಾಣಿಗೆ ಆಶ್ಚರ್ಯವಾಗುತ್ತದೆ..

ಆಗ ಒಂದು ಅಶರೀರವಾಣಿ ಕೇಳಿಸುತ್ತೆ

ಮಲಯಧ್ವಜ ರಾಜನೇ ಚಿಂತಿಸಬೇಡ ಇವಳು ಸಾಮಾನ್ಯ ಹುಡುಗಿಯಲ್ಲ ( ಆಧಿಶಕ್ತಿ ಜಗನ್ಮಾತೆ ಪಾರ್ವತಿಯೇ ನಿನ್ನ ಮಗಳಾಗಿ ಬಂದಿರುವಳು.. ಹಾಗೂ ಇವಳಿಗೆ

3 ಸ್ತನಗಳು ಇದೆ ಎಂದು ಚಿಂತಿಸಬೇಡ..

ಇವಳು ತನ್ನ ಬಾವಿ ಪತಿಯನ್ನು ನೋಡಿ ಗುರುತಿಸಿದಾಗ ಇವಳ 3 ನೇ ಸ್ತನವು ಮಾಯವಾಗುತ್ತದೆ ಹಾಗೂ ಇವಳನ್ನು ಗಂಡು ಮಗುವಿನ ಹಾಗೆ ಬೆಳೆಸು ಯುದ್ಧಭ್ಯಾಸ ಶಸ್ತ್ರಭ್ಯಾಸ ಕಲಿಸಿ ವೀರ ಯೋಧೆಯನ್ನಾಗಿ ಮಾಡು ಎಂದು ಆ ಆಶರೀರವಾಣಿಯು ಹೇಳುತ್ತೆ..

ಯಜ್ಞ ಕುಂಡದಿಂದ ಜನ್ಮ ಪಡೆದ ಈ ಹುಡುಗಿಗೆ ತುಂಬಾ ಕೈಗಳು ಇರುತ್ತವೆ ಹಾಗಾಗಿ ಮಲಯಧ್ವಜ ರಾಜನು ಇವಳಿಗೆ ( ತಡಾತಕೈ ) ಎಂದು ಹೆಸರಿಟ್ಟು ನಾಮಕರಣ ಮಾಡುತ್ತಾನೆ..

ಹಾಗೂ ಅವಳಿಗೆ ಎಲ್ಲ ರೀತಿಯ ವಿದ್ಯಾಭ್ಯಾಸ ಶಸ್ತ್ರಭ್ಯಾಸ ಯುದ್ಧಭ್ಯಾಸ ಎಲ್ಲವನ್ನು ಮಲಯಧ್ವಜ ರಾಜನು ಕಲಿಸಿ ಕೊಡುತ್ತಾನೆ.. " ತಡಾತಕೈ" ಆಧಿಶಕ್ತಿ ಪಾರ್ವತಿಯ ಅವತಾರವಾದ ಕಾರಣ ಎಲ್ಲ ರೀತಿಯ ವಿಧ್ಯೆ ಯುದ್ಧ ವಿಧ್ಯೆ ಎಲ್ಲವನ್ನು ಬೇಗ ಕಲಿತುಕೊಳ್ಳುತ್ತಾಳೆ..

( ತಡಾತಕೈಗೆ ಮೀನಾಕ್ಷಿ ಎಂಬ ಹೆಸರು ಹೇಗೆ ಬಂತು ನೋಡೋಣ )

ತಡಾತಕೈ ಬೆಳೆದು ಯುವತಿ ಆಗುತ್ತಾಳೆ ಅವಳ ತಂದೆ ಮಲಯಧ್ವಜ ರಾಜನ ನಂತರ ಇವಳನ್ನೇ ಸಿಂಹಾಸನದ ಮೇಲೆ ಕೂರಿಸಿ ಪಟ್ಟಾಭಿಷೇಕವನ್ನು ಮಾಡುತ್ತಾರೆ.. ಮಧುರೈ ರಾಜ್ಯದ ರಾಣಿ ಆಗುತ್ತಾಳೆ

" ಆ ಸಮಯದಲ್ಲಿ ಅಗಸ್ತ್ಯ ಋಷಿಗಳು ಅರಮನೆಗೆ ಬರುತ್ತಾರೆ ತಡಾತಕೈ ಅಗಸ್ತ್ಯ ಋಷಿಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಳ್ಳುತ್ತಾಳೆ..

