ಜೇನುನೊಣ ಕಡಿತದ ನೋವನ್ನು ಶಮನಗೊಳಿಸಲು ಏನು ಮಾಡಬೇಕು? ಇದಕ್ಕೆ ಮನೆಮದ್ದು ಏನು?

SANTOSH KULKARNI
By -
0

 

ಜೇನು ನೊಣ ಕಡಿತದ ನೋವು ಶಮನಗೊಳಿಸುವ ಮನೆಮದ್ದು ಬಹುಶಃ ಇಲ್ಲ.

ಆದರೆ ಅದರ ನಂಜು ನಿವಾರಣೆಗೆ ಅರಿಸಿನ ಅತ್ಯಂತ ಪರಿಣಾಮಕಾರಿ ಮನೆಮದ್ದು.

  • ಮೊದಲನೆಯದಾಗಿ ಜೇನು ನೊಣ ಕಚ್ಚಿದ ಜಾಗದಲ್ಲಿ ಇರುವ ನೊಣದ ಅಂಬನ್ನು ತೆಗೆಯಬೇಕು.
  • ನಂತರ ಆ ಜಾಗಕ್ಕೆ ಅರಿಸಿನದ ಕೊಂಬನ್ನು ಜಜ್ಜಿ ಅಥವಾ ತೇದು ಹಚ್ಚಬೇಕು. ಹಾಗೂ ಅರಿಸಿನದ ಕೊಂಬನ್ನು ತೇದು ಅಥವಾ ಜಜ್ಜಿ ಅದನ್ನ ನೀರಿನಲ್ಲಿ ಸೇರಿಸಿ ಕುಡಿಯಬೇಕು.
    • ಹಸಿ ಅರಿಸಿನದ ಕೊಂಬು ಉತ್ತಮ.
  • ಅರಿಸಿನದ ಕೊಂಬು ಇಲ್ಲದಿದ್ದರೆ ಅರಿಸಿನ ಪುಡಿಯಾದರೂ ಆದೀತು. ಅರಿಸಿನ ಪುಡಿಯನ್ನು ನೀರಿನಲ್ಲಿ ಕಲೆಸಿ ಹಚ್ಚಬೇಕು.
  • ಒಂದೆರಡು ಚಮಚ ಅರಿಸಿನ ಪುಡಿಯನ್ನು ಅರ್ಧ ಲೋಟ ನೀರಿನಲ್ಲಿ ಕಲೆಸಿ ಕುಡಿಯಬೇಕು.
  • ಈ ಔಷಧದಿಂದ ನಂಜು ಮತ್ತು ನೋವು ಒಂದು ದಿನದಲ್ಲಿ ಶಮನವಾಗುತ್ತದೆ.
  • ಇದನ್ನ ಎರಡು ಸಾರಿ ಮಾಡಿದರೆ ಸಾಕು.

ನಾಲ್ಕೈದು ಹುಳು ಕಚ್ಚಿದ್ದರೆ ಮಾತ್ರ ಈ ಔಷಧ ಸಾಕಾಗುತ್ತದೆ. ಇನ್ನೂ ಹೆಚ್ಚಿನ ಹುಳು ಕಚ್ಚಿದ್ದರೆ ಅಥವಾ ಹೆಜ್ಜೇನು ಕಚ್ಚಿದ್ದರೆ ಈ ಔಷಧ ಸಾಕಾಗುವುದಿಲ್ಲ. ವೈದ್ಯರ ಸಲಹೆ ಕಡ್ಡಾಯ.

ಇದನ್ನ ತಕ್ಷಣದ ಔಷಧವಾಗಿ ಉಪಯೋಗಿಸಬಹುದು ಅಷ್ಟೆ.

ಜೇನು ಹುಳುವಿನ ನಂಜು ಅತ್ಯಂತ ಅಪಾಯಕಾರಿ. ಅದು ಹೆಚ್ಚಾದರೆ ಪ್ರಾಣಕ್ಕೆ ಆಪತ್ತು ತರಬಹುದು. ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

Tags:

Post a Comment

0Comments

Post a Comment (0)