( ತಡಾತಕೈ ಕಣ್ಣುಗಳು ಮೀನಿನ ಕಣ್ಣುಗಳ ಹಾಗೆ ಸುಂದರವಾಗಿ ಇದ್ದವು..

ಹಾಗಾಗಿ ಅಗಸ್ತ್ಯ ಋಷಿಗಳು ಅವಳಿಗೆ ( ಮೀನಾಕ್ಷಿ )

ಎಂದು ಮತ್ತೊಮ್ಮೆ ಮರುನಾಮಕರಣ ಮಾಡುತ್ತಾರೆ

ಹೀಗಾಗಿ ( ತಡಾತಕೈಗೆ - ಮೀನಾಕ್ಷಿ ) ಎಂಬ ಹೆಸರು ಬರುತ್ತದೆ.

ನಂತರ ಎಲ್ಲರೂ ತಡಾತಕೈಯನ್ನು ಮೀನಾಕ್ಷಿ ಎಂದೆ ಕರೆಯಲು ಶುರು ಮಾಡಿದರು

ಮೀನಾ + ಅಕ್ಷಿ ಅಕ್ಷಿ ಎಂದರೆ ಕಣ್ಣು

( ಮೀನಾಕ್ಷಿ )

ಹೀಗೆ ಮೀನಾಕ್ಷಿಯು ತನ್ನ ಮಧುರೈ ರಾಜ್ಯವನ್ನು ಚೆನ್ನಾಗಿ ಲಾಲನೆ ಪಾಲನೆ ಮಾಡುತ್ತ ತನ್ನದೇ ಯುದ್ಧ ಸೈನ್ಯವನ್ನು ರಚಿಸಿದಳು ತನ್ನ ಯುದ್ಧ ಸೈನ್ಯಕ್ಕೆ

( ಸುಮತಿ ಎಂಬ ಸ್ತ್ರೀ ಯನ್ನು ಸೇನಾಧೀಪತಿಯನ್ನಾಗಿ ಮಾಡಿದಳು.. ಮೀನಾಕ್ಷಿಯು ತನ್ನ ಯುದ್ಧ ಸೈನ್ಯದ ಜೊತೆಗೆ ಸಾಗಿ ಭೂಮಿ ಮೇಲೆ ಇರುವ ಎಲ್ಲ ರಾಜ್ಯವನ್ನು ವಶಪಡಿಸಿ ಕೊಳ್ಳುತ್ತಾಳೆ..

ನಂತರ ತನ್ನ ಎಲ್ಲ ಕೈಗಳನ್ನು ಶಸ್ತ್ರ ಹಿಡಿದು ಎಲ್ಲ ಲೋಕಗಳ ಮೇಲೆ ಆಕ್ರಮಣ ಮಾಡುತ್ತಾಳೆ

ಅವಳು ಎಲ್ಲ ಲೋಕಕ್ಕೆ ಹೋಗಿ ಅಲ್ಲಿ ಎಲ್ಲರನ್ನು ಸೋಲಿಸಿ ಗೆದ್ದು ಬರುತ್ತಾಳೆ ನಂತರ

( ಸ್ವರ್ಗ ಲೋಕ, ವೈಕುಂಠ, ಬ್ರಹ್ಮ ಲೋಕ ಈ ಮೂರು ಲೋಕಕ್ಕೆ ಹೋಗಿ ಅಲ್ಲಿ ಆ ಲೋಕವನ್ನು ಗೆಲ್ಲುತ್ತಾಳೆ

ನಂತರ ಎಲ್ಲ ಕಡೆ ಹೋಗಿ ಎಲ್ಲ ಗೆದ್ದು ಆದಮೇಲೆ ಕೊನೆಗೆ ಕೈಲಾಸಕ್ಕೆ ಹೋಗುತ್ತಾಳೆ ಅಲ್ಲಿ ನಂದಿ ಹಾಗೂ ಶಿವನ ಗಣಗಳ ಜೊತೆ ಹೋರಾಡಿ ಅವರನ್ನು ಸೋಲಿಸುತ್ತಾಳೆ ಕೊನೆಗೆ ಮುಂದೆ ಹೋದಾಗ ಅಲ್ಲಿ ಶಿವನು ( ಸುಂದರೇಶ್ವರ ) ರೂಪದಲ್ಲಿ ಕುಳಿತಿರುತ್ತಾನೆ

( ಶಿವನನ್ನು ನೋಡಿದ ಕೂಡಲೇ ಇವನೇ ನನ್ನ ಪತಿ ಎಂದು ಮೀನಾಕ್ಷಿಗೆ ಗೊತ್ತಾಗುತ್ತದೆ ಕೂಡಲೇ ಅವಳ

3 ನೇಯ ಸ್ತನವು ಮಾಯವಾಗುತ್ತದೆ ನಂತರ ಅವಳು ಶಿವನ ಬಳಿ ಹೋಗಿ ವಿವಾಹ ವಿಚಾರ ಮಾತಾಡುತ್ತಾಳೆ ಶಿವನು ಸರಿ ಎಂದ..

ನಂತರ ಮೀನಾಕ್ಷಿಯು ಶಿವನನ್ನು ಕರೆದುಕೊಂಡು ಭೂ ಲೋಕದಲ್ಲಿರುವ ಮಧುರೈ ರಾಜ್ಯಕ್ಕೆ ಬರುತ್ತಾಳೆ..

ಹೀಗೆ ಆಧಿಶಕ್ತಿ ಪಾರ್ವತಿಯು ಮೀನಾಕ್ಷಿಯಾಗಿ

ಮಹಾದೇವ ಶಿವನು ಸುಂದರೇಶ್ವರನಾಗಿ

ಇಬ್ಬರು ಅಲ್ಲಿ ವಿವಾಹವಾಗುತ್ತಾರೆ..

ವಿವಾಹಕ್ಕೆ ಎಲ್ಲ ದೇವಾನು ದೇವತೆಗಳು ಬರುತ್ತಾರೆ

( ವಿಷ್ಣುದೇವನು ಮೀನಾಕ್ಷಿಯ ಸಹೋಧರನಾಗಿ ವಿವಾಹವನ್ನು ಮುಂದೆ ನಡೆಸಿ ಕೊಡುತ್ತಾನೆ..

( ಬ್ರಹ್ಮದೇವನು ಪುರೋಹಿತನಾಗಿ ವಿವಾಹ ಮಾಡಿಸುತ್ತಾನೆ.. ಎಲ್ಲ ದೇವಾನು ದೇವತೆಗಳು ದೇವರುಗಳು ಎಲ್ಲ ಅಕ್ಷತೆ.. ಹೂ ಮಳೆಯನ್ನು ಸುರಿಸುತ್ತಾರೆ.

ಹೀಗೆ ಆಧಿಶಕ್ತಿ ಪಾರ್ವತಿಯು ಮೀನಾಕ್ಷಿಯಾಗಿ

ಶಿವನು ಸುಂದರೇಶ್ವರನಾಗಿ ಇಬ್ಬರು ಮಧುರೈ ಕ್ಷೇತ್ರದಲ್ಲಿ ನೆಲೆಸುತ್ತಾರೆ.

Post a Comment

0Comments

Post a Comment (0